ಮಹಾಯೋಗಿ ವೇಮನ ಜಯಂತಿ: ಪುಷ್ಪನಮನ ಸಲ್ಲಿಕೆ

Get real time updates directly on you device, subscribe now.

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರದಂದು ಜಿಲ್ಲಾ ಮಟ್ಟದ ಮಹಾಯೋಗಿ ವೇಮನ ಅವರ ಜಯಂತಿನ್ನು ಆಚರಿಸಲಾಯಿತು.
ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ.ಕಡಿ ಅವರು ಮಹಾಯೋಗಿ ವೇಮನ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವುದರ ಮೂಲಕ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೊಟ್ರೇಶ್ ಮರಬನಳ್ಳಿ, ಡಿಡಿಪಿಯು ಜಗದೀಶ ಎಚ್.ಎಸ್., ಜಿಲ್ಲಾಡಳಿತ ಭವನದ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ, ಸಮಾಜದ ಅಧ್ಯಕ್ಷರಾದ ಪ್ರಭು ಹೆಬ್ಬಾಳ, ಮುಖಂಡರಾದ ಎಚ್.ಎಲ್ ಹಿರೇಗೌಡರ, ವಿರುಪಣ್ಣ ನವೋದಯ, ಬಸವರೆಡ್ಡಿ ಹಳ್ಳಿಕೇರಿ, ಬಿ.ಎಸ್.ಪೊಲೀಸ್ ಪಾಟೀಲ್, ಶಿವರೆಡ್ಡಿ ಭೂಮಕ್ಕನವರ, ಹನುಮರೆಡ್ಡಿ, ಮನೋಹರ್ ದಾದ್ಮಿ, ಹೇಮರೆಡ್ಡಿ ಬಿಸರಳ್ಳಿ, ವೆಂಕನಗೌಡ ಮೇಟಿ, ಮಹಾಂತೇಶ ಪಾಟೀಲ್, ಸುಭಾಸರಡ್ಡಿ ಕಿನ್ನಾಳ, ಮಂಜುನಾಥ ಭೂಮಕ್ಕನವರ, ಗ್ಯಾನನಗೌಡ, ಸೇರಿದಂತೆ ಇತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: