ಕಾಂಗ್ರೆಸ್ ಕಚೇರಿಗೆ ಬಿತ್ತಿ ಪತ್ರ ಅಂಟಿಸಲು ಹೊರಟಿದ್ದ ಬಿಜೆಪಿ ಮುಖಂಡರ ಬಂಧನ

Get real time updates directly on you device, subscribe now.

ಕೊಪ್ಪಳ : ತುರ್ತು ಪರಿಸ್ಥಿತಿ ಕುರಿತು ಕಾಂಗ್ರೆಸ್ ಪಕ್ಷ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬಿತ್ತಿ ಪತ್ರ ಅಂಟಿಸಲು ಹೊರಟಿದ್ದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಕಾಂಗ್ರೆಸ್ ಕಚೇರಿಗೆ ಬಿತ್ತಿ ಪತ್ರ ಅಂಟಿಸಲು ಹೊರಟ ಬಿಜೆಪಿ ಮುಖಂಡರನ್ನು ಕೊಪ್ಪಳ ನಗರದ ಮುಂಡರಗಿ ಭೀಮರಾಯ ಸರ್ಕಲ್ ನಲ್ಲಿ ಬಂಧಿಸಿ ಕರೆದೊಯ್ದರು. ಪ್ರತಿಭಟನಕಾರರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ವಕ್ತಾರರಾದ ಸೋಮಶೇಖರಗೌಡ್ರು ಸೋಂಪುರ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ನಾಡಿಗೇರ, ಮುಖಂಡರಾದ ಮಹೇಶ್ ಹಾದಿಮನಿ, ನೀಲಕಂಠಯ್ಯನವರು, ಪ್ರದೀಪ್ ಹಿಟ್ನಾಳ್ ಸುನಿಲ್ ಹೆಸರೂರ್, ಪುಟ್ಟರಾಜ್ ಚಕ್ಕಿ. ಗಣೇಶ್ ಹೊರ್ಟ್ರತ್ನಾಳ ವಿವಿಧ ಮೋರ್ಚಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: