ನೂತನ ವಾಸವಿ ರಥ ಸಮರ್ಪಣೆ
ಕೊಪ್ಪಳ 19:
ಸೋಮವಾರದಂದು ಕೊಪ್ಪಳದಲ್ಲಿರುವ ಶ್ರೀ ವಾಸವಿ ಕನ್ನಿಕಾಪರಮೇಶ್ವರಿ ಅಮ್ಮನವರಿಗೆ ನೂತನ ವಾಸವಿ ರಥವನ್ನು ಶಾಸ್ತ್ರೋಕ್ತವಾಗಿ ರಥಾಂಗ ಹೋಮವನ್ನು ನೆರವೇರಿಸಿ ಸಮರ್ಪಿಸಲಾಯಿತು, ಈ ಸಂದರ್ಭದಲ್ಲಿ ನೂತನ ರಥದ ದಾನಿಗಳಾದ ಶ್ರೀನಿವಾಸ ಗುಪ್ತಾ ಅವರನ್ನು ಮತ್ತು ವಾಸವಿ ರಥವನ್ನು ಸುಂದರವಾಗಿ ಮತ್ತು ಆಕರ್ಷಕವಾಗಿ ನಿರ್ಮಿಸಿದ ರಥಶಿಲ್ಪಿಯಾದ ಬಡಿಗೇರ ಸಾ|| ಭಾನಾಪುರ ಮತ್ತು ಕುಟುಂಬದವರನ್ನು ಗೌರವ ಆದರಗಳಿಂದ ಸತ್ಕರಿಸಿ ಸನ್ಮಾನಿಸಲಾಯಿತು, ಈ ಸಮಯದಲ್ಲಿ ಆರ್ಯವೈಶ್ಯ ಕುಲಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಥೋತ್ಸವ ನೆರವೇರಿಸಿರುವುದು ವಿಶೇಷವಾಗಿತ್ತು ಎಂದು ಕೊಪ್ಪಳ ಜಿಲ್ಲಾ ಸಮಿತಿಯ ಕಾರ್ಯದರ್ಶಿಗಳಾದ ಡಿ ಗುರುರಾಜ
Comments are closed.