ಚಟುವಟಿಕೆಗಳಿಂದ ಕಲಿತ ಜ್ಞಾನ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ: ಟಿ.ಎಸ್.ಶಂಕ್ರಯ್ಯಾ

0

Get real time updates directly on you device, subscribe now.


ಕೊಪ್ಪಳ: ಚಟುವಟಿಕೆಗಳ ಮೂಲಕ ಕಲಿತ ಜ್ಞಾನವು ಮಕ್ಕಳಲ್ಲಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಟಿ.ಎಸ್.ಶಂಕ್ರಯ್ಯಾ ಹೇಳಿದರು.
ಅವರು ಗುರುವಾರ ಶ್ರೀಶೈಲನಗರದ ಸ.ಹಿ.ಪ್ರಾ.ಶಾಲೆಯಲ್ಲಿ ಐ.ಎಫ್.ಓ.ಕಲಾ ಸಂಸ್ಥೆ ಹಾಗೂ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉರ್ದು ಮತ್ತು ಕನ್ನಡ ಭಾಷಾ ಕಲಿಕೆಯೊಂದಿಗೆ ಕಲಾ ಸಂಯೋಜಿತ ಚಟುವಟಿಕೆಗಳ ಕಾರ್ಯಕ್ರಮವನ್ನು ತಮಟೆ ಭಾರಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಾ,ಶಿಕ್ಷಕರಾದವರು ಮಕ್ಕಳಲ್ಲಿ ಬೋಧನೆ ಮಾಡುವ ಸಮಯದಲ್ಲಿ ಚಟುವಟಿಕೆಗಳನ್ನು ಮಾಡಿಸದೇ ನೇರವಾಗಿ ಇರುವ ವಿಷಯಗಳನ್ನು ಹೇಳುವುದರಿಂದ ಕಲಿಕೆಯು ಪರಿಣಾಮಕಾರಿಯಾದ ರೀತಿಯಲ್ಲಿ ಆಗಲು ಸಾಧ್ಯವಿಲ್ಲ.ಮಕ್ಕಳಿಗೆ ಪಠ್ಯ ವಿಷಯದ ಜೊತೆಯಲ್ಲಿ ಚಟುವಟಿಕೆಗಳ ಮೂಲಕ ವಿಷಯದ ಜ್ಞಾನವನ್ನು ಹೇಳುವುದರಿಂದ ಕಲಿತ ಜ್ಞಾನವು ಮಕ್ಕಳಲ್ಲಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ.ಕಲಾಅಂರ್ತಗತ ಕಲಿಕೆ ಎಂಬ ಪರಿಕಲ್ಪನೆಯ ಮೂಲಕ ಮಕ್ಕಳಲ್ಲಿ ಸ್ಥಳೀಯವಾಗಿ ಇರುವ ಹೋರಾಟಗಾರರ ಪರಿಚಯ,ಸ್ಥಳ ಭೇಟಿ,ಚಾರಣ ಜೊತೆಯಲ್ಲಿ ತಾವಣಿ ಹಾಗೂ ತತ್ವಪದಗಳನ್ನು ಪರಿಚಯ ಮಾಡಿಕೊಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ.ಇಂತಹ ಶಿಬಿರದ ಮೂಲಕ ಮಕ್ಕಳಿಗೆ ದೇಶಪ್ರೇಮ,ದೇಶಭಕ್ತಿ,ಸ್ಥಳಿಯ ಇತಿಹಾಸದ ಕುರುಹುಗಳ ಪರಿಚಯವಾಗುತ್ತದೆ.ಇದರ ಸರಿಯಾದ ರೀತಿಯ ಸದುಪಯೋಗವನ್ನು ಮಕ್ಕಳ ಪಡೆದುಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ,ಬೇಸಿಗೆ ರಜಾ ಅವಧಿಯನ್ನು ಅನೇಕ ಮಕ್ಕಳು ಅದರ ಸರಿಯಾದ ಬಳಕೆಯನ್ನು ಮಾಡಿಕೊಳ್ಳದೇ ಸಮಯ ವ್ಯರ್ಥ ಮಾಡುವವರೇ ಹೆಚ್ಚಾಗಿದ್ದಾರೆ.ಆದರೆ ಬೇಸಿಗೆ ರಜಾ ಅವಧಿಯನ್ನು ಶಿಬಿರ ಸೇರಿದಂತೆ ಅನೇಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರ ಮೂಲಕ ಆ ಅವಧಿಯನ್ನು ಸರಿಯಾದ ರೀತಿಯಲ್ಲಿ ಬಳಿಸಿಕೊಳ್ಳಬೇಕು.ಶ್ರೀಶೈಲನಗರ ಶಾಲೆಯಲ್ಲಿ ವಿಭಿನ್ನವಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರ ಮೂಲಕ ಇತರೇ ಶಾಲೆಗಳಿಗೆ ಮಾದರಿಯಾಗಿದೆ.ಶಿಬಿರದಲ್ಲಿ ನೀಡಲಾಗುವ ಜ್ಞಾನವನ್ನು ಮಕ್ಕಳು ಸಮರ್ಪಕವಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯರಾದ ಬಾಲನಾಗಮ್ಮ ಮಾತನಾಡುತ್ತಾ,ಇಲಾಖೆ ಹಾಗೂ ಸಮುದಾಯಗಳ ಸಹಕಾರ ಇದ್ದರೆ ಶೈಕ್ಷಣಿಕ ಕ್ಷೇತ್ರದಲ್ಲಿ ಏನೂ ಬೇಕಾದರೂ ಸಾಧಿಸಬಹುದು ಎಂದು ಹೇಳಿದರು.
ಸಾಹಿತಿ ಮಹೇಶ ಬಳ್ಳಾರಿ ಅವರು ಸ್ವಾತಂತ್ರ್ಯ ಹೋರಾಟಗಾರರಾದ ಮುಂಡರಗಿಯ ಭೀಮರಾಯರ ಕುರಿತು ಮಕ್ಕಳಿಗೆ ಉಪನ್ಯಾಸ ನೀಡಿದರು.
ಬಿ.ಆರ್.ಪಿ.ಶರಣಪ್ಪ ರಡ್ಡೇರ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ನಿನಾಸಂ ಸಂಸ್ಥೆಯ ಲಕ್ಷ್ಮಣ್ಣ ಪೀರಗಾರ ಹಾಜರಿದ್ದರು.
ಬಹದ್ದೂರಬಂಡಿ ಕ್ಲಸ್ಟರ್ ಸಿ.ಆರ್.ಪಿ.ಹನುಮಂತಪ್ಪ ಕುರಿ ಕಾರ್ಯಕ್ರಮವನ್ನು ನಿರೂಪಿಸಿದರು.
ಧನ್ವಂತರಿ ಶಾಲೆಯ ಮುಖ್ಯ ಶಿಕ್ಷಕಿ ಮಮತಾ ಚಕ್ರಸಾಲಿ ಸ್ವಾಗತಿ,ವಿರೇಶ ಬಡಿಗೇರ ವಂದಿಸಿದರು.

Get real time updates directly on you device, subscribe now.

Leave A Reply

Your email address will not be published.

error: Content is protected !!
%d bloggers like this: