ಮತ್ತೊಮ್ಮೆ ಮೋದಿಜೀ ಗೆಲುವಿಗಾಗಿ ಶ್ರಮ ಪಡಲು ಡಾ.ಬಸವರಾಜ್ ಕ್ಯಾವಟರ್ ಕರೆ

Get real time updates directly on you device, subscribe now.

ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಸಿಂಧನೂರು ವಿಧಾನಸಭಾ ಕ್ಷೇತ್ರದ ಬೂತ್ ವಿಜಯ ಅಭಿಯಾನ ಸಭೆಯಲ್ಲಿ ಭಾಗವಹಿಸಿ ಬಿಜೆಪಿಯ ಅಭ್ಯರ್ಥಿ ಡಾ.ಬಸವರಾಜ್ ಕ್ಯಾವಟರ್ ಮಾತನಾಡಿದರು ಸಭೆಯಲ್ಲಿ ಬೂತ್ ಗೆದ್ದರೆ ಕ್ಷೇತ್ರ ಗೆದ್ದಂತೆ ಎಂಬ  ಪಕ್ಷದ ಹಿರಿಯರ ಮಾತಿನಂತೆ, ಬೂತ್ ಮಟ್ಟದಿಂದ ಪದಾಧಿಕಾರಿಗಳ ತನಕ ಎಲ್ಲರಿಗೂ ಮತ್ತೊಮ್ಮೆ ಮೋದಿಜೀ ಅವರ ಗೆಲುವಿಗಾಗಿ ಶ್ರಮ ಪಡಲು ಕರೆ ನೀಡಿದರು

ಈ ಸಂದರ್ಭದಲ್ಲಿ ಕುಷ್ಟಗಿ ಶಾಸಕರು ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕರಾದ   ದೊಡ್ಡನಗೌಡ ಹೆಚ್ ಪಾಟೀಲ್, ಜೆಡಿಎಸ್ ಮಾಜಿ ಸಚಿವರಾದ   ವೆಂಕಟರಾವ್ ನಾಡಗೌಡ್ರು, ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಹೇಮಲತಾ ನಾಯಕ್, ಮಾಜಿ ಸಂಸದರಾದ   ಕೆ. ವಿರೂಪಾಕ್ಷಪ್ಪ, ನಗರ ಮಂಡಲ ಅಧ್ಯಕ್ಷರಾದ   ಮಲ್ಲಿಕಾರ್ಜುನ ಜಿನೂರು, ಗ್ರಾಮೀಣ ಮಂಡಲ ಅಧ್ಯಕ್ಷರಾದ   ವೆಂಕೋಬ ನಾಯಕ್,   ಬಸವರಾಜ್ ದಡೇಸಗೂರು,   ಪ್ರತಾಪಗೌಡ ಪಾಟೀಲ್,   ಕೆ ಕರಿಯಪ್ಪ,  ಸಿ ವಿ ಚಂದ್ರಶೇಖರ,   ರಾಜೇಶ್ ಹಿರೇಮಠ, ಬಳ್ಳಾರಿ ವಿಭಾಗದ ಸಹ ಪ್ರಭಾರಿ ಗಳು ಹಾಗೂ ಕ್ಲಸ್ಟರ್ ಪ್ರಮುಖರಾದ   ಚಂದ್ರಶೇಖರ ಪಾಟೀಲ ಹಲಗೇರಿ. ಸಹ ಉಸ್ತುವಾರಿಗಳಾದ   ಹೆಚ್.ಗಿರಿಗೌಡ್ರ, ಕೊಪ್ಪಳ ಬಿಜೆಪಿ ಜಿಲ್ಲಾ ಅಧ್ಯಕ್ಷರಾದ  ನವೀನ್ ಗುಳಗಣ್ಣನವರ್, ರಾಯಚೂರು ಜಿಲ್ಲಾ ಜೆಡಿಎಸ್ ಜಿಲ್ಲಾ ಅಧ್ಯಕ್ಷರಾದ   ಜಿ ವಿರೂಪಾಕ್ಷಪ್ಪ, ರಾಜ್ಯ ಜೆಡಿಎಸ್ ಉಪಾಧ್ಯಕ್ಷರಾದ   ಮಹಾಂತೇಶಗೌಡ, ಪ್ರಮುಖರಾದ   ಪ್ರಭಾಕರ ಚಿಣಿ,   ವಿರೂಪಾಕ್ಷಗೌಡ,  ಚಂದ್ರು ನಾಡಗೌಡ ಹಾಗೂ ಉಭಯ ಪಕ್ಷದ ಪ್ರಮುಖರು, ಪದಾಧಿಕಾರಿಗಳು, ಕಾರ್ಯಕರ್ತ   ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: