ಸಾವಿನಲ್ಲೂ ಸಾರ್ಥಕತೆ ಮೆರೆದ ಸಾಹಿತಿ ವಿಮಲಾ ಇನಾಮ್ದಾರ್

Get real time updates directly on you device, subscribe now.

ಕೊಪ್ಪಳ : ಜಿಲ್ಲೆಯ ಹಿರಿಯ ಸಾಹಿತಿ ವಿಮಲಾ ಇನಾಮ್ದಾರ್ ಅಲ್ಪಕಾಲದ ಅಸ್ವಸ್ಥತೆಯಿಂದ ನಿನ್ನೆ ನಿಧನರಾದರು .   ಜಿಲ್ಲೆಯ ಹಿರಿಯ ಸಾಹಿತಿಯಾಗಿದ್ದ ವಿಮಲಾ ಇನಾಮ್ದಾರ್ ಅವರು 18ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ ತಮ್ಮ ಸಾಹಿತ್ಯ ಸೇವೆಗಾಗಿ ಹಲವಾರು ಪುರಸ್ಕಾರಗಳನ್ನು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಎಂಟು ಕವನ ಸಂಕಲನ ಎರಡು ಕಥಾ ಸಂಕಲನ 5 ಚುಟುಕು ಕವನಗಳ ಸಂಕಲನ ಸೇರಿದಂತೆ 18ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸಿದ್ದರು.  ವಿಮಲಾ ಇನಾಮ್ದಾರ್ ಅವರ ನಿಧನಕ್ಕೆ ಕೊಪ್ಪಳದ ಸಾಹಿತ್ಯ ಬಳಗ ಕಂಬನಿ ಮಿಡಿದಿದೆ. ಕವಿ ಸಮಯ ಕಾರ್ಯಕ್ರಮದಲ್ಲಿ ನಿರಂತರವಾಗಿ ಭಾಗವಹಿಸುತ್ತಿದ್ದ ವಿಮಲಾ ಇನಾಂದರ್ ತಮ್ಮ ಸಾವಿನಲ್ಲು ಸಾರ್ಥಕತೆ ಮೆರೆದಿದ್ದಾರೆ.  ತಮ್ಮ ದೇಹವನ್ನು ಕೊಪ್ಪಳ ಮೆಡಿಕಲ್ ಕಾಲೇಜಿಗೆ ದಾನವಾಗಿ ನೀಡಲು ನಿರ್ಧರಿಸಿದ್ದರು ಅದರಂತೆ ಅವರ ಮತ ದೇಹವನ್ನು  ದಾನ ಮಾಡಲಾಯಿತು.

ನಿನ್ನೆ ರಾತ್ರಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಅಲ್ಲಮಪ್ರಭು ಬೆಟ್ಟದೂರ್ ಎಚ್ಎಸ್ ಪಾಟೀಲ್ ಜಿಎಸ್ ಗೋನಾಳ್ ಎಎಂ ಮದರಿ ಸೇರಿದಂತೆ ಇತರರು ಭಾಗವಹಿಸಿ ಶ್ರದ್ಧಾಂಜಲಿ ಅರ್ಪಿಸಿದರು.

Get real time updates directly on you device, subscribe now.

Comments are closed.

error: Content is protected !!
%d bloggers like this: