ಕರವೇ ತಾಲ್ಲೂಕಾಧ್ಯಕ್ಷರಾಗಿ ಗವಿಸಿದ್ದಪ್ಪ ಚಕ್ಕಡಿ, ಮಹಿಳಾ ತಾಲ್ಲೂಕಾಧ್ಯಕ್ಷೆಯಾಗಿ ಶಂಕ್ರಮ ಮ್ಯಾಗಳಮನಿ ನೇಮಕ

Get real time updates directly on you device, subscribe now.

 


ಕೊಪ್ಪಳ,ಜು.21: ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರದಂದು ಕರ್ನಾಟಕ ರಕ್ಷಣಾ ವೇದಿಕೆ ಕೊಪ್ಪಳ ತಾಲೂಕ ಘಟಕದ ಸಭೆ ಜರುಗಿತು.
ಸಭೆಯಲ್ಲಿ ಸಂಘಟನಾ ಬಲವರ್ಧನೆ, ಸಂಘಟನೆಯ ಮುಂದಿನ ಕಾರ್ಯಕ್ರಮಗಳು, ಹೋರಾಟದ ಚಟುವಟಿಕೆಗಳು ಮತ್ತು ಸಾರ್ವಜನಿಕ ಸಂಪರ್ಕ ತಂತ್ರಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಬಿ.ಗಿರೀಶಾನಂದ ಜ್ಞಾನಸುಂದರ ಅವರು ವಹಿಸಿದ್ದರು. ಜಿಲ್ಲಾ ಮುಖಂಡರು ಸಭೆಯಲ್ಲಿ ಪಾಲ್ಗೊಂಡು ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿದರು. ಮತ್ತು ಮುಂದಿನ ಕಾರ್ಯತಂತ್ರದ ಕುರಿತು ಚರ್ಚೆ ನಡೆಸಿದರು. ಸಂಘಟನೆಯ ಶಕ್ತಿ ಹೆಚ್ಚಿಸಲು ನಿರ್ಧಾರಗಳನ್ನು ಕೈಗೊಳ್ಳಲಾಗಿದ್ದು, ಈ ಸಂದರ್ಭದಲ್ಲಿ ನೂತನ ಪಧಾದಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕೊಪ್ಪಳ ತಾಲ್ಲೂಕು ನೂತನ ಅಧ್ಯಕ್ಷರಾಗಿ ಗವಿಸಿದ್ದಪ್ಪ ಚಕ್ಕಡಿ ಹಾಗೂ ಮಹಿಳಾ ತಾಲ್ಲೂಕು ನೂತನ ಅಧ್ಯಕ್ಷೆಯಾಗಿ ಶಂಕ್ರಮ್ಮ ಮ್ಯಾಗಳಮನಿ ಅವರನ್ನು ನೇಮಕ ಮಾಡಲಾಯಿತು. ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಮೂಗಿನ್, ಕುಕನೂರು ತಾಲ್ಲೂಕಾಧ್ಯಕ್ಷ ರಮೇಶ ಚಂಡೂರ, ಭಾಗ್ಯನಗರ ಅಧ್ಯಕ್ಷ ವೀರೇಶ ಮುಂಡಾಸದ ಹಾಗೂ ಅನೇಕರು ಉಪಸ್ಥಿತರಿದ್ದರು. 

Get real time updates directly on you device, subscribe now.

Comments are closed.

error: Content is protected !!