ಮೃದು ಕೌಶಲಗಳು ಆಧುನಿಕ ದಕ್ಷ ವೃತ್ತಿ ಬದುಕಿನ ಪ್ರಮುಖ ಮಾನದಂಡಗಳಾಗಿವೆ’ – ಡಾ. ಚಾಂದ್ ಭಾಷಾ ಎಂ
ಸಮಯ ನಿರ್ವಹಣಾ ಕೌಶಲ, ತಂಡ ನಿರ್ವಹಣಾ ಕೌಶಲ, ಸಂವಹನ ಕೌಶಲಗಳೆಂಬ
‘ಮೃದು ಕೌಶಲಗಳು ಆಧುನಿಕ ದಕ್ಷ ವೃತ್ತಿ ಬದುಕಿನ ಪ್ರಮುಖ ಮಾನದಂಡಗಳಾಗಿವೆ’ ಎಂದು
ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಚಾಂದ್ ಭಾಷಾ ಎಂ ಅವರು ಮಾತನಾಡಿದರು.
ಶನಿವಾರ ತಾಲೂಕಿನ ಇರಕಲ್ಲಗಡದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಇಂಗ್ಲಿಷ್ ವಿಭಾಗದ ವತಿಯಿಂದ ‘ಮೃದು ಕೌಶಲ್ಯಗಳು ಮತ್ತು ವ್ಯಕ್ತಿತ್ವ ವಿಕಸನ’ ಎಂಬ ವಿಷಯದ ಮೇಲಿನ ‘ಆಡ್ ಆನ್ ಕೋರ್ಸ್’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯುವಕರು ಆಧುನಿಕ ವೃತ್ತಿ ಬದುಕಿಗೆ ತಮ್ಮನ್ನು ತಾವು ತೆರೆದುಕೊಳ್ಳಬೇಕೆಂದರೆ ಸಮಯೋಚಿತವಾದ ನಿರ್ಧಾರವನ್ನು ತೆಗೆದುಕೊಳ್ಳುವ, ಸಮಸ್ಯಾ ಪರಿಹಾರ ಕೌಶಲಗಳನ್ನು ರೂಢಿಸಿಕೊಳ್ಳಬೇಕು. ಆ ಮೂಲಕ ತಮ್ಮ ಸ್ವಾವಲಂಬಿ ಬದುಕನ್ನು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕಾಲೇಜಿನ ಐಕ್ಯೂಎಸಿ ಘಟಕದ ಮುಖ್ಯಸ್ಥರಾದ ಪ್ರೊ. ಪ್ರಕಾಶಗೌಡ ಎಸ್ ಯು ಮಾತನಾಡಿ, ‘ಗುಣಮಟ್ಟದ ಶಿಕ್ಷಣ ಎಂಬುದು ಕೇವಲ ಪಠ್ಯಪುಸ್ತಕದಿಂದ ಮಾತ್ರ ನೆರವೇರುವುದಿಲ್ಲ. ಅದು ಇಂತಹ ‘ಆಡ್ ಆನ್ ಕೋರ್ಸ್’ ಗಳೆಂಬ ಗುಣಾತ್ಮಕ ಕಾರ್ಯಕ್ರಮಗಳಿಂದ ಸಾಧ್ಯವಾಗುತ್ತದೆ’ ಇದರ ಸದುಪಯೋಗವನ್ನು ಎಲ್ಲ ವಿದ್ಯಾರ್ಥಿಗಳು ಪಡೆದು ಸ್ವಾವಲಂಬನೆಯ ಕಡೆಗೆ ಹೆಜ್ಜೆ ಹಾಕಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾಲೇಜಿನ ಪ್ರಾಂಶುಪಾಲಾರದ ಪ್ರೊ. ಅನಿತಾ ಎಂ ಪಾಟೀಲ ಮಾತನಾಡಿ ಇಂದಿನ ಆಧುನಿಕ ಯುಗದಲ್ಲಿ ಯುವ ಜನತೆಗೆ ಮೃದು ಕೌಶಲಗಳು ವೃತ್ತಿ ಬದುಕಿಗೆ ಅತ್ಯಗತ್ಯವಾಗಿ ಬೇಕು. ಎಲ್ಲಾ ಕ್ಷೇತ್ರಗಳಲ್ಲೂ ಉದ್ಯೋಗಿಗಳನ್ನು ಆಯ್ದುಕೊಳ್ಳಲು ಅವರಲ್ಲಿರುವ ಕೌಶಲವನ್ನು ಪರೀಕ್ಷಿಸಲಾಗುತ್ತದೆ. ಆದ್ದರಿಂದ ಮೃದು ಕೌಶಲಗಳ ಕಲಿಕೆ ಮತ್ತು ವ್ಯಕ್ತಿತ್ವ ವಿಕಸನ ಈ ಕಾಲದ ತುರ್ತು ಅಗತ್ಯವಾಗಿದೆ ಎಂದರು.
ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಪ್ರೊ. ಬಸವರಾಜ ಟಿ.ಎಚ್. ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ‘ಆಡ್ ಆನ್ ಕೋರ್ಸ್’ ನ ದ್ಯೇಯೋದ್ದೇಶಗಳನ್ನು, ಈ ಕಾರ್ಯಕ್ರಮದ ಪ್ರಸ್ತುತತೆಯನ್ನು ಮತ್ತು ಗುಣಾತ್ಮಕತೆಯನ್ನು ವಿವರಿಸಿದರು. ಡಾ.ಅನಿತಾ ಎಂ, ಪ್ರೊ.ಶಂಕ್ರಯ್ಯ ಅಬ್ಬಿಗೇರಿಮಠ, ಪ್ರೊ. ಸುನಿಲ್ ಟಿ, ಪ್ರೊ. ನಾಗರಾಜ ನಾಯಕ, ಪ್ರೊ. ಸತೀಶ, ಪ್ರೊ. ಹರೀಶ್, ಪ್ರೊ. ಶ್ವೇತಾ, ಉಪನ್ಯಾಸಕರಾದ ಮಹೇಶಕುಮಾರ, ಬಸವರಾಜ ಕಲ್ಮನಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕು. ಸವಿತಾ ತಳಬಾಳ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಕಾಲೇಜಿನ ಪ್ರಾಧ್ಯಾಪಕರು ಮತ್ತು ಉಪನ್ಯಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ
ಕು.ನೇತ್ರಾವತಿ ಪ್ರಾರ್ಥಿಸಿದರು. ಪ್ರೊ. ನೇಹಾ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಸೋಮಲಿಂಗಪ್ಪ ವಂದಿಸಿದರು.
Comments are closed.