ಶ್ರೀಮಠದ ಭಕ್ತರಿಂದ ಜಾತ್ರಾ ಮಹಾದಾಸೋಹಕ್ಕೆ ಅಡುಗೆ ಎಣ್ಣೆಯ ಸೇವೆ

Get real time updates directly on you device, subscribe now.

ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ-೨೦೨೬

ಕೊಪ್ಪಳ :ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ದಿನಗಣನೆಆರಂಭವಾಗಿದ್ದುಎಲ್ಲಾ ಸಿದ್ಧತೆಗಳು ಭರದಿಂದ ಸಾಗಿವೆ.ದಕ್ಷಿಣ ಭಾರತದ ಕುಂಭಮೇಳ ಪ್ರಸಿದ್ಧಿ ಪಡೆದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಈ ನಾಡಿನ ಭಕ್ತರ ಭಕ್ತಿಯತಾಣ.

ಪ್ರತಿ ವರ್ಷವುಜಾತ್ರಾ ಮಹಾದಾಸೋಹದಲ್ಲಿ ಅನೇಕ ಭಕ್ತಾಧಿಗಳು ಶ್ರೀಮಠದ ಮಹಾದಾಸೋಹಕ್ಕೆ ವಿವಿಧಸೇವೆಯನ್ನು ಸಲ್ಲಿಸಿ ಶ್ರೀ ಗವಿಸಿದ್ಧೇಶ್ವರರ ಕೃಪೆಗೆ ಪಾತ್ರರಾಗುವುದು ಸಂಪ್ರದಾಯ. ಈ ವರ್ಷವೂಜಾತ್ರಾ ಮಹೋತ್ಸವದ ಮಹಾದಾಸೋಹಕ್ಕೆ ಸಂಪೂರ್ಣವಾಗಿಖರ್ಚಾಗುವಅಡುಗೆಎಣ್ಣೆಯ ಸೇವೆಯನ್ನುಶ್ರೀ ಮಠದ ಭಕ್ತರಾದ   ಹೀರಾರಾಮಜಿ ಆರ್ಯ ಹಾಗೂ ಸಹ ಕುಟುಂಬದವರು, ಭಾಗ್ಯೋದಯ ರೈಸ್ ಇಂಡಸ್ಟ್ರೀಸ್, ಸಾ: ಸಿರುಗುಪ್ಪಾ ಅವರು ಸಲ್ಲಿಸುತ್ತಿದ್ಧಾರೆ.  ಈ ಸೇವೆಯುಅವರತಾಯಿಯವರಾದ ಶ್ರೀಮತಿ ದಿ.ಖೇತುದೇವಿಜಿ ಮತ್ತುತಂದೆಯವರಾದ ಶ್ರೀಮಾನ್ ದಿ.ಧೀಪಾರಾಮಜಿ ಹಾಗೂಅವರಅಣ್ಣನವರಾದ  ದಿ.ಉಮಾರಾಮಜಿಇವರ ಸ್ಮರಣಾರ್ಥಸೇವೆಗೈದಿದ್ದಾರೆ.ಇವರಸೇವೆಗೆ ಶ್ರೀ ಮಠದ ಪರಮ ಪೂಜ್ಯರು ಆಶೀರ್ವದಿಸಿದ್ದಾರೆ ಎಂದು ಶ್ರೀ ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Get real time updates directly on you device, subscribe now.

Comments are closed.

error: Content is protected !!