ಬೆಂಗಳೂರಿನಲ್ಲಿ ಕೆ.ಎಂ.ಸೈಯದ್ ಗೆ ಸನ್ಮಾನ 

0

Get real time updates directly on you device, subscribe now.

ಕೊಪ್ಪಳ : ವಿಶ್ವೇಶ್ವರಯ್ಯ 163ನೇ ಜನ್ಮ ದಿನಾಚರಣೆ ಅಂಗವಾಗಿ  9ನೇ ರಾಷ್ಟ್ರೀಯ ನೃತ್ಯ ಕಲಾಮೇಳ“ಎಡಪಂಥಿಯ ಮತ್ತು ಬಲಪಂಥಿಯ ಸುಳಿಯಲ್ಲಿ ಸರ್ ಎಂ. ವಿಶೇಶ್ವರಯ್ಯನವರು”ವಿಚಾರ ಸಂಕಿರಣದಲ್ಲಿ ಪ್ರಶಸ್ತಿ ವಿತರಿಸಲು ಆಗಮಿಸಿದ ಕೆಪಿಸಿಸಿ ಸಂಯೋಜಕ ಹಾಗೂ ಉದ್ಯಮಿ ಕೆ.ಎಂ. ಸೈಯದ್ ಅವರಿಗೆ ಬೆಂಗಳೂರಿನ ನಯನ ರಂಗಮಂದಿರ ರವೀಂದ್ರ ಕಲಾಕ್ಷೇತ್ರದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ದಿವ್ಯಸಾನಿಧ್ಯ ಮತ್ತು ಆಶೀರ್ವಚನ ಡಾ. ಬಸವ ರಮಾನಂದ ಮಹಾಸ್ವಾಮಿಗಳು ಶ್ರೀ ವನಕಲ್ಲು ಮಲ್ಲೇಶ್ವರ ಸುಕ್ಷೇತ್ರ, ಹೆಗ್ಗುಂದ ಬೆಂಗಳೂರು ವಹಿಸಿದ್ದರು. ಅಧ್ಯಕ್ಷತೆ ಡಾ. ಎಲ್.ಎನ್. ಮುಕಂದರಾಜ್  ಅಧ್ಯಕ್ಷರು, ಕರ್ನಾಟಕ ಸಾಹಿತ್ಯ ಅಕಾಡೆಮಿ
ಪ್ರಶಸ್ತಿ ಪ್ರದಾನ ಶಂಕರಭಟ್ ಹಿರಿಯ ಚಲನಚಿತ್ರ ಕಲಾವಿದರು ಮಾಡಿದರು.
“ಸರ್. ಎಂ. ವಿ. ಬದುಕು ಬರಹ” ಡಾ. ರಾಜಶೇಖರ ಮಠಪತಿ (ರಾಗಂ) ಸಾಹಿತಿಗಳು, ಚಲನಚಿತ್ರ ನಿರ್ದೇಶಕರು ಬೆಂಗಳೂರು ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಗಳಾಗಿ ಡಾ. ಅಂಬರೀಷ್ ಜಿ. ಗೊಂದಾಳ ಸಹಕಾರ ಧುರೀಣರು, ಪತ್ರಕರ್ತರು ಬೆಂಗಳೂರು, ಶ್ರೀಮತಿ ಮೀನಾ ಚಲನಚಿತ್ರ ಕಲಾವಿದರು,  ಕಾರ್ಯಕ್ರಮದ ಅಧ್ಯಕ್ಷರು ರಮೇಶ ಸುರ್ವೆ ಪತ್ರಕರ್ತರು, ಚಲನಚಿತ್ರ ನಿರ್ದೇಶಕರು ಹಾಗೂ
ಉತ್ತರ ಕರ್ನಾಟಕ ಸಂಚಾಲಕರಾದ ಬಿ.ಎಚ್. ಹೊಂಗಲ್ ಬೆಳಗಾವಿ ಪಾಲ್ಗೊಂಡಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!
%d bloggers like this: