ಸರಕಾರಿ ನೌಕರರಿಗೆ ಜ್ಯೋತಿ ಸಂಜೀವಿನಿಯ ಯೋಜನೆಯ ಭಾಗ್ಯ:ಕೆ.ರಾಘವೇಂದ್ರ ಹಿಟ್ನಾಳ

Get real time updates directly on you device, subscribe now.


ಕೊಪ್ಪಳ: ಸರಕಾರಿ ನೌಕರರಿಗೆ ಹಾಗೂ ಅವರ ಅವಲಂಭಿತ ಕುಟುಂಬದವರಿಗೆ ಜ್ಯೋತಿ ಸಂಜೀವಿನಿ ಯೋಜನೆಯ ಭಾಗ್ಯ ಎಲ್ಲರಿಗೂ ಲಭ್ಯವಾಗುವಂತಾಗಲಿ ಎಂದು ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.
ಅವರು ನಗರದ ಎಂ.ಪಿ.ಪ್ಯಾಲೆಸ್ ನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ,ಜ್ಯೋತಿ ಸಂಜೀವಿನಿ ಕಾರ್ಡ ವಿತರಣೆ ಹಾಗೂ ತಾಲೂಕ ಮಟ್ಟದ ಶೈಕ್ಷಣಿಕ ಕಾರ್ಯಗಾರವನ್ನು ಉಧ್ಘಾಟಿಸಿ ಮಾತನಾಡುತ್ತಾ,ಸರಕಾರಿ ನೌಕರರು ತಮ್ಮ ಸೇವಾ ಅವಧಿಯಲ್ಲಿ ತಿವ್ರ ತರಹದ ಖಾಯಿಲೆಗೆ ಒಳಗಾದ ಸಮಯದಲ್ಲಿ ಅವರು ಗುಣಮುಖರಾಗಲು ಹೆಚ್ಚಿನ ಹಣವನ್ನು ವೆಚ್ಚ ಮಾಡಬೇಕಿತ್ತು.ವೆಚ್ಚ ಮಾಡಿದ ಹಣವನ್ನು ಹಿಂಬರಿಸಬೇಕಾದರೆ ಅನೇಕ ತೊಂದರೆಗಳ ಜೊತೆಯಲ್ಲಿ ಕಡಿಮೆ ಮೊತ್ತ ಹಣ ಸಂದಾಯವಾಗಿತ್ತಿತ್ತು.ಇದನ್ನು ಅರಿತ ಸರಕಾರ ೭ ತಿವ್ರ ತರಹದ ಖಾಯಿಗಳಿಗೆ ನೌಕರರ ಒಳಗಾದ ಸಮಯದಲ್ಲಿ ನೌಕರರನಿಗೆ ತೊಂದರೆಯಾಗಬಾರದು ಜೊತೆಯಲ್ಲಿ ಚಿಕಿತ್ಸೆಯು ಕೂಡಾ ಬೇಗನೆ ದೊರೆಯಲ್ಲಿ ಎಂಬ ನಿಟ್ಟನಲ್ಲಿ ಸರಕಾರ ಜ್ಯೋತಿ ಸಂಜೀವಿನಿಯ ಕಾರ್ಡನ ಭಾಗ್ಯ ನೀಡಿದೆ.ಪ್ರಸ್ತುತವಾದ ದಿನಮಾನಗಳಲ್ಲಿ ಮಹಿಳೆಯರು ಅನೇಕ ಕ್ಷೇತ್ರಗಳಲ್ಲಿ ತಮ್ಮದೇಯಾದ ಸಾಧನೆ ಮಾಡಿದ್ದಾರೆ.ಸಂವಿಧಾನವು ಕೂಡಾ ಅವರಿಗೆ ವಿಶೇಷವಾದ ಸೌಲಭ್ಯವನ್ನು ನೀಡುವುದರ ಜೊತೆಯಲ್ಲಿ ಅವರ ಸಬಲೀಕರಣಕ್ಕಾಗಿ ಸರಕಾರ ಶ್ರಮಿಸುತ್ತಿದೆ.೧೦ನೇ ತರಗತಿ ಸೇರಿದಂತೆ ವಿವಿಧ ಪರೀಕ್ಷೆಯಲ್ಲಿ ನಮ್ಮ ಜಿಲ್ಲೆಯು ಮೊದನೇಯ ಸ್ಥಾನ ಬರುವ ಹಾಗೇ ಕಠಿಣವಾದ ಪರಿಶ್ರಮವನ್ನು ಶಿಕ್ಷಕರು ಪಡಬೇಕು.ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕು.ಶಾಸಕರ ಅನುಧಾನವನ್ನು ಹೆಚ್ಚನ ಅನುಧಾನವನ್ನು ಶಿಕ್ಷಣಕ್ಕೆ ಬಳಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಕಡಿ,ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಯಶೋಧ ವಂಟಗೊಡಿ,ವಿಧಾನ ಪರಿಷತ್ತಿನ ಸದಸ್ಯರಾದ ಹೇಮಲತ ನಾಯಕ,ಜಿಲ್ಲಾ ಪಂಚಾಯತನ ಮಾಜಿ ಅಧ್ಯಕ್ಷರಾದ ರಾಜಶೇಖರ ಹಿಟ್ನಾಳ,ಡಿಸಿಸಿ ಬ್ಯಾಂಕ್ ಕಲಬುರಗಿಯ ಉಪಾಧ್ಯಕ್ಷರು ಸುರೇಶ ಸಜ್ಜನ,ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಂಕ್ರಯ್ಯಾ.ಟಿ.ಎಸ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಸರಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾದ ನಾಗರಾಜ ಜುಮ್ಮಣ್ಣನ್ನವರ ಆಶಯ ನುಡಿ ನುಡಿದರು.
ಕಾರ್ಯಕ್ರಮದ ಕುರಿತು ಪ್ರಾಣೇಶ ಪೂಜಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷರಾದ ಹೋಳಿಬಸಯ್ಯಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಮಹಿಳಾ ಹೋರಾಟಗಾರ್ತಿ ಸಾವಿತ್ರಿ ಮುಜಮದಾರ ಉಪನ್ಯಾಸ ನೀಡಿದರು.
ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದ ಹುಚ್ಚಮ್ಮ ಚೌದ್ರಿ ಹಾಗೂ ಡಿಸಿಸಿ ಬ್ಯಾಂಕ್ ಕಲಬುರಗಿಯ ಉಪಾಧ್ಯಕ್ಷರಾದ ಸುರೇಶ ಸಜ್ಜನ ಅವರನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ,ಅಕ್ಷರ ದಾಸೋಹ ತಾಲೂಕ ಅಧಿಕಾರಿ ಹನುಮಂತಪ್ಪ,ಕ್ಷೇತ್ರ ಸಮನ್ವಯಾಧಿಕಾರಿಗಳಾದ ಪ್ರಕಾಶ ತಗಡಿನಮನಿ,ನೌಕರರ ಸಂಘದ ರಾಜ್ಯ ಪರಿಷತ್ತಿನ ಸದಸ್ಯರಾದ ಗೋಪಾಲ,ಕಾರ್ಯಾಧ್ಯಕ್ಷರಾದ ಶಿವಪ್ಪ ಜೋಗಿ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಕಾರ್ಯಕಾರಿ ಸಮಿಯ ಸದಸ್ಯರಾದ ನಿಂಗಪ್ಪ,ಕನಕಗಿರಿ ತಾಲೂಕ ಅಧ್ಯಕ್ಷರಾದ ಶಂಶಾದಬೇಗಂ,ಕುಷ್ಟಗಿ ತಾಲೂಕ ಅಧ್ಯಕ್ಷರಾದ ಮಲ್ಲಪ್ಪ ಕುದರಿ,ಕಾರ್ಯದರ್ಶಿ ಹೈದರಲಿ ಜಾಲಿಹಾಳ,ಕಳಕಮಲ್ಲೇಶ,ರಾಮಣ್ಣ ಕಳ್ಳಿಮನಿ,ನಫೀಜಖಾನ ಪಠಾನ,ಪೂರ್ಣಿಮಾ ತುಪ್ಪದ ಮುಂತಾದವರು ಹಾಜರಿದ್ದರು.
ಬಹದ್ದೂರಬಂಡಿ ಕ್ಲಸ್ಟರ್ ಸಿ.ಆರ್.ಪಿ. ಹನುಮಂತಪ್ಪ ಕುರಿ ಕಾರ್ಯಕ್ರಮವನ್ನು ನಿರೂಪಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಕಾರ್ಯದರ್ಶಿ ಬಾಳಪ್ಪ ಕಾಳೆ ಸ್ವಾಗತಿಸಿ,ರಾಮಣ್ಣ ಶ್ಯಾವಿ ವಂದಿಸಿದರು.

Get real time updates directly on you device, subscribe now.

Comments are closed.

error: Content is protected !!
%d bloggers like this: