ಕಥೆ ಹೇಳಿ ಸಂಭ್ರಮಿಸಿದ ಮಕ್ಕಳು

Get real time updates directly on you device, subscribe now.


ಕೊಪ್ಪಳ : ಕೊಪ್ಪಳ ತಾಲೂಕಿನಕಿನ್ನಾಳ ಗ್ರಾಮ ಪಂಚಾಯತ ಹಾಗೂ ಜಿಲ್ಲಾಕೇಂದ್ರಗ್ರಂಥಾಲಯ ಕೊಪ್ಪಳ, ಸಂಯುಕ್ತಾಶ್ರಯದಲ್ಲಿ ಮಕ್ಕಳ ಗಟ್ಟಿಓದುಕಾರ್ಯಕ್ರಮಜರುಗಿತು. ಮಕ್ಕಳು ಸಂಭ್ರಮದಿಂದ ಪಾಲ್ಗೊಂಡರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಕೇಂದ್ರಗ್ರಂಥಾಲಯ ಕೊಪ್ಪಳದ ಮುಖ್ಯಗ್ರಂಥಾಲಯಾಧಿಕಾರಿಯಮನೂರಪ್ಪ ವಟಪರವಿ ಮಕ್ಕಳು ತಮ್ಮ ವಿದ್ಯಾರ್ಥಿಜೀವನದಿಂದಲೇ ಗ್ರಂಥಾಲಯಗಳನ್ನು ಬಳಸಿದರೆ ಉತ್ತಮ ನಾಗರಿಕರಾಗುತ್ತಾರೆ. ಗ್ರಂಥಾಲಯದಲ್ಲಿ ಮಕ್ಕಳಿಗೆ ಇ?ವಾಗುವಚಿತ್ರಕಥೆ, ಕಥೆ, ಶಿಶುಗೀತೆ ಪುಸ್ತಕಗಳೊಂದಿಗೆ, ಪತ್ರಿಕೆಗಳಲ್ಲಿನ ಮಕ್ಕಳ ಅಂಕಣಗಳು ನಿಮ್ಮಓದುವಿಕೆಗಾಗಿ ನಮ್ಮ ಗ್ರಂಥಾಲಯಗಳು ಸಿದ್ಧವಾಗಿವೆ, ಗ್ರಂಥಾಲಯಗಳನ್ನು ಬಳಸಿಕೊಳ್ಳಿ ಎಂದು ಮಾತನಾಡಿದರು.
ಕುವೆಂಪು ಶತಮಾನೋತ್ಸವ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ಗಟ್ಟಿಓದು, ಕಟ್ಟುಕಟ್ಟುಕಥೆಕಟ್ಟು, ಕ್ರಿಯಾತ್ಮಕ ಚಟುವಟಿಕೆಗಳನ್ನು ಮಾಡಿಸಲಾಯಿತು. ಮಕ್ಕಳಿಗೆ ಸಾಹಿತಿ, ಸಮೂಹ ಸಂಪನ್ಮೂಲ ವ್ಯಕ್ತಿ ಸುರೇಶ ಕಂಬಳಿ ಪುಟಾಣಿ ಗೊಂಬೆ, ಮಕ್ಕಳ ಕವನವನ್ನು ಹಾಡಿಸಿದರು. ಸಹ ಗ್ರಂಥಪಾಲಕ ನಾಗರಾಜನಾಯಕ ಡೊಳ್ಳಿನ ಯಾರಿಗೂಇದನ ಹೇಳಬಾರದು, ಎಲ್ಲಿರುವೆಎಂಟಾಣೆಆಯ್ದ ಮಕ್ಕಳ ಕವನಗಳನ್ನು ಮಕ್ಕಳೊಂದಿಗೆ ಹೇಳಿಸಿದರು.
ವಿಕೇಂದ್ರೀಕೃತತರಬೇತಿ ಸಂಯೋಜಕರಾದ ಹೆಚ್.ಎಸ್.ಹೊನ್ನುಂಚಿ ಮಕ್ಕಳಿಗೆ ಕೆಲ ಆಟಗಳನ್ನು ಆಡಿಸಿದರು. ಗಟ್ಟಿಓದುಕಾರ್ಯಕ್ರಮದಲ್ಲಿ ಭಾಗವಹಿಸಿದ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಮೂರನೇತರಗತಿಯಲ್ಲಿ ಸುರಭಿ, ಕೃ?, ಮಂದಾರ, ಅನುಶ್ರೀ ನಾಲ್ಕನೇ ತರಗತಿಯಲ್ಲಿ ಮನೋಜ, ಸ್ವಾತಿ, ಶ್ರೀರಾಮ, ಮಲ್ಲಿಕಾ, ಐದನೇತರಗತಿಯಲ್ಲಿ ಅಶ್ವಿನಿ, ಸಂಜನಾ,ರವಿಕುಮಾರ, ಸ್ನೇಹಾ ವಿಜೇತ ವಿದ್ಯಾರ್ಥಿಗಳು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಮಾರುತಿಆರೇರ್, ಶಿಕ್ಷಕಿಯರಾದ ಸಾವಿತ್ರಿ, ಮೀನಾಕ್ಷಿ, ಜಡೇಶ್ವರಿ, ಕೌಶಲ್ಯ, ಮತ್ತಿತ್ತರರು ಭಾಗವಹಿಸಿದ್ದರು. ಕಿನ್ನಾಳ ಗ್ರಾಮ ಪಂಚಾಯತಅಭಿವೃದ್ಧಿಅಧಿಕಾರಿ ಪರಮೇಶ್ವರಯ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಿನ್ನಾಳ ಗ್ರಾಮ ಪಂಚಾಯತಿ ಕಾರ್ಯದರ್ಶಿ ನೀಲಮ್ಮ ನಿರೂಪಿಸಿದರು. ಕಿನ್ನಾಳ ಗ್ರಾಮ ಪಂಚಾಯತಗ್ರಂಥಾಲಯ ಮೇಲ್ವಿಚಾರಕಿಚಂದ್ರಕಲಾ ವಂದಿಸಿದರು.

Get real time updates directly on you device, subscribe now.

Comments are closed.

error: Content is protected !!
%d bloggers like this: