೧೦ ಮೇ ಸಾಹಿತ್ಯ ಮೇಳ- ತಾವರಗೇರಿಯಲ್ಲಿ ಮೇ ೧೮ ರಿಂದ ಮೂರು ದಿನ ಚಿತ್ರ ಕಲಾ ಶಿಬಿರ

Get real time updates directly on you device, subscribe now.

ಕೊಪ್ಪಳ ಮೇ ೧೫: ಕೊಪ್ಪಳದಲ್ಲಿ ೨೫ ಮತ್ತು ೨೬ ಎರಡು ದಿನಗಳ ಕಾಲ ನಡೆವ ೧೦ ಮೇ ಸಾಹಿತ್ಯ ಮೇಳದ ಮುಖ್ಯ ಆಶಯ ಕೇಂದ್ರಿಕರಿಸಿ ತಾವರಗೇರಿಯಲ್ಲಿ ಮೇ ೧೮ ರಿಂದ ಮೂರು ದಿನ ಚಿತ್ರ ಕಲಾ ಶಿಬಿರ ನಡೆಯುತ್ತದೆ.
ಚಿತ್ರ ಕಲಾ ಶಿಬಿರದ ನಿರ್ದೇಶಕರಾಗಿ ಹಿರಿಯ ಕಲಾವಿದ ಬಿ. ಮಾರುತಿ ಇರಲಿದ್ದಾರೆ ಅವರಿಗೆ ಸಹಾಯಕರಾಗಿ ದೀಪು ಮತ್ತು ಲಕ್ಷ್ಮಣ ಪಿರಗಾರ ಕಾರ್ಯನಿರ್ವಹಿಸುವರು.
ಕು?ಗಿ ತಾಲೂಕಿನ ತಾವರಗೇರಿಯ ಮಾನವ ಬಂಧುತ್ವ ವೇದಿಕೆಯ ಬೌದ್ಧ ವಿಹಾರದಲ್ಲಿ ಮೇ ೧೮, ೧೯,೨೦ ರಂದು ಮೂರು ದಿನ ೨೦ ಜನ ಕಲಾವಿದರು ಈ ಶಿಬರದಲ್ಲಿ ಭಾಗವಹಿಸುತ್ತಾರೆ.
ಕುಷ್ಟಗಿ ಬಿಇಒ ಸುರೇಂದ್ರ ಕಾಂಬ್ಳೆ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಕಾರ್‍ಯಕ್ರಮ ನಡೆಯಲಿದ್ದು. ಗದುಗಿನ ಹಿರಿಯ ಕಲಾವಿದ ಬಿ ಎಲ್ ಚೌವ್ಹಾಣ ಉದ್ಘಾಟಿಸಲಿದ್ದಾರೆ. ಹಿರಿಯ ಸಾಹಿತಿ ಎ ಎಂ ಮದರಿ ಹಾಗು ಯುವ ಚಿಂತಕ ಎಂ ಕೆ ಸಾಹೇಬ ಅತಿಥಿಗಳಾಗಿ ಆಗಮಿಸಿದ್ದಾರೆ ಎಂದು ಮೇ ಸಾಹಿತ್ಯ ಬಳಗವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!
%d bloggers like this: