ವಿಜೃಂಭಣೆಯಿಂದ ಜರುಗಿದ ಡೊಂಬರಳ್ಳಿ ಮಾರುತೇಶ್ವರ ರಥೋತ್ಸವ

Get real time updates directly on you device, subscribe now.

Kannadanet News 24×7

ಕೊಪ್ಪಳ   ತಾಲೂಕಿನ ಡೊಂಬರಳ್ಳಿ ಗ್ರಾಮದಲ್ಲಿ ಯುಗಾದಿ ನಿಮಿತ್ಯ ಶ್ರೀ ಮಾರುತೇಶ್ವರ ಮಹಾ ರಥೋತ್ಸವ ವಿಜೃಂಭಣೆಯಿಂದ ಗುರುವಾರ ಸಂಜೆ ನೆರವೇರಿತು. ಮೈನಳ್ಳಿ ಹಾಗೂ ಬಿಕನಳ್ಳಿ ಉಜ್ಜಯನಿ ಶಾಖಾ ಮಠದ ಶ್ರೀ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ರಥ ಸಾಂಘವಾಗಿ ಸಾಗುತ್ತಿದ್ದಂತೆ ನೆರೆದಿದ್ದ ಭಕ್ತರು ಬಾಳೆ ಹಣ್ಣು, ಉತ್ತತ್ತಿ ಎಸೆಯವ ಮೂಲಕ ಪುನೀತರಾದರು.

ಪತಾಕಿ ಸವಾಲು :

ಶ್ರೀ ಮಾರುತೇಶ್ವರ ಪತಾಕಿ ಸವಾಲು ರಥೋತ್ಸವಕ್ಕೂ ಮುನ್ನ ನೆರವೇರಿತು. ಕೊಪ್ಪಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಾರಡ್ಡಿ ಗಲಬಿ ೩೫ ಸಾವಿರ ರುಪಾಯಿಗೆ ಸವಾಲು ಮಾಡಿಕೊಂಡು, ಮೆರವಣಿಗೆ ಮೂಲಕಪತಾಕಿ ಮನೆಗೆ ಒಯ್ದರು. ಕಳೆದ ವರ್ಷ ಸವಾಲು ಮಾಡಿದ್ದ ಸುಶಿಲಮ್ಮ ಮಾಲಿಪಾಟೀಲ್ ಅವರಿಗೆ ೫೫ ಸಾವಿರ ರುಪಾಯಿಗೆ ಸವಾಲಿಗಿದ್ದನ್ನು ಮೆರವಣಿಗೆಯಲ್ಲಿ ತಂದು ಸಲ್ಲಿಸಿದರು.

Get real time updates directly on you device, subscribe now.

Comments are closed.

error: Content is protected !!
%d bloggers like this: