‘ಶ್ರೇಷ್ಠ ಕೃಷಿಕ-ಸಮಗ್ರ ಕೃಷಿ ಪದ್ಧತಿ’ ಪ್ರಶಸ್ತಿ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

0

Get real time updates directly on you device, subscribe now.

: ಜಂಟಿ ಕಾರ್ಯದರ್ಶಿ, ಅಲುಮಿನಿ ಅಸೋಶಿಯೇಷನ್-ಕೃಷಿ ವಿಶ್ವ ವಿದ್ಯಾಲಯ, ಹೆಬ್ಬಾಳ, ಬೆಂಗಳೂರು ಇವರು, ಕರ್ನಾಟಕ ರಾಜ್ಯದಲ್ಲಿ ಸುಸ್ಥಿರ ಕೃಷಿಯ ಬೆಳವಣಿಗಾಗಿ “ಸಮಗ್ರ ಕೃಷಿ ಪದ್ಧತಿ’’ ಯನ್ನು ಉತ್ತೇಜಿಸುವ ಸಲುವಾಗಿ 2024-25ನೇ ಸಾಲಿಗೆ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಹಾಗೂ ಕರಾವಳಿ, ಮಲೆನಾಡು ಪ್ರದೇಶದ “ಸಮಗ್ರ ಕೃಷಿ ಪದ್ಧತಿ” ಅಳವಡಿಸಿಕೊಂಡಿರುವ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅವಧಿ ವಿಸ್ತರಿಸಲಾಗಿದೆ.
ಅರ್ಹ ರೈತರು, ಅಲುಮಿನಿ ಅಸೋಶಿಯೇಷನ್-ಕೃಷಿ ವಿಶ್ವ ವಿದ್ಯಾಲಯ, ಹೆಬ್ಬಾಳ, ಬೆಂಗಳೂರು ರವರು ನಿಗದಿಪಡಿಸಿರುವ ನಮೂನೆಯಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ, ಏಪ್ರಿಲ್ 9ರ ಒಳಗೆ `ದಿ ಸೆಕ್ರೇಟರಿ, ಅಲುಮಿನಿ ಅಸೋಶಿಯೇಷನ್ ಯುಎಎಸ್ ಕನ್ವೆನ್‌ಷನ್ ಸೆಂಟರ್, ಹೆಬ್ಬಾಳ, ಬೆಂಗಳೂರು-560024′ ಈ ವಿಳಾಸಕ್ಕೆ ಸಲ್ಲಿಸಬಹುದಾಗಿದೆ. ಪ್ರಶಸ್ತಿಯ ಮೊತ್ತವು ರೂ. 25000 ಗಳು ಇರುತ್ತದೆ. ಅರ್ಜಿ ನಮೂನೆಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಸಂಪರ್ಕಿಸಬಹುದಾಗಿದೆ ಎಂದು ಕೊಪ್ಪಳ ಜಂಟಿ ಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Leave A Reply

Your email address will not be published.

error: Content is protected !!