ಡಾ.ಸಿದ್ದಯ್ಯ ಪುರಾಣಿಕ ಅವರ ಟ್ರಸ್ಟ್ ಸ್ಥಾಪನೆಗೆ ಅಗತ್ಯ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗುವುದು: ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿ
ಜಿಲ್ಲೆಯ ಪ್ರಮುಖ ಸಾಹಿತಿಗಳಾದ ಡಾ.ಸಿದ್ದಯ್ಯ ಪುರಾಣಿಕ ಅವರ ಅನುಪಮ ಸೇವೆಯನ್ನು ಸ್ಮರಿಸಿ ಅವರ ಹೆಸರಿನಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಟ್ರಸ್ಟ್ ಅನ್ನು ಸ್ಥಾಪಿಸಲು ಸರ್ಕಾರದಿಂದ ಅನುಮೋದನೆ ಪಡೆಯಬೇಕಾಗಿರುವುದರಿಂದ ಬೈಲಾ ಸೇರಿದಂತೆ, ಟ್ರಸ್ಟ್ ಸ್ಥಾಪನೆಗೆ ಸಂಬAಧಿಸಿದ ಸಂಪೂರ್ಣ ವಿವರಗಳನ್ನೊಳಗೊಂಡ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿ ಅವರು ತಿಳಿಸಿದರು.
ಗುರುವಾರದಂದು ಸಹಾಯಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಡಾ.ಸಿದ್ದಯ್ಯ ಪುರಾಣಿಕ ಅವರ ಟ್ರಸ್ಟ್ ರಚನೆ ಕುರಿತಾಗಿ ಜಿಲ್ಲೆಯ ಸಾಹಿತಿಗಳೊಂದಿಗೆ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಡಾ.ಸಿದ್ದಯ್ಯ ಪುರಾಣಿಕ ಅವರು ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ದ್ಯಾಂಪುರ ಗ್ರಾಮದವರಾಗಿದ್ದು, ಗ್ರಾಮದಲ್ಲಿ ಅವರ ಕುಟುಂಬಸ್ಥರು ಈಗಲೂ ವಾಸವಿದ್ದಾರೆ. ಟ್ರಸ್ಟ್ ರಚನೆ ಕುರಿತಾಗಿ ಅವರ ಕುಟುಂಬಸ್ಥರಿAದಲೂ ಸಲಹೆಗಳನ್ನು ಕೇಳಲಾಗಿದೆ. ಸರ್ಕಾರದಲ್ಲಿ ಟ್ರಸ್ಟ್ ರಚನೆಗೆ ಮೀಸಲಿಟ್ಟಿರುವ ಅನುದಾನ, ನಿಗದಿಪಡಿಸಿದ ಮಾರ್ಗಸೂಚಿಗಳು, ಜಿಲ್ಲೆಯ ಸಾಹಿತಿಗಳ ಅಭಿಪ್ರಾಯಗಳು, ಜಿಲ್ಲಾಡಳಿತದಿಂದ ಕೈಗೊಳ್ಳಬೇಕಾದ ಕ್ರಮಗಳು ಎಲ್ಲವನ್ನೂ ಕ್ರೋಢೀಕರಿಸಿ, ಅಧಿಕಾರಿಗಳೊಂದಿಗೆ ಚರ್ಚಿಸಿ, ಬೈಲಾ ಸೇರಿದಂತೆ ಟ್ರಸ್ಟ್ ಸ್ಥಾಪನೆಗೆ ಸಂಬAಧಿಸಿದ ಸಂಪೂರ್ಣ ವಿವರಗಳನ್ನು ಒಳಗೊಂಡ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದರು.
ಡಾ.ಸಿದ್ದಯ್ಯ ಪುರಾಣಿಕ ಅವರ ಕುರಿತಾಗಿ ವಿಶ್ವ ವಿದ್ಯಾಲಯದಲ್ಲಿ ಅಧ್ಯಯನ ಪೀಠ ಸ್ಥಾಪಿಸಲು, ಅವರ ಹುಟ್ಟೂರಿನಲ್ಲಿ ಪ್ರಮುಖ ವೃತ್ತ, ರಸ್ತೆಗಳಿಗೆ ಡಾ.ಸಿದ್ದಯ್ಯ ಪುರಾಣಿಕ ಅವರ ಹೆಸರು ನಾಮಕರಣ ಮಾಡಲು, ನಗರದ ಸಾಹಿತ್ಯ ಭವನಕ್ಕೆ ಡಾ.ಸಿದ್ದಯ್ಯ ಪುರಾಣಿಕ ಅವರ ಹೆಸರು ಇಡುವಂತೆ ಸಭೆಯಲ್ಲಿ ಹಾಜರಿದ್ದ ಸಾಹಿತಿಗಳು ಸಲಹೆ, ಅಭಿಪ್ರಾಯಗಳನ್ನು ತಿಳಿಸಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೊಟ್ರೇಶ ಮರಬನಳ್ಳಿ, ಸಾಹಿತಿಗಳಾದ ಎಂ.ಬಿ. ಅಳವಂಡಿ, ಸಾವಿತ್ರಿ ಮುಜುಮದಾರ್, ನಟರಾಜ ಸೋನಾರ್, ಎಚ್.ಎಸ್.ಪಾಟೀಲ್, ಜಿ.ಎಸ್.ಗೋನಾಳ, ಸಿರಾಜ್ ಬಿಸರಳ್ಳಿ, ಡಾ.ಕೆ.ಬಿ. ಬ್ಯಾಳಿ, ಈಶ್ವರ ಹತ್ತಿ, ಸೇರಿದಂತೆ ಜಿಲ್ಲೆಯ ಪ್ರಮುಖ ಸಾಹಿತಿಗಳು, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಪದಾಧಿಕಾರಿಗಳು ಇತರರು ಉಪಸ್ಥಿತರಿದ್ದರು.
ಡಾ.ಸಿದ್ದಯ್ಯ ಪುರಾಣಿಕ ಅವರು ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ದ್ಯಾಂಪುರ ಗ್ರಾಮದವರಾಗಿದ್ದು, ಗ್ರಾಮದಲ್ಲಿ ಅವರ ಕುಟುಂಬಸ್ಥರು ಈಗಲೂ ವಾಸವಿದ್ದಾರೆ. ಟ್ರಸ್ಟ್ ರಚನೆ ಕುರಿತಾಗಿ ಅವರ ಕುಟುಂಬಸ್ಥರಿAದಲೂ ಸಲಹೆಗಳನ್ನು ಕೇಳಲಾಗಿದೆ. ಸರ್ಕಾರದಲ್ಲಿ ಟ್ರಸ್ಟ್ ರಚನೆಗೆ ಮೀಸಲಿಟ್ಟಿರುವ ಅನುದಾನ, ನಿಗದಿಪಡಿಸಿದ ಮಾರ್ಗಸೂಚಿಗಳು, ಜಿಲ್ಲೆಯ ಸಾಹಿತಿಗಳ ಅಭಿಪ್ರಾಯಗಳು, ಜಿಲ್ಲಾಡಳಿತದಿಂದ ಕೈಗೊಳ್ಳಬೇಕಾದ ಕ್ರಮಗಳು ಎಲ್ಲವನ್ನೂ ಕ್ರೋಢೀಕರಿಸಿ, ಅಧಿಕಾರಿಗಳೊಂದಿಗೆ ಚರ್ಚಿಸಿ, ಬೈಲಾ ಸೇರಿದಂತೆ ಟ್ರಸ್ಟ್ ಸ್ಥಾಪನೆಗೆ ಸಂಬAಧಿಸಿದ ಸಂಪೂರ್ಣ ವಿವರಗಳನ್ನು ಒಳಗೊಂಡ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದರು.
ಡಾ.ಸಿದ್ದಯ್ಯ ಪುರಾಣಿಕ ಅವರ ಕುರಿತಾಗಿ ವಿಶ್ವ ವಿದ್ಯಾಲಯದಲ್ಲಿ ಅಧ್ಯಯನ ಪೀಠ ಸ್ಥಾಪಿಸಲು, ಅವರ ಹುಟ್ಟೂರಿನಲ್ಲಿ ಪ್ರಮುಖ ವೃತ್ತ, ರಸ್ತೆಗಳಿಗೆ ಡಾ.ಸಿದ್ದಯ್ಯ ಪುರಾಣಿಕ ಅವರ ಹೆಸರು ನಾಮಕರಣ ಮಾಡಲು, ನಗರದ ಸಾಹಿತ್ಯ ಭವನಕ್ಕೆ ಡಾ.ಸಿದ್ದಯ್ಯ ಪುರಾಣಿಕ ಅವರ ಹೆಸರು ಇಡುವಂತೆ ಸಭೆಯಲ್ಲಿ ಹಾಜರಿದ್ದ ಸಾಹಿತಿಗಳು ಸಲಹೆ, ಅಭಿಪ್ರಾಯಗಳನ್ನು ತಿಳಿಸಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೊಟ್ರೇಶ ಮರಬನಳ್ಳಿ, ಸಾಹಿತಿಗಳಾದ ಎಂ.ಬಿ. ಅಳವಂಡಿ, ಸಾವಿತ್ರಿ ಮುಜುಮದಾರ್, ನಟರಾಜ ಸೋನಾರ್, ಎಚ್.ಎಸ್.ಪಾಟೀಲ್, ಜಿ.ಎಸ್.ಗೋನಾಳ, ಸಿರಾಜ್ ಬಿಸರಳ್ಳಿ, ಡಾ.ಕೆ.ಬಿ. ಬ್ಯಾಳಿ, ಈಶ್ವರ ಹತ್ತಿ, ಸೇರಿದಂತೆ ಜಿಲ್ಲೆಯ ಪ್ರಮುಖ ಸಾಹಿತಿಗಳು, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಪದಾಧಿಕಾರಿಗಳು ಇತರರು ಉಪಸ್ಥಿತರಿದ್ದರು.
Comments are closed.