ಮನೆಯಲ್ಲಿ ಅಯ್ಯಪ್ಪಸ್ವಾಮಿ ಪೂಜೆ, ಮಾಲಾಧಾರಿಗಳಿಗೆ ಸನ್ಮಾನ : ಭಾವೈಕ್ಯತೆಗೆ ಮಾದರಿಯಾದ ಮುಸ್ಲಿಂ ಕುಟುಂಬ

Get real time updates directly on you device, subscribe now.

ಗಂಗಾವತಿ : ಗಂಗಾವತಿ ನಗರದ ಮುಸ್ಲಿಂ ಕುಟುಂಬವೊಂದು ತಮ್ಮ ಮನೆಯಲ್ಲಿಯೇ ಅಯ್ಯಪ್ಪ ಸ್ವಾಮಿ ಪೂಜೆ ನೆರವೇರಿಸಿ ಮಾಲಾಧಾರಿಗಳಿಗೆ ಸನ್ಮಾನಿಸಿ ಪ್ರಸಾದ ವಿತರಿಸಿ ಭಾವೈಕ್ಯತೆ ಮೆರೆದಿದೆ. ನಗರದ ಕೆ.ಎಫ್.ಮುದ್ದಾಬಳ್ಳಿಯವರ ಮನೆಯಲ್ಲಿ ಪೂಜೆ ನೆರವೇರಿದೆ. ಮುದ್ದಾಬಳ್ಳಿಯವರ ಕುಟುಂಬ ಹಲವಾರು ವರ್ಷಗಳಿಂದಲೂ ಅಯ್ಯಪ್ಪ ಪೂಜೆ ನೆರವೇರಿಸುತ್ತಾ ಬಂದಿದೆ. ಈ ಸಲವೂ ತಮ್ಮ ಮನೆಗೆ ಅಯ್ಯಪ್ಪ ಮಾಲಾಧಾರಿಗಳಿಗೆ ಕರೆದು ಪೂಜೆ ನೆರವೇರಿಸಿದ್ದಾರೆ. ಈ ಮೂಲಕ ಭಾವೈಕ್ಯತೆಯನ್ನು ಮೆರೆದಿದ್ದಾರೆ. ಮೊದಲಿನಿಂದಲೂ ಮುದ್ದಾಬಳ್ಳಿಯವರ ಕುಟುಂಬ ಜಿಲ್ಲೆಯಾದ್ಯಂತ ತಮ್ಮ ಸಮಾಜಮುಖಿ ಸೇವೆಗಳಿಂದ ಗುರುತಿಸಿಕೊಂಡಿದೆ. ಕೆ.ಎಫ್.ಮುದ್ದಾಬಳ್ಳಿ ಜಿಲ್ಲಾ ನದಾಪ ಪಿಂಜಾರ ಸಮಾಜದ ಅಧ್ಯಕ್ಷರೂ ಆಗಿದ್ದಾರೆ.

Get real time updates directly on you device, subscribe now.

Comments are closed.

error: Content is protected !!
%d bloggers like this: