ಕ್ರೀಡೆಯಲ್ಲಿ ಸೋಲು ಗೆಲವು ಒಂದೇ ನಾಣ್ಣ್ಯದ ಎರಡು ಮುಖಗಳು-ಜಿ ಆರ್ ಆರೇರ್

Get real time updates directly on you device, subscribe now.

ಕುಕನೂರು,
. ಕ್ರೀಡೆಯಲ್ಲಿ ಸೋಲು ಗೆಲವು ಒಂದೇ ನಾಣ್ಣ್ಯದ ಎರಡು ಮುಖಗಳು ಇಂಡತೆ ಅವುಗಳನ್ನ ಸಮನಾಗಿ ಸ್ವೀಕಾರ ಮಾಡಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಲು ಮುಂದಾಗಬೇಕು ಎಂದು, ಜಿ ಆರ್ ಆರೇರ್ ಹೇಳಿದರು.

. ಪಟ್ಟಣದ ಗವಿಸಿದ್ದೇಶ್ವರ ಪ್ರೌಢಶಾಲೆಯಲ್ಲಿ ನಡೆದ ಪೂರ್ವ ವಲಯ ಮಟ್ಟದ ಕ್ರೀಡಾ ಕೂಟವನ್ನು ಉದ್ದೇಶಸಿ ಮಾತನಾಡಿದ ಅವರು ಕ್ರೀಡೆ ಎಂಬುದು ಆರೋಗ್ಯಕರ ಅನುಕೂಲ ಈ ಕ್ರೀಡೆಯನ್ನು ಸತತವಾಗಿ ಬಳಸಿಕೊಳ್ಳುವುದರಿಂದ ವಿದ್ಯಾರ್ಥಿಗಳ ಜೀವನಕ್ಕೆ ಆರೋಗ್ಯಕ್ಕೆ ಪುಷ್ಟಿ ನೀಡುವಂತದ್ದಾಗಿದೆ ಮುಂದೆ ಉನ್ನತ ವ್ಯಾಸಂಗ ಮಾಡಿ ಉದ್ಯೋಗ ಬಯಸಿದಾಗ ಕ್ರೀಡಾ ಪ್ರಮಾಣ ಪತ್ರವೂ ಕೂಡ ನೆರವಾಗಲು ಸಹಾಯಕವಾಗುತ್ತದೆ ಇಂದಿನ ಆಧುನಿಕ ಜಗತ್ತಿನಲ್ಲಿ ವಿದ್ಯೆ ಜೊತೆಗೆ ಕ್ರೀಡಾಸಕ್ತಿಯು ಬಹಳ ಮುಖ್ಯವಾಗಿದೆ ಪ್ರತಿಯೊಬ್ಬ ವಿದ್ಯಾರ್ಥಿಯು ಭಾಗಿಯಾಗಲು ಮುಂದಾಗಬೇಕು ಎಂದು ವಿದ್ಯಾರ್ಥಿಗಳು ಸಲಹೆ ನೀಡಿದರು ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಸಿದ್ದು ಉಳ್ಳಾಗಡ್ಡಿ ಸಂಸ್ಥೆ ಆಡಳಿತ ಅಧಿಕಾರಿ ಕರಮುಡಿ, ತಾಲೂಕ ದೈಹಿಕ ಶಿಕ್ಷಣಾಧಿಕಾರಿ ಶಿಕ್ಷಕರ ವಿ.ಎ.ಅಂಗಡಿ, ಮುಖ್ಯೋಪಾಧ್ಯಾಯ ಎಸ್ ಜಿ ಪಾಟೀಲ್, ನಿಂಗರಾಜ್, ಬಸಮ್ಮ ಅರಳಲಿ ಮಠ, ಸುದರ್ಶನ್, ಶಿಕ್ಷಕರಾದ ಶರಣಪ್ಪ ಗುಡ್ಲಾನೂರ್, ವಿಎ ಹಿರೇಮಠ, ಎನ್‌ಟಿ ಸಜ್ಜನ್, ದೇವೇಂದ್ರಪ್ಪ, ವಿ ಬಿ ಕಟ್ಟಿ, ತಾಲೂಕ ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಉಮೇಶ್ ಕಂಬಳಿ, ಹನುಮಂತಪ್ಪ ನಾಮ್ದಾರ್, ಪಿರಿಯ ಪತ್ರಕರ್ತ ರುದ್ರಪ್ಪ ಭಂಡಾರಿ ಹಾಗೂ ಇತರರಿದ್ದರು

Get real time updates directly on you device, subscribe now.

Comments are closed.

error: Content is protected !!
%d bloggers like this: