ರಾಷ್ಟೀಯ ಸಮ್ಮೇಳನದ ಯಶಸ್ವಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಚ್.ವಿಶ್ವನಾಥ ಕರೆ

Get real time updates directly on you device, subscribe now.

.
ಕೊಪ್ಪಳ: ಶೆಪರ್ಢ ಇಂಡಿಯಾ ಇಂಟರ್ ನ್ಯಾಷನಲ್ ವತಿಯಿಂದ ಅಕ್ಟೋಬರ್ ೨ ಮತ್ತು ೩ ರಂದು ಬೆಳಗಾವಿಯಲ್ಲಿ ಹಮ್ಮಿಕೊಂಡಿರುವ ರಾಷ್ಟೀಯ ಕಾರ್ಯಕಾರಿ ಸಮಿತಿ ಸಭೆ,ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಸನ್ಮಾನ ಹಾಗೂ ರಾಷ್ಟಿçÃಯ ಸಮಾವೇಶಕ್ಕೆ ಜಿಲ್ಲೆಯ ಕುರುಬ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಶೆಪರ್ಡ ಇಂಡಿಯಾ ಇಂಟರ್ ನ್ಯಾಷನಲ್ ಸಂಸ್ಥೆಯ ರಾಷ್ಟಿçÃಯ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಹೆಚ್.ವಿಶ್ವನಾಥ ಕರೆ ನೀಡಿದರು.
ಅವರು ಸೋಮವಾರ ಸಂಜೆ ನಗರದ ಕಾಳಿದಾಸ ಶಿಕ್ಷಣ ಸಂಸ್ಥೆಯಲ್ಲಿ ಕರೆಯಲಾಗಿದ ಸಮಾವೇಶದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ,ರಾಜ್ಯದಲ್ಲಿ ಮಾತ್ರವಲ್ಲ ದೇಶದ ವಿವಿಧ ರಾಜ್ಯದಲ್ಲಿ ಕುರುಬ ಸಮುದಾಯದವರು ವಾಸವಾಗಿದ್ದು, ಕರ್ನಾಟಕದಲ್ಲಿ ಕುರುಬ,ಮಹಾರಾಷ್ಟçದಲ್ಲಿ ಧನಗರ,ದಿವಾಸಿಯಾ ಹಿಗೇ ಬೇರೆ ಬೇರೆ ರಾಜ್ಯಗಳಲ್ಲಿ ಅವರದ್ದೇ ಆದ ಭಾಷೆಗಳಲ್ಲಿ ಕರೆಯಲ್ಪಡುತ್ತಾರೆ.ಈ ರೀತಿಯಲ್ಲಿ ಕರೆಯಲ್ಪಡುವ ಎಲ್ಲಾ ಕುರುಬ ಸಮುದಾಯದವರನ್ನು ಒಂದು ಸಾಮಾನ್ಯ ಹೆಸರಿನಲ್ಲಿ ಕರೆಯುವಂತಾಗಬೇಕು ಹಾಗೂ ಒಂದೆ ನೆಲೆಯಲ್ಲಿ ತರಬೇಕು ಎಂಬ ಉದ್ದೇಶದಿಂದ ೨೦೧೪ ರಲ್ಲಿ “ಶೆಪರ್ಡ ಇಂಡಿಯಾ ಇಂಟರ್ ನ್ಯಾಷನಲ್ ಎಂದು ನಾಮಕರಣ ಮಾಡುವುದರ ಮೂಲಕ ಅದರ ಅಡಿಯಲ್ಲಿ ಈಗಾಗಲೇ ಸಂಸ್ಥೆಯು ಪ್ರಾರಂಭವಾದ ವರ್ಷದಿಂದ ಇಲ್ಲಿಯವರೆಗೆ ದೇಶದ ವಿವಿಧ ರಾಜ್ಯಗಳಲ್ಲಿ ೮ ಸಮ್ಮೇಳನವನ್ನು ಮಾಡಲಾಗಿದೆ.ರಾಜ್ಯ ಈ ಬಾರಿ ಮಾಡುವ ಅವಕಾಶ ಸಿಕ್ಕಿದೆ.ಮಧ್ಯ ಕರ್ನಾಟಕವಾದ ದಾವಣಗೇರೆಯಲ್ಲಿ ಅನೇಖ ಸಮಾವೇಶ ಮಾಡಲಾಗಿದೆ.ಉತ್ತರ ಕರ್ನಾಟಕದಲ್ಲಿ ಇರುವ ಕುರುಬ ಸಮುದಾಯದವರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಬೆಳಗಾವಿ ೯ನೇ ರಾಷ್ಟಿçÃಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ.ಜಿಲ್ಲೆಯಲ್ಲಿ ಅತಿ ಹೆಚ್ಚು ಕುರುಬ ಸಮುದಾಯವಿದ್ದು ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು.ಈ ಸಮಾವೇಶ ಯಾವುದೇ ಶಕ್ತಿ ಪ್ರದದರ್ಶನ ಮಾಡುವ ನಿಟ್ಟಿನಲ್ಲಿ ಹಮ್ಮಿಕೊಂಡಿಲ್ಲ.ದೇಶದಲ್ಲಿ ಇರುವ ಕುರುಬ ಸಮುದಾಯವನ್ನು ಒಟ್ಟುಗೂಡಿಸುವ ನಿಟ್ಟಿನಲ್ಲಿ ಮಾಡುವ ಸಮಾವೇಶ ಇದಾಗಿದೆ ಎಂದು ಹೇಳಿದರು.
ಶೆಪರ್ಡ ಇಂಡಿಯಾ ಇಂಟರ್ ನ್ಯಾಷನಲ್ ಸಂಸ್ಥೆಯ ರಾಷ್ಟಿçÃಯ ಉಪಾಧ್ಯಕ್ಷರು ಹಾಗೂ ಮಾಜಿ ಸಚಿವರಾದ ಎಚ್.ಎಂ.ರೇವಣ್ಣ ಮಾತನಾಡಿ,ದೇಶದಲ್ಲಿ ೧೨ ಕೋಟಗೂ ಅಧಿಕ ಜನರಿದ್ದರೂ ಕೂಡಾ ಮುಖ್ಯಮಂತ್ರಿಯಾಗಿರುವುದು ಕೇವಲ ಸಿದ್ದರಾಮಯ್ಯಾನವರು ಮಾತ್ರ.ಹಾಗಾಗಿಯೇ ಅಕ್ಟೋಬರ್ ೨ ರಂದು ಶೆಪರ್ಡ ಇಂಡಿಯಾ ಇಂಟರ್ ನ್ಯಾಷನಲ್ ಸಂಸ್ಥೆಯ ಕಾರ್ಯಕಾರಿ ಸಮಿತಿ ಸಭೆ ಹಾಗೂ ಅಕ್ಟೋಬರ್ ೩ ರಂದು ಮುಖ್ಯಮಂತ್ರಿಗಳನ್ನು ದೇಶದ ವಿವಿಧ ರಾಜ್ಯಗಳಲ್ಲಿ ಆಯ್ಕೆಯಾಗಿರುವ ಜನಪ್ರತಿನಿಧಿಗಳು ಸೇರಿಕೊಂಡು ಸನ್ಮಾನಿಸಲಾಗುತ್ತದೆ.ಅಲ್ಲದೇ ಸಮ್ಮೇಳನವು ಕೇವಲ ಸನ್ಮಾನ ಹಾಗೂ ಶಕ್ತಿ ಪ್ರದರ್ಶನಕ್ಕೆ ಮಾತ್ರ ಸಿಮಿತವಾಗಿಲ್ಲ,ನಮ್ಮ ಉದ್ಯೋಗ ಪಶುಸಂಗೋಪನೆ ಎನ್ನುವುದು ಎಲ್ಲರಿಗೂ ತಿಳಿಸಬೇಕು.ವಿವಿಧ ರಾಜ್ಯದಲ್ಲಿ ವಾಸವಾಗಿರುವ ಕುರುಬ ಸಮುದಾಯದ ವೈವಿಧತೆ ಹಾಗೂ ಸಂಸ್ಕೃತಿಯನ್ನು ಪರಸ್ಪರ ಅರಿತುಕೊಳ್ಳಲು ಈ ಸಮಾವೇಶ ಉತ್ತಮ ವೇದಿಕೆಯಾಗಲಿದೆ.ಸಮ್ಮೇಳನದ ಯಶಸ್ವಿಗಾಗಿ ಈಗಾಗಲೇ ರಾಜ್ಯದ ಅನೇಕ ಜಿಲ್ಲೆಗಳಿಗೆ ಭೇಟಿ ಕೊಟ್ಟು ಪೂರ್ವಭಾವಿ ಸಭೆಯನ್ನು ಮಾಡಿ ಮಾಹಿತಿ ನೀಡಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿ,ಪ್ರತಿಯೊಂದು ಸಮುದಾಯವು ತನ್ನ ಹಕ್ಕು ಮತ್ತು ಬೇಡಿಕೆಗಳನ್ನು ಪಡೆದುಕೊಳ್ಳಬೇಕಾದರೆ ಸಂಘಟನೆಯಾಗುವುದು ಬಹಳ ಮುಖ್ಯವಾಗಿದೆ.ಸಂಘಟನೆಯಾದಾಗ ಮಾತ್ರ ರಾಜಕೀಯವಾಗಿ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ.ಸಮ್ಮೇಳನದ ಯಶಸ್ವಿಗೆ ಬೇಕಾದ ಎಲ್ಲಾ ಸಿದ್ದತೆಯನ್ನು ಮಾಡಿಕೊಳ್ಳುವುದರ ಜೊತೆಗೆ ಸಮ್ಮೇಳನದಲ್ಲಿ ಭಾಗವಹಿಸುವ ಸಮುದಾಯವರಿಗೆ ಸೌಲಭ್ಯ ಒದಗಿಸಿಕೊಡುವುದಾಗಿ ಭರವಸೆ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಮಾಜಿ ಶಾಸಕರು ಹಾಗೂ ಕಾಳಿದಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಬಸವರಾಜ ಹಿಟ್ನಾಳ ವಹಿಸಿದ್ದರು.
ಸಭೆಯಲ್ಲಿ ಮಾಜಿ ವಿಧಾನಪರಿಷತ್ತಿನ ಸದಸ್ಯರಾದ ಕರಿಯಣ್ಣ ಸಂಗಟಿ,ಶೆಪರ್ಡ ಇಂಡಿಯಾ ಇಂಟರ್ ನ್ಯಾಷನಲ್ ಸಂಸ್ಥೆಯ ರಾಜ್ಯಾಧ್ಯಕ್ಷರಾದ ಸಿ.ಎಂ.ನಾಗರಾಜ,ಕಾರ್ಯದರ್ಶಿ ನಾಗರಾಜ.ಐ.ಟಿ.ಐ,ರಾಷ್ಟಿçÃಯ ಸಂಚಾಲಕರಾದ ಎನ್.ಬಿ.ಹರೀಶ,ಖಜಾಂಚಿ ಜಿದ್ದಿಮಣಿ,ಕುರಿ ಉಣ್ಣೆ ನಿಗಮದ ಮಾಜಿ ಅಧ್ಯಕ್ಷರಾದ ವೈ.ಎನ್.ಗೌಡರ,ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ರಾಜಶೇಖರ ಹಿಟ್ನಾಳ,ಹನುಮೇಶ ಮುರಡಿ ಮುಂತಾದವರು ಹಾಜರಿದ್ದರು.
ಕಾರ್ಯಕ್ರಮವನ್ನು ಹಾಲುಮತ ಮಹಾಸಭಾದ ತಾಲೂಕ ಅಧ್ಯಕ್ಷರಾದ ಮುದ್ದಪ್ಪ ಗೊಂದಿಹೊಸಳ್ಳಿ.
ಹಾಲುಮತ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷರಾದ ಕುಬೇರ ಮಜ್ಜಗಿ ಸ್ವಾಗತಿಸಿ,ಜಿಲ್ಲಾಧ್ಯಕ್ಷರಾದ ಹನುಮಂತಪ್ಪ ಕೌದಿ ವಂದಿಸಿದರು..ರಾಷ್ಟೀಯ ಸಮ್ಮೇಳನದ ಯಶಸ್ವಿಗೆ ಹೆಚ್ಚಿನ ‌ ನ್ಯಾಷನಲ್ ವತಿಯಿಂದ ಅಕ್ಟೋಬರ್ ೨ ಮತ್ತು ೩ ರಂದು ಬೆಳಗಾವಿಯಲ್ಲಿ ಹಮ್ಮಿಕೊಂಡಿರುವ ರಾಷ್ಟೀಯ ಕಾರ್ಯಕಾರಿ ಸಮಿತಿ ಸಭೆ,ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಸನ್ಮಾನ ಹಾಗೂ ರಾಷ್ಟಿçÃಯ ಸಮಾವೇಶಕ್ಕೆ ಜಿಲ್ಲೆಯ ಕುರುಬ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಶೆಪರ್ಡ ಇಂಡಿಯಾ ಇಂಟರ್ ನ್ಯಾಷನಲ್ ಸಂಸ್ಥೆಯ ರಾಷ್ಟಿçÃಯ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಹೆಚ್.ವಿಶ್ವನಾಥ ಕರೆ ನೀಡಿದರು.
ಅವರು ಸೋಮವಾರ ಸಂಜೆ ನಗರದ ಕಾಳಿದಾಸ ಶಿಕ್ಷಣ ಸಂಸ್ಥೆಯಲ್ಲಿ ಕರೆಯಲಾಗಿದ ಸಮಾವೇಶದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ,ರಾಜ್ಯದಲ್ಲಿ ಮಾತ್ರವಲ್ಲ ದೇಶದ ವಿವಿಧ ರಾಜ್ಯದಲ್ಲಿ ಕುರುಬ ಸಮುದಾಯದವರು ವಾಸವಾಗಿದ್ದು, ಕರ್ನಾಟಕದಲ್ಲಿ ಕುರುಬ,ಮಹಾರಾಷ್ಟçದಲ್ಲಿ ಧನಗರ,ದಿವಾಸಿಯಾ ಹಿಗೇ ಬೇರೆ ಬೇರೆ ರಾಜ್ಯಗಳಲ್ಲಿ ಅವರದ್ದೇ ಆದ ಭಾಷೆಗಳಲ್ಲಿ ಕರೆಯಲ್ಪಡುತ್ತಾರೆ.ಈ ರೀತಿಯಲ್ಲಿ ಕರೆಯಲ್ಪಡುವ ಎಲ್ಲಾ ಕುರುಬ ಸಮುದಾಯದವರನ್ನು ಒಂದು ಸಾಮಾನ್ಯ ಹೆಸರಿನಲ್ಲಿ ಕರೆಯುವಂತಾಗಬೇಕು ಹಾಗೂ ಒಂದೆ ನೆಲೆಯಲ್ಲಿ ತರಬೇಕು ಎಂಬ ಉದ್ದೇಶದಿಂದ ೨೦೧೪ ರಲ್ಲಿ “ಶೆಪರ್ಡ ಇಂಡಿಯಾ ಇಂಟರ್ ನ್ಯಾಷನಲ್ ಎಂದು ನಾಮಕರಣ ಮಾಡುವುದರ ಮೂಲಕ ಅದರ ಅಡಿಯಲ್ಲಿ ಈಗಾಗಲೇ ಸಂಸ್ಥೆಯು ಪ್ರಾರಂಭವಾದ ವರ್ಷದಿಂದ ಇಲ್ಲಿಯವರೆಗೆ ದೇಶದ ವಿವಿಧ ರಾಜ್ಯಗಳಲ್ಲಿ ೮ ಸಮ್ಮೇಳನವನ್ನು ಮಾಡಲಾಗಿದೆ.ರಾಜ್ಯ ಈ ಬಾರಿ ಮಾಡುವ ಅವಕಾಶ ಸಿಕ್ಕಿದೆ.ಮಧ್ಯ ಕರ್ನಾಟಕವಾದ ದಾವಣಗೇರೆಯಲ್ಲಿ ಅನೇಖ ಸಮಾವೇಶ ಮಾಡಲಾಗಿದೆ.ಉತ್ತರ ಕರ್ನಾಟಕದಲ್ಲಿ ಇರುವ ಕುರುಬ ಸಮುದಾಯದವರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಬೆಳಗಾವಿ ೯ನೇ ರಾಷ್ಟಿçÃಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ.ಜಿಲ್ಲೆಯಲ್ಲಿ ಅತಿ ಹೆಚ್ಚು ಕುರುಬ ಸಮುದಾಯವಿದ್ದು ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು.ಈ ಸಮಾವೇಶ ಯಾವುದೇ ಶಕ್ತಿ ಪ್ರದದರ್ಶನ ಮಾಡುವ ನಿಟ್ಟಿನಲ್ಲಿ ಹಮ್ಮಿಕೊಂಡಿಲ್ಲ.ದೇಶದಲ್ಲಿ ಇರುವ ಕುರುಬ ಸಮುದಾಯವನ್ನು ಒಟ್ಟುಗೂಡಿಸುವ ನಿಟ್ಟಿನಲ್ಲಿ ಮಾಡುವ ಸಮಾವೇಶ ಇದಾಗಿದೆ ಎಂದು ಹೇಳಿದರು.
ಶೆಪರ್ಡ ಇಂಡಿಯಾ ಇಂಟರ್ ನ್ಯಾಷನಲ್ ಸಂಸ್ಥೆಯ ರಾಷ್ಟಿçÃಯ ಉಪಾಧ್ಯಕ್ಷರು ಹಾಗೂ ಮಾಜಿ ಸಚಿವರಾದ ಎಚ್.ಎಂ.ರೇವಣ್ಣ ಮಾತನಾಡಿ,ದೇಶದಲ್ಲಿ ೧೨ ಕೋಟಗೂ ಅಧಿಕ ಜನರಿದ್ದರೂ ಕೂಡಾ ಮುಖ್ಯಮಂತ್ರಿಯಾಗಿರುವುದು ಕೇವಲ ಸಿದ್ದರಾಮಯ್ಯಾನವರು ಮಾತ್ರ.ಹಾಗಾಗಿಯೇ ಅಕ್ಟೋಬರ್ ೨ ರಂದು ಶೆಪರ್ಡ ಇಂಡಿಯಾ ಇಂಟರ್ ನ್ಯಾಷನಲ್ ಸಂಸ್ಥೆಯ ಕಾರ್ಯಕಾರಿ ಸಮಿತಿ ಸಭೆ ಹಾಗೂ ಅಕ್ಟೋಬರ್ ೩ ರಂದು ಮುಖ್ಯಮಂತ್ರಿಗಳನ್ನು ದೇಶದ ವಿವಿಧ ರಾಜ್ಯಗಳಲ್ಲಿ ಆಯ್ಕೆಯಾಗಿರುವ ಜನಪ್ರತಿನಿಧಿಗಳು ಸೇರಿಕೊಂಡು ಸನ್ಮಾನಿಸಲಾಗುತ್ತದೆ.ಅಲ್ಲದೇ ಸಮ್ಮೇಳನವು ಕೇವಲ ಸನ್ಮಾನ ಹಾಗೂ ಶಕ್ತಿ ಪ್ರದರ್ಶನಕ್ಕೆ ಮಾತ್ರ ಸಿಮಿತವಾಗಿಲ್ಲ,ನಮ್ಮ ಉದ್ಯೋಗ ಪಶುಸಂಗೋಪನೆ ಎನ್ನುವುದು ಎಲ್ಲರಿಗೂ ತಿಳಿಸಬೇಕು.ವಿವಿಧ ರಾಜ್ಯದಲ್ಲಿ ವಾಸವಾಗಿರುವ ಕುರುಬ ಸಮುದಾಯದ ವೈವಿಧತೆ ಹಾಗೂ ಸಂಸ್ಕೃತಿಯನ್ನು ಪರಸ್ಪರ ಅರಿತುಕೊಳ್ಳಲು ಈ ಸಮಾವೇಶ ಉತ್ತಮ ವೇದಿಕೆಯಾಗಲಿದೆ.ಸಮ್ಮೇಳನದ ಯಶಸ್ವಿಗಾಗಿ ಈಗಾಗಲೇ ರಾಜ್ಯದ ಅನೇಕ ಜಿಲ್ಲೆಗಳಿಗೆ ಭೇಟಿ ಕೊಟ್ಟು ಪೂರ್ವಭಾವಿ ಸಭೆಯನ್ನು ಮಾಡಿ ಮಾಹಿತಿ ನೀಡಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿ,ಪ್ರತಿಯೊಂದು ಸಮುದಾಯವು ತನ್ನ ಹಕ್ಕು ಮತ್ತು ಬೇಡಿಕೆಗಳನ್ನು ಪಡೆದುಕೊಳ್ಳಬೇಕಾದರೆ ಸಂಘಟನೆಯಾಗುವುದು ಬಹಳ ಮುಖ್ಯವಾಗಿದೆ.ಸಂಘಟನೆಯಾದಾಗ ಮಾತ್ರ ರಾಜಕೀಯವಾಗಿ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ.ಸಮ್ಮೇಳನದ ಯಶಸ್ವಿಗೆ ಬೇಕಾದ ಎಲ್ಲಾ ಸಿದ್ದತೆಯನ್ನು ಮಾಡಿಕೊಳ್ಳುವುದರ ಜೊತೆಗೆ ಸಮ್ಮೇಳನದಲ್ಲಿ ಭಾಗವಹಿಸುವ ಸಮುದಾಯವರಿಗೆ ಸೌಲಭ್ಯ ಒದಗಿಸಿಕೊಡುವುದಾಗಿ ಭರವಸೆ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಮಾಜಿ ಶಾಸಕರು ಹಾಗೂ ಕಾಳಿದಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಬಸವರಾಜ ಹಿಟ್ನಾಳ ವಹಿಸಿದ್ದರು.
ಸಭೆಯಲ್ಲಿ ಮಾಜಿ ವಿಧಾನಪರಿಷತ್ತಿನ ಸದಸ್ಯರಾದ ಕರಿಯಣ್ಣ ಸಂಗಟಿ,ಶೆಪರ್ಡ ಇಂಡಿಯಾ ಇಂಟರ್ ನ್ಯಾಷನಲ್ ಸಂಸ್ಥೆಯ ರಾಜ್ಯಾಧ್ಯಕ್ಷರಾದ ಸಿ.ಎಂ.ನಾಗರಾಜ,ಕಾರ್ಯದರ್ಶಿ ನಾಗರಾಜ.ಐ.ಟಿ.ಐ,ರಾಷ್ಟಿçÃಯ ಸಂಚಾಲಕರಾದ ಎನ್.ಬಿ.ಹರೀಶ,ಖಜಾಂಚಿ ಜಿದ್ದಿಮಣಿ,ಕುರಿ ಉಣ್ಣೆ ನಿಗಮದ ಮಾಜಿ ಅಧ್ಯಕ್ಷರಾದ ವೈ.ಎನ್.ಗೌಡರ,ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ರಾಜಶೇಖರ ಹಿಟ್ನಾಳ,ಹನುಮೇಶ ಮುರಡಿ ಮುಂತಾದವರು ಹಾಜರಿದ್ದರು.
ಕಾರ್ಯಕ್ರಮವನ್ನು ಹಾಲುಮತ ಮಹಾಸಭಾದ ತಾಲೂಕ ಅಧ್ಯಕ್ಷರಾದ ಮುದ್ದಪ್ಪ ಗೊಂದಿಹೊಸಳ್ಳಿ.
ಹಾಲುಮತ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷರಾದ ಕುಬೇರ ಮಜ್ಜಗಿ ಸ್ವಾಗತಿಸಿ,ಜಿಲ್ಲಾಧ್ಯಕ್ಷರಾದ ಹನುಮಂತಪ್ಪ ಕೌದಿ ವಂದಿಸಿದರು.

 

Get real time updates directly on you device, subscribe now.

Comments are closed.

error: Content is protected !!
%d bloggers like this: