ಅಮಾನತ್ತುಗೊಂಡ ಶಿಕ್ಷಕರ ಸ್ಥಳನಿಯುಕ್ತಿಗೆ ಆಯುಕ್ತರಿಗೆ ಮನವಿ
ಸಾರ್ವಜನಿಕರ ದೂರು ಮತ್ತು ಕರ್ತವ್ಯಲೋಪದಡಿಯಲ್ಲಿ ಆಡಳಿತಾತ್ಮಕ ಹಿತ ದೃಷ್ಠಿಯಿಂದ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಕೇಸೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಭಾರತಿ ಭಟ್ ಅವರನ್ನು ದಿನಾಂಕ: 21-12-2023 ರಂದು ಹಾಗೂ ಗಂಗಾವತಿ ತಾಲ್ಲೂಕಿನ ಸಂಗಾಪುರದ ಶ್ರೀರಂಗದೇವರಾಯಲು ನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿಯಾದ ಪುಷ್ಪಾವತಿ ಎನ್. ಮತ್ತು ಸಹಶಿಕ್ಷಕರಾದ ಶರಣಬಸವರಾಜ ಅವರನ್ನು ದಿನಾಂಕ: 04-04-2024 ರಂದು ಅಮಾನತು ಮಾಡಲಾಗಿತ್ತು.
ಅಮಾನತ್ತುಗೊಂಡ ಶಿಕ್ಷಕರನ್ನು ಅಮಾನತು ವಿಚಾರಣೆ ಕಾಯ್ದಿರಿಸಿ ಕರ್ತವ್ಯಕ್ಕೆ ಪುನರಸ್ಥಾಪನೆ ಹಾಗೂ ಸ್ಥಳ ನಿಯುಕ್ತಿಗೊಳಿಸಿ ತಂತ್ರಾAಶದಲ್ಲಿಯೇ ಖಡ್ಡಾಯವಾಗಿ ಮಾಹಿತಿಯನ್ನು ಇಂಡೀಕರಿಸಬೇಕಿರುವುದರಿAದ 2023-24ನೇ ಸಾಲಿನ ಶಿಕ್ಷಕರ ವಾರ್ಗವಣೆ ಪ್ರಕ್ರಿಯೆ ಮುಕ್ತಾಯದವರೆಗೂ ಪ್ರಸ್ತುತ ಅಮಾನತುಗೊಂಡಿರುವ ಶಿಕ್ಷಕರುಗಳ ಅಮಾನತು ತೆರವುಗೊಳಿಸಿ ಸ್ಥಳನಿಯುಕ್ತಿಗೊಳಿಸುವ ಕುರಿತು ಅನುಮತಿ ಹಾಗೂ ಮಾರ್ಗದರ್ಶನ ನೀಡುವಂತೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿದ್ದು, ಆಯುಕ್ತರಿಂದ 2-3 ದಿನಗಳಲ್ಲಿ ಅನುಮತಿ ಬರುವುದು. ಅನುಮತಿ ಬಂದ ಕೂಡಲೇ ಶಿಕ್ಷಕರುಗಳ ಅಮಾನತು ತೆರವುಗೊಳಿಸಿ ಸೇವೆಗೆ ಪುನರಸ್ಥಾಪಿಸಲಾಗುವುದು ಎಂದು ಇಲಾಖೆಯ ತಿಳಿಸಿದೆ.
Comments are closed.