Get real time updates directly on you device, subscribe now.
ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಅವರ ಸ್ಮೃತಿ ದಿನದಂದು ಅವರ ಭಾವಚಿತ್ರಕ್ಕೆ ಗೌರವ ನಮನ ಸಲ್ಲಿಸಲಾಯಿತು.
ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ನವೀನಕುಮಾರ ಈ ಗುಳಗಣ್ಣವರ ರವರು ಮಾತನಾಡಿ:
ದೇಶದ ಅಖಂಡತೆಗೆ ಹೋರಾಟ ಮಾಡಿದ ಧೀಮಂತ ನಾಯಕ ಡಾ ಶ್ಯಾಮ ಪ್ರಸಾದ್ ಮುಖರ್ಜಿ. ನೆಹರು ಸರ್ಕಾರದ
ಜಮ್ಮು ಕಾಶ್ಮೀರಕ್ಕೆ 370 ವಿಶೇಷ ಸ್ಥಾನಮಾನವನ್ನು ವಿರೋಧಿಸಿದರು. ನೆಹರು ಮಧ್ಯಂತರ ಸರಕಾರಲ್ಲಿ ಸಚಿವರಾಗಿದ್ದ ಅವರು, ಸಂಸತ್ತಿನ ಒಳಗೆ ಮತ್ತು ಹೊರಗೆ ನೀಡುವದರ ವಿರುದ್ಧ ಹೋರಾಡಿದರು. ‘ ಏಕ ದೇಶ ಮೆ ಧೋ ವಿಧಾನ ಧೋ ಪ್ರಧಾನ್ ಧೋ ನಿಶಾನ್ ಎನ್ನುವ ಮೂಲಕ ಹೋರಾಟ ಮಾಡುತ್ತಾ ಬಲಿಧಾನ ಆದವರು.
ದೇಶದ ಅಖಂಡತೆ ಗೋಸ್ಕರ ಮತ್ತು 370 ರದ್ದೂಗೋಸವ ಗುರಿಯೊಂದಿಗೆ ಜನಸಂಘದ ಸ್ಥಾಪಿಸಿದರು.
ಅವರು ಹಾಕಿಕೊಟ್ಟ ತತ್ವ ಸಿದ್ದಂತ ದ ಅಡಿಯಲ್ಲಿ ಬಿಜೆಪಿ ಇವತ್ತು ರಾಷ್ಟದ ಹಿತಕ್ಕಾಗಿ ಕೆಲಸ ಮಾಡುತ್ತಿರುವ ಪಕ್ಷ. ದೇಶ ಮೊದಲು ನಂತರ ಪಕ್ಷ ನಂತರ ವ್ಯಕ್ತಿ ಅನ್ನುವ ತತ್ವದಡಿಯಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬ ಕಾರ್ಯಕರ್ತನಿಗೂ ಶ್ಯಾಮ ಪ್ರಸಾದ್ ಮುಖರ್ಜಿ ಪ್ರೇರಣೆ ಯಾಗಿದ್ದಾರೆ.
ಇಂದು ನಮ್ಮ ಹೆಮ್ಮಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಹಾಗೂ ಗೃಹ ಸಚಿವರಾದ ಅಮಿತ್ ಶಾಹ್ ಅವರು , ಜಮ್ಮು ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನ ವನ್ನು ರದ್ದು ಮಾಡಿ ಭಾರತ ಅಖಂಡತೆಯ ಕನಸು ಕಂಡಿದ್ದ ಡಾ ಶ್ಯಾಮ ಪ್ರಸಾದ್ ಮುಖರ್ಜಿ ಸಾಕಾರ ಗೊಳಿದ್ದು ಪ್ರತಿಯೊಬ್ಬ ಕಾರ್ಯಕರ್ತರಿಗೆ ಹೆಮ್ಮಯ ಸಂಗತಿ
ಸಂದರ್ಭದಲ್ಲಿ ಲೋಕಸಭಾ ಪರಾಜಿದ ಅಭ್ಯರ್ಥಿ ಡಾ. ಕೆ ಬಸವರಾಜ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ ಹೆಸರೂರ, ಪ್ರಮುಖರಾದ ರಮೇಶ ಕವಲೂರ, ಮಂಜುನಾಥ ನಾಡಗೌಡ್ರು, ಪುಟ್ಟರಾಜ ಚಕ್ಕಿ,ಶ್ರೀಮತಿ ಮಹಾಲಕ್ಷ್ಮಿ ಕಂದಾರಿ, ಶ್ರೀಮತಿ ರತ್ನಕುಮಾರಿ, ಶ್ರೀಮತಿ ಗೀತಾ ಮುತ್ತಾಳ, ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
Comments are closed.