ರಾಮಮಂದಿರ ಉದ್ಘಾಟನೆ ನಿಮಿತ್ಯ-ರಾಮಾಯಣ, ಮಹಾಭಾರತ ಪರೀಕ್ಷೆ

Get real time updates directly on you device, subscribe now.

ಗಂಗಾವತಿ. :  ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆ ಅಂಗವಾಗಿ ನಗರದಲ್ಲಿ ಮಾತೆಯರಿಗಾಗಿ ರಾಮಾಯಣ ಮತ್ತು ಮಹಾಭಾರತದ ಪರೀಕ್ಷೆಯನ್ನು ಆಯೋಜಿಸಲಾಗಿದೆ.

ಸದ್ಭಾವನಾ ಸೇವಾ ಸಂಸ್ಥೆ ಮತ್ತು ಭಾರತಿ ಸಂಸ್ಕೃತಿ ಪ್ರತಿಷ್ಟಾನ ಬೆಂಗಳೂರು ಸಹಯೋಗದಲ್ಲಿ ಈ ಪರೀಕ್ಷೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಶಾಂತಾ ಸುಬ್ರಮಣ್ಯಭಟ್ ರಾಯ್ಕರ್ ತಿಳಿಸಿದ್ದಾರೆ. ಭಾರತದ ಸನಾತನ ಸಂಸ್ಕೃತಿಯ ತಿರುಳಾಗಿರುವ ರಮಾಯಣ ಮತ್ತು ಮಹಾಭಾರತ ಗ್ರಂಥಗಳು ಪ್ರತಿಯೊಬ್ಬರು ಅಧ್ಯಯನ ಮಾಡಬೇಕು. ಈ ಎರಡು ಭಾರತದ ಪವಿತ್ರ ಗ್ರಂಥಗಳಾಗಿದ್ದು, ಈ ಗ್ರಂಥಗಳಲ್ಲಿ ಬರುವ ಹಲವು ಪಾತ್ರಗಳು ಜೀವನಕ್ಕೆ ಆದರ್ಶವಾಗಿವೆ. ಜೊತೆಗೆ ಬದುಕುವನ್ನು ಕಲಿಸುತ್ತವೆ. ಜಗತ್ತು ಇಂದು ಅಧ್ಯಾತ್ಮಕದ ಕಡೆ ಹೊರಳುತ್ತಿರುವ ಸಂದರ್ಭದಲ್ಲಿ ಭಾರತೀಯರು ವಿದೇಶಿ ಸಂಸ್ಕೃತಿಗೆ ಮಾರು ಹೊಗದೇ ಭಾರತೀಯ ಸಂಸ್ಕೃತಿಯನ್ನು ಇನ್ನಷ್ಟು ಅಳವಡಿಸಿಕೊಳ್ಳುವ ಉದ್ದೇಶದಿಂದ ರಾಮಾಯಣ ಮಹಾಭಾರತ ಅತ್ಯಂತ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ಮತ್ತು ಜ.೨೨ ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ನಿಮಿತ್ಯ ಸಂಸ್ಥೆ ಜೂನ್.೨ ರಂದು ನಗರದ ಲಯನ್ಸ್ ಶಾಲೆಯಲ್ಲಿ ಫೆಬ್ರವರಿ-೨೯ ರೊಳಗೆ ಅರ್ಜಿ ಸಲ್ಲಿಸಬೇಕಾಗಿದೆ. ಪರೀಕ್ಷೆಯಲ್ಲಿ ಪ್ರಥಮ, ದ್ವೀತಿಯ ಮತ್ತು ತೃತಿಯ ಸ್ಥಾನದ ನಗದು ಮಹುಮಾನ ನೀಡಲಾಗುತ್ತದೆ. ಹೆಚ್ಚಿನ ಮಹಾತಿಗಾಗಿ ಸಂಯೋಜಕರಾದ ರೂಪಾ ಗಿರೀಶ್ ರಾಯ್ಕರ್(೯೭೪೩೨೧೪೯೨೪) ಮತ್ತು ಗಾಯತ್ರಿ ಮಂಜುನಾಥ ವರ್ಣೆಕರ್(೮೬೬೦೪೭೫೯೬೬) ಅವರನ್ನು ಸಂಪರ್ಕಿಸಲು ಕೊರಿದ್ದಾರೆ.

Get real time updates directly on you device, subscribe now.

Comments are closed.

error: Content is protected !!
%d bloggers like this: