ರವಿಕುಮಾರ ಸ್ವಾಮಿ 55ನೇ ಹುಟ್ಟು ಹಬ್ಬ ಸರ್ವಧರ್ಮಗಳ ಉಚಿತ ಸಾಮೂಹಿಕ ವಿವಾಹ

Get real time updates directly on you device, subscribe now.


ಕುಷ್ಟಗಿ ಜೂ.26; ರವಿಕುಮಾರ ಸ್ವಾಮಿ ಮದ್ದಾನಯ್ಯ ಹಿರೇಮಠ ಅವರ 55 ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಜು.06 ಗುರುವಾರ ತಾವರಗೇರಿ ರಸ್ತೆ ಬಳಿಯ ಇರುವ ಮಹಾಂತ ಸಂಗಮ ಬಡಾವಣೆಯಲ್ಲಿ ಸರ್ವಧರ್ಮಗಳ ಉಚಿತ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ ಎಂದು ಆಯೋಜಕ ಮಲ್ಲಿಕಾರ್ಜುನ ಮಸೂತಿ ತಿಳಿಸಿದ್ದಾರೆ.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಾತಾ ಮಂಜಮ್ಮ ಜೋಗತಿ, ಸರಿಗಮ ಖ್ಯಾತಿಯ ಗಾಯಕ ಕಂಬದ ರಂಗಯ್ಯ, ಜೂನಿಯರ್ ವಿಷ್ಣುವರ್ಧನ್ ರವಿ ಎಸ್ ಕೋರಿ, ಕಾಮೀಡಿ ಕಿಲಾಡಿ ಖ್ಯಾತಿಯ ಕಲಾವಿದ ಸಂಜು ಬಸಯ್ಯ ಹಾಗೂ ದುರುಗಪ್ಪ ಹಿರೇಮನಿ ಇವರ ನೇತೃತ್ವದ ಸ್ಪಂದನಾ ಮೇಲೋಡಿಸ್ ಆರ್ಕಸ್ಟ್ರಾ ತಂಡದವರಿಂದ ರಸ ಮಂಜರಿ ಕಾರ್ಯಕ್ರಮ ನಡೆಯುತ್ತದೆ.
ಸರ್ವಧರ್ಮಗಳ ಉಚಿತ ಸಾಮೂಹಿಕ ವಿವಾಹದಲ್ಲಿ ಮದುವೆ ಆಗಬಯಸುವ ವಧು ವರರು ಹೆಸರು ನೊಂದಾಯಿಸಲು ಜುಲೈ. 02 ರವಿವಾರ ಕೊನೆಯ ದಿನವಾಗಿರುತ್ತದೆ ಹೆಚ್ಚಿನ ಮಾಹಿತಿಗಾಗಿ ಆಯೋಜಕರಾದ ಮಲ್ಲಿಕಾರ್ಜುನ ಮಸೂತಿ (9739379040), ವಿರೇಶ ಕಲಕಬಂಡಿ (7026312222), ವಿರೇಶ ಬಳ್ಳೋಳ್ಳಿ (9945278565), ಅಮರೇಶ ಕಲಕಬಂಡಿ (9900433942), ಶಶಿಧರ ಕವಲಿ (9110253958) ಇವರುಗಳನ್ನು ಸಂಪರ್ಕಿಸಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!
%d bloggers like this: