ಜೀವ ವಿಮಾ ಪರಿಹಾರ ಪಾವತಿಸಲು ಇನ್ಸೂರೆನ್ಸ್ ಕಂಪನಿಗೆ ಆದೇಶ

ಗ್ರಾಹಕ ಫಿರ್ಯಾದು ಸಂಖ್ಯೆ: 36/2024 ರಲ್ಲಿನ ಅಂತಿಮ ತೀರ್ಪಿನ ಸಾರಾಂಶದನ್ವಯ ಫಿರ್ಯಾದುದಾರರಾದ ಶರಣಬಸವ ತಂದೆ ದಿ:ವೀರೇಶಪ್ಪ ವಾರ್ಡ ನಂ:5 ರೆಪ್ಯೂಜೀಸ್ ಸ್ಟ್ರೀಟ್, ಭಾಗ್ಯನಗರ, ಕೊಪ್ಪಳ ಇವರ ತಂದೆ ವೀರೇಶಪ್ಪ ಇವರು ತಮ್ಮ ಜೀವಿತ ಕಾಲದಲ್ಲಿ 2023ರ ಮಾರ್ಚ್ 31ರಂದು ಎದುರುದಾರ ವಿಮಾ ಕಂಪನಿ ಹೆಚ್.ಡಿ.ಎಫ್.ಸಿ ಸ್ಟ್ಯಾಂರ್ಡ್ ಲೈಪ್ ಇನ್ಸೂರೆನ್ಸ್ ಕಂಪನಿ ಲಿಂ. ಮುಂಬೈ (HDFC Standad Life Insurance Company Ltd., Mumbai) ಇವರಲ್ಲಿ ಅರ್ಧ ವಾರ್ಷಿಕ ಪ್ರಿಮಿಯಂ ರೂ. 60,000 ನ್ನು ಪಾವತಿಸಿ ಜೀವ ವಿಮಾ ಪಾಲಸಿಯನ್ನು ಪಡೆದುಕೊಂಡಿದ್ದರು. ಆದರೆ ಪಾಲಸಿದಾರರಾದ ವೀರೆಶಪ್ಪ ಇವರು 2023ರ ಅಕ್ಟೋಬರ್ 14 ರಂದು ಆಕಸ್ಮಿಕವಾಗಿ ಹೃದಯಘಾತದಿಂದ ನಿಧನ ಹೊಂದಿರುತ್ತಾನೆ. ವಿಮಾ ಪಾಲಸಿಯಲ್ಲಿ ಪಾಲಸಿದಾರರ ಮಗ ಶರಣಬಸವ ರವರು ನಾಮಿನಿಯಾಗಿರುತ್ತಾರೆ. ಪಿರ್ಯಾದಿದಾರರ ತಂದೆ ಎದುರುದಾರ ವಿಮಾ ಕಂಪನಿಯಲ್ಲಿ ಜೀವ ವಿಮಾ ಪಾಲಸಿಯನ್ನು ಪಡೆದ ವಿಷಯ ತಿಳಿದು ಕ್ಲೇಮ್ ಫಾರ್ಂ ಭರ್ತಿ ಮಾಡಿ, ಎಲ್ಲಾ ದಾಖಲಾತಿಗಳನ್ನು ಎದುರುದಾರರ ಕಂಪನಿಗೆ ನೀಡಿ ವಿಮಾ ಪರಿಹಾರ ಮೊತ್ತವನ್ನು ಪಾವತಿಸುವಂತೆ ವಿನಂತಿಸಿಕೊಂಡಿರುತ್ತಾರೆ.
ಎದುರುದಾರ ವಿಮಾ ಕಂಪನಿಯವರು ಸದರಿ ಕ್ಲೇಮ್ನ್ನು ಸ್ವೀಕರಿಸಿ, ದೂರುದಾರನಾದ ಶರಣಬಸವ ತಂದೆ ದಿ:ವೀರೇಶಪ್ಪ ಅವರು ಈ ಪಾಲಸಿಯನ್ನು ಪಡೆಯುವ ಸಂದರ್ಭದಲ್ಲಿ ಉದ್ಯೋಗ ಮತ್ತು ಆದಾಯವನ್ನು ತಪ್ಪಾಗಿ ನಮೂದಿಸಿರುತ್ತಾರೆ ಎನ್ನುವ ಕಾರಣಕ್ಕೆ ಪಾಲಸಿಯ ಕ್ಲೇಮ್ನ್ನು ತಿರಸ್ಕಾರ ಮಾಡಿರುತ್ತಾರೆೆ. ದೂರುದಾರರಿಗೆ ಎದುರುದಾರರು ವಿಮಾ ಪಾಲಸಿಯ ಪರಿಹಾರದ ಮೊತ್ತವನ್ನು ನೀಡದೇ ನಿರ್ಲಕ್ಷ ತೋರಿ ಸೇವಾ ನ್ಯೂನತೆ ಎಸಗಿದ್ದರಿಂದ ದೂರುದಾರನು ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಅಯೋಗಕ್ಕೆ ವಿಮಾ ಕಂಪನಿ ವಿರುದ್ಧ ಪರಿಹಾರವನ್ನು ಕೋರಿ ದೂರನ್ನು ಸಲ್ಲಿಸಿರುತ್ತಾರೆ.
ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದೂರನ್ನು ದಾಖಲಿಸಿಕೊಂಡ ನಂತರ ಜಿಲ್ಲಾ ಆಯೋಗದ ಅಧ್ಯಕ್ಷರಾದ ಜಿ.ಇ.ಸೌಭಾಗ್ಯಲಕ್ಷ್ಮೀ ಹಾಗೂ ಸದಸ್ಯರಾದ ರಾಜು.ಎನ್.ಮೇತ್ರಿ ರವರು ವಾದ ಪ್ರತಿವಾದಗಳನ್ನು ಆಲಿಸಿ, ಎದುರುದಾರರಿಂದ ಉಂಟಾದ ಸೇವಾ ನ್ಯೂನತೆಗಾಗಿ ದೂರುದಾರರಿಗೆ ಜೀವ ವಿಮಾ ಪಾಲಸಿಯ ಒಟ್ಟು ಮೊತ್ತ ರೂ. 23,91,521 ಪರಿಹಾರವಾಗಿ ಎದುರುದಾರರು ದೂರುದಾರರಿಗೆ ನೀಡುವಂತೆಯು ಹಾಗೂ ಈ ವಿಮಾ ಮೊತ್ತಕ್ಕೆ ವಾರ್ಷಿಕ ಶೇ 6% ಬಡ್ಡಿ ಸಮೇತ ದೂರಿನ ದಿನಾಂಕದಿಂದ ಪಾವತಿಯಾಗುವವರೆಗೆ ದೂರುದಾರರಿಗೆ ಪಾವತಿಸುವಂತೆ ಆದೇಶಿಸಿರುತ್ತಾರೆ. ಹಾಗೂ ದೂರುದಾರರಿಗೆ ಉಂಟಾದ ಮಾನಸಿಕ ಯಾತನೆಗಾಗಿ ರೂ. 5000 ಗಳನ್ನು ಹಾಗೂ ದೂರಿನ ಖರ್ಚು ರೂ. 5000 ಗಳನ್ನು 45 ದಿನಗಳ ಒಳಗಾಗಿ ಎದುರುದಾರು ದೂರುದಾರರಿಗೆ ಪಾವತಿಸುವಂತೆ ಆದೇಶವನ್ನು ನೀಡಿರುತ್ತಾರೆ ಎಂದು ಕೊಪ್ಪಳ ಜಿಲ್ಲಾ ಗ್ರಾಹಕರ ಆಯೋಗದ ಸಹಾಯಕ ರಿಜಿಸ್ಟಾçರ ಹಾಗೂ ಸಹಾಯಕ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎದುರುದಾರ ವಿಮಾ ಕಂಪನಿಯವರು ಸದರಿ ಕ್ಲೇಮ್ನ್ನು ಸ್ವೀಕರಿಸಿ, ದೂರುದಾರನಾದ ಶರಣಬಸವ ತಂದೆ ದಿ:ವೀರೇಶಪ್ಪ ಅವರು ಈ ಪಾಲಸಿಯನ್ನು ಪಡೆಯುವ ಸಂದರ್ಭದಲ್ಲಿ ಉದ್ಯೋಗ ಮತ್ತು ಆದಾಯವನ್ನು ತಪ್ಪಾಗಿ ನಮೂದಿಸಿರುತ್ತಾರೆ ಎನ್ನುವ ಕಾರಣಕ್ಕೆ ಪಾಲಸಿಯ ಕ್ಲೇಮ್ನ್ನು ತಿರಸ್ಕಾರ ಮಾಡಿರುತ್ತಾರೆೆ. ದೂರುದಾರರಿಗೆ ಎದುರುದಾರರು ವಿಮಾ ಪಾಲಸಿಯ ಪರಿಹಾರದ ಮೊತ್ತವನ್ನು ನೀಡದೇ ನಿರ್ಲಕ್ಷ ತೋರಿ ಸೇವಾ ನ್ಯೂನತೆ ಎಸಗಿದ್ದರಿಂದ ದೂರುದಾರನು ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಅಯೋಗಕ್ಕೆ ವಿಮಾ ಕಂಪನಿ ವಿರುದ್ಧ ಪರಿಹಾರವನ್ನು ಕೋರಿ ದೂರನ್ನು ಸಲ್ಲಿಸಿರುತ್ತಾರೆ.
ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದೂರನ್ನು ದಾಖಲಿಸಿಕೊಂಡ ನಂತರ ಜಿಲ್ಲಾ ಆಯೋಗದ ಅಧ್ಯಕ್ಷರಾದ ಜಿ.ಇ.ಸೌಭಾಗ್ಯಲಕ್ಷ್ಮೀ ಹಾಗೂ ಸದಸ್ಯರಾದ ರಾಜು.ಎನ್.ಮೇತ್ರಿ ರವರು ವಾದ ಪ್ರತಿವಾದಗಳನ್ನು ಆಲಿಸಿ, ಎದುರುದಾರರಿಂದ ಉಂಟಾದ ಸೇವಾ ನ್ಯೂನತೆಗಾಗಿ ದೂರುದಾರರಿಗೆ ಜೀವ ವಿಮಾ ಪಾಲಸಿಯ ಒಟ್ಟು ಮೊತ್ತ ರೂ. 23,91,521 ಪರಿಹಾರವಾಗಿ ಎದುರುದಾರರು ದೂರುದಾರರಿಗೆ ನೀಡುವಂತೆಯು ಹಾಗೂ ಈ ವಿಮಾ ಮೊತ್ತಕ್ಕೆ ವಾರ್ಷಿಕ ಶೇ 6% ಬಡ್ಡಿ ಸಮೇತ ದೂರಿನ ದಿನಾಂಕದಿಂದ ಪಾವತಿಯಾಗುವವರೆಗೆ ದೂರುದಾರರಿಗೆ ಪಾವತಿಸುವಂತೆ ಆದೇಶಿಸಿರುತ್ತಾರೆ. ಹಾಗೂ ದೂರುದಾರರಿಗೆ ಉಂಟಾದ ಮಾನಸಿಕ ಯಾತನೆಗಾಗಿ ರೂ. 5000 ಗಳನ್ನು ಹಾಗೂ ದೂರಿನ ಖರ್ಚು ರೂ. 5000 ಗಳನ್ನು 45 ದಿನಗಳ ಒಳಗಾಗಿ ಎದುರುದಾರು ದೂರುದಾರರಿಗೆ ಪಾವತಿಸುವಂತೆ ಆದೇಶವನ್ನು ನೀಡಿರುತ್ತಾರೆ ಎಂದು ಕೊಪ್ಪಳ ಜಿಲ್ಲಾ ಗ್ರಾಹಕರ ಆಯೋಗದ ಸಹಾಯಕ ರಿಜಿಸ್ಟಾçರ ಹಾಗೂ ಸಹಾಯಕ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.