ಸೆಕ್ಷನ್ ೧೨೫ಎ ಪ್ರಜಾಕಾಯ್ದೆ ೧೯೫೧ ರಂತೆ ಶಾಸಕ ಜನಾರ್ಧನರೆಡ್ಡಿ ಅನರ್ಹಗೊಳಿಸಲು ಭಾರಧ್ವಾಜ್ ಒತ್ತಾಯ

Get real time updates directly on you device, subscribe now.

ಗಂಗಾವತಿ: ಸೆಕ್ಷನ್ ೧೨೫ಎ ಪ್ರಜಾಕಾಯ್ದೆ ೧೯೫೧ ರಂತೆ ದೂರು ನೀಡಿದ ಶ್ಯಾಮ್‌ಪ್ರಸಾದ ಟಪಾಲ್ ಇವರ ಪ್ರಕರಣವನ್ನು ಶೀಘ್ರದಲ್ಲಿಯೇ ವಿಚಾರಣೆ ನಡೆಸಿ ಗಂಗಾವತಿ ಶಾಸಕ ಜನಾರ್ಧನರೆಡ್ಡಿಯವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಕ್ರಾಂತಿಚಕ್ರ ಬಳಗದ ರಾಜ್ಯಾಧ್ಯಕ್ಷ ಭಾರಧ್ವಾಜ್ ಪ್ರಕಟಣೆಯಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ತೆಲಂಗಾಣದ ಕೊತ್ತಗೊಡೆಮ್ ಎಂ.ಎಲ್.ಎ ವೆಂಕಟೇಶ್ವರರಾವ್ ಅವರನ್ನು ಕೇಂದ್ರ ಚುನಾವಣಾ ಆಯೋಗ ಸೆಕ್ಷನ್ ೧೨೫ಎ ಪ್ರಜಾಕಾಯ್ದೆ ೧೯೫೧ ರಡಿಯಲ್ಲಿ ಅನರ್ಹಗೊಳಿಸಿದ್ದು ಸ್ವಾಗತಾರ್ಹವಾಗಿದೆ. ಅದರಂತೆಯೇ ಗಂಗಾವತಿ ಶಾಸಕ ಜನಾರ್ಧನರೆಡ್ಡಿಯವರನ್ನು ಶ್ಯಾಮ್‌ಪ್ರಸಾದ ಟಪಾಲ್ ಇವರ ದೂರಿನ ಮೇರೆಗೆ ಅನರ್ಹಗೊಳಿಸಿ ಗಂಗಾವತಿ ಜನರಿಗೆ ನ್ಯಾಯಕೊಡಬೇಕೆಂದು ಒತ್ತಾಯಿಸುತ್ತೇವೆ.
ಕೇಂದ್ರದ ಚುನಾವಣಾ ಆಯೋಗ ಕೂಡಲೇ ಜನಾರ್ಧನರೆಡ್ಡಿಯವರ ಮೇಲೆ ಶ್ಯಾಮ್‌ಪ್ರಸಾದ ಟಪಾಲ್ ಇವರ ದೂರನ್ನು ಪರಿಶೀಲಿಸಿ ಜನಾರ್ಧನರೆಡ್ಡಿಯವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕೆಂದು ಕ್ರಾಂತಿಚಕ್ರ ಬಳಗ ಚುನಾವಣಾ ಆಯೋಗಕ್ಕೆ ಒತ್ತಾಯಿಸಿದೆ.

 

Get real time updates directly on you device, subscribe now.

Comments are closed.

error: Content is protected !!
%d bloggers like this: