ಮಲ್ಲಮ್ಮ ದೇವಸ್ಥಾನಕ್ಕೆ ನಾಲ್ಕು ಲಕ್ಷ ರುಪಾಯಿ ದೇಣಿಗೆ

Get real time updates directly on you device, subscribe now.

ಕೊಪ್ಪಳ

ನಗರದ ಕಿನ್ನಾಳ ರಸ್ತೆಯಲ್ಲಿರುವ  ಶ್ರೀ ಶಿವಶರಣೇ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಕೈಜೋಡಿಸಲು ರಡ್ಡಿ ಸಮಾಜದ ಸರ್ಕಾರಿ ನೌಕರರು 406100 ರುಪಾಯಿ    ದೇಣಿಗೆಯನ್ನು ಶನಿವಾರ  ನೀಡಿದ್ದಾರೆ.

ರಡ್ಡಿ ಸಮಾಜದ ಸರ್ಕಾರಿ ನೌಕರರು ತಲಾ ಐದು ಸಾವಿರ ರುಪಾಯಿಯಂತೆ ಸಂಗ್ರಹಿಸಿ, ನೀಡುವ ಮೂಲಕ ದೇವಸ್ಥಾನದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಕ್ಕೆ ಕೈಜೋಡಿಸಿದ್ದಾರೆ.

ಸಮಾಜದ ಹಿರಿಯರಾಜ ಎಸ್. ಬಿ. ನಾಗರಳ್ಳಿ,  ವೆಂಕರಡ್ಡಿ ವಕೀಲರು, ಹನುಮರಡ್ಡಿ  ಹಂಗನಕಟ್ಟಿ, ಹೇಮರಡ್ಡಿ ಬಿಸರಳ್ಳಿ, ಹಳ್ಳಿಕೇರಿ ಬಸವರಡ್ಡಿ, ವಿರುಪಾಕ್ಷಪ್ಪ ನವೋದಯ ಹಾಗೂ ರಡ್ಡಿ ಸಮಾಜದ ನೌಕರರ  ಇದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: