
ಕುಷ್ಟಗಿ:- ಕರ್ನಾಟಕ ಜನತಾ ಸೇನಾ ದಳ ಬೆಂಗಳೂರು ಇವರು ಕೊಡಮಾಡುವ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಸಂಗಮ ಸಮಾವೇಶದಲ್ಲಿ ಬೆಂಗಳೂರಿನ ಕನ್ನಡ ಭವನ ನಯನ ಸಂಭಾಗಣ ಜೆ.ಸಿ. ರಸ್ತೆ ಬೆಂಗಳೂರುನಲ್ಲಿ ಭಾರತ ಭಗವಾನ್ ಬುದ್ಧಶ್ರೀ ರಾಷ್ಟ್ರೀಯ ಪ್ರಶಸ್ತಿಗೆ ಕುಷ್ಟಗಿ ಪಟ್ಟಣದ ಸಮಾಜ ಸೇವಕರಾದ ಮೊಹನಲಾಲ್ ಜೈನ್ ಇವರು ಆಯ್ಕೆಯಾಗಿದ್ದಾರೆ.
ಇವರ ಸಮಾಜದ ಸೇವೆಯನ್ನು ಗುರುತಿಸಿ ಭಾರತ ಭಗವಾನ್ ಬುದ್ಧಶ್ರೀ ರಾಷ್ಟ್ರೀಯ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಗುತ್ತದೆ ಎಂದು ಮೊಹನಲಾಲ್ ಜೈನ್ ತಿಳಿಸಿದ್ದಾರೆ.
ಇವರನ್ನು ಆಯ್ಕೆ ಮಾಡಿದಕ್ಕೆ ಕುಷ್ಟಗಿ ತಾಲೂಕಿನ ಸ್ನೇಹಿತರ ಬಳಗ, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ಹಲವರು ಅಂಭಿನಂದಿಸಿ ಶುಭ ಹಾರೈಸಿದ್ದಾರೆ.
Comments are closed.