ಶೋಷಣೆಯಿಂದ ಹೊರಬರಲು ಶಿಕ್ಷಣವನ್ನು ಒಂದು ಅಸ್ತ್ರವಾಗಿ ಮಾಡಿಕೊಳ್ಳಿ – ಕೃಷ್ಣ ಇಟ್ಟಂಗಿ

Get real time updates directly on you device, subscribe now.


ಶಿಕ್ಷಣಕ್ಕಿಂತ ಬಲವಾದ ಅಸ್ತ್ರ ಮತ್ತೊಂದಿಲ್ಲ. ಉತ್ತಮ ಶಿಕ್ಷಣ ಪಡೆಯುವ ಮೂಲಕ ನಾವು ಸಮಾಜದಲ್ಲಿ ಗೌರವಿತವಾದ ಸ್ಥಾನವನ್ನು ಪಡೆಯಬಹುದು. ಅತ್ಯಂತ ಹಿಂದುಳಿದ ಸಮಾಜದಿಂದ ಬಂದಿರುವ ನಮ್ಮ ಸಮಾಜದ ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಗೌರವಿಸಿ ಪ್ರೋತ್ಸಾಹಿಸುವ ಮುಖಾಂತರ ಅವರನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಕೊಪ್ಪಳ ಜಿಲ್ಲಾ ಚಲವಾದಿ ಜಾಗೃತಿ ವೇದಿಕೆಯ ಸಂಚಾಲಕರಾದ ಕೃಷ್ಣ ಇಟ್ಟಂಗಿ ನುಡಿದರು. ಅವರು ಕುಕುನೂರ ಸರ್ಕಿಟ್ ಹೌಸ್ ದಲ್ಲಿ ನಡೆದ ಕೊಪ್ಪಳ ಜಿಲ್ಲಾ ಚಲವಾದಿ ಜಾಗೃತಿ ವೇದಿಕೆಯ 2025 ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಮುಂದುವರಿದು ಮಾತನಾಡುತ್ತಾ ಶೋಷಣೆಯಿಂದ ಹೊರಬರಲು ಉತ್ತಮ ಶಿಕ್ಷಣ ಪಡೆಯುವದೊಂದೆ ನಮಗಿರುವ ಅಸ್ತ್ರ. ಅದಕ್ಕಾಗಿ ನಾವೆಲ್ಲರೂ ಒಟ್ಟಾಗಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಿ, ಯಶಸ್ವಿಗೊಳಿಸಬೇಕು ಸಮಾಜ ಬಾಂಧವರನ್ನು ತಮ್ಮ ಸಹಾಯ ಸಹಕಾರ ನೀಡಬೇಕೆಂದು ಕೋರಿದರು.
2024-25ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಪರೀಕ್ಷೆಯಲ್ಲಿ ಶೇಕಡಾ ಎಪ್ಪತ್ತಕ್ಕಿಂತ ಹೆಚ್ಚು ಅಂಕ ಪಡೆದ ಛಲವಾದಿ ಸಮಾಜದ ವಿದ್ಯಾರ್ಥಿಗಳಿಗೆ ಮತ್ತು ಎಂ.ಬಿ.ಬಿ.ಎಸ್. ಗೆ ಆಯ್ಕೆ ಆದ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರಕಾರಿ ಉದ್ಯೋಗ ಪಡೆದ ಪ್ರತಿಭಾವಂತರಿಗೆ ಬರುವ ಅಗಸ್ಟ್ ತಿಂಗಳಲ್ಲಿ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಸಲು ತೀರ್ಮಾನಿಸಲಾಯಿತು.
ಸದರಿ ಕಾರ್ಯಕ್ರಮಕ್ಕೆ ಸಮಾಜದ ಸಚಿವರುಗಳಾದ   ಹೆಚ್ ಸಿ ಮಹದೇವಪ್ಪ, ಡಾ. ಜಿ. ಪರಮೇಶ್ವರ್,  ಪ್ರಿಯಾಂಕ್ ಖರ್ಗೆ, ಕೊಳಚೆ ನಿರ್ಮೂಲನೆ ಮಂಡಳಿ ಅಧ್ಯಕ್ಷರಾದ ಪ್ರಸಾದ್ ಅಬ್ಬಯ್ಯ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ  ಶಿವರಾಜ್ ತಂಗಡಗಿ, ಕೊಪ್ಪಳ ಲೋಕಸಭಾ ಸದಸ್ಯರು ಹಾಗೂ ಕೊಪ್ಪಳ ಜಿಲ್ಲೆಯ ಎಲ್ಲಾ ಶಾಸಕರನ್ನು, ಆಹ್ವಾನಿಸಲು ತೀರ್ಮಾನಿಸಲಾಯಿತು. ಕಾರ್ಯಕ್ರಮವನ್ನು ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ಮಾಡುವದು ಮತ್ತು ಕಾರ್ಯಕ್ರಮವನ್ನು ಆಗಸ್ಟ್ ತಿಂಗಳು 2025ರಲ್ಲಿ ನಡೆಸುವದು ಎಂದು ತೀರ್ಮಾನಿಸಲಾಯಿತು. ಪ್ರತಿಭಾ ಪುರಸ್ಕಾರ ಪಡೆಯುವ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ಹೆಸರುಗಳನ್ನು ಜುಲೈ 15,2025ರ ಒಳಗಡೆ ನೋಂದಾಯಿಸಿಕೊಳ್ಳಬೇಕು. ಸಭೆಯಲ್ಲಿ ಸಮಾಜದ ಮುಖಂಡರಾದ   ರಾಮಣ್ಣ ಬಂಕಡಮನಿ,   ಛತ್ರಪ್ಪ ಛಲವಾದಿ, ಉಪನ್ಯಾಸಕರು  ಶಂಕರ್ ಛಲವಾದಿ,    ರಾಜೇಶ್ ಯಾವಗಲ್, ನ್ಯಾಯವಾದಿ ಬಸವರಾಜ ಜಂಗ್ಲಿ  ಹನುಮಂತಪ್ಪ ಛಲವಾದಿ,   ರಮೇಶ್ ಛಲವಾದಿ,   ರಾಮಚಂದ್ರ ಕುಷ್ಟಗಿ,  ದುರುಗೇಶ್ ನವಲಿಹಳ್ಳಿ,   ಶಂಕರ್ ಜಕ್ಕಲಿ,  ಶಶಿಧರ್ ಹೊಸಮನಿ,   ರಾಘವೇಂದ್ರ ಕಾತರಕಿ,   ಯಲ್ಲಪ್ಪ ಕಲ್ಮನಿ, ಶ್ರೀ ಬಾಲರಾಜ್ ಛಲವಾದಿ,   ಗದ್ದೆಪ್ಪ,   ಲಕ್ಷ್ಮಣ ಕಾಳೆ, ಡಿ ಕೆ ಪರಶುರಾಮ್, ತಿಪ್ಪಣ್ಣ ಹಿರೇಮ್ಯಾಗೇರಿ, ಯಮನೂರಪ್ಪ ಬಳೂಟಗಿ, ಹನುಮಂತ ಕಾತರಕಿ, ಕನಕೇಶ್ ಪೇಂಟರ್, ಸಿದ್ದಪ್ಪ ಮುರಡಿ ಮತ್ತಿತರರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!