ಆರೋಗ್ಯ ಕ್ಷೇತ್ರದ ಖ್ಯಾತನಾಮಾರಾದ ಡಾ.ಎಂ.ಬಿ.ರಾಂಪುರಗೆ ಶ್ರದ್ಧಾಂಜಲಿ-ನುಡಿನಮನ

Get real time updates directly on you device, subscribe now.

ಕೊಪ್ಪಳ : ಭಾರತೀಯ ವೈದ್ಯಕೀಯ ಸಂಘ ಕೊಪ್ಪಳ ಶಾಖೆಯವರು ಇತ್ತೀಚೆಗೆ ದೈವಾಧೀನರಾದ ಡಾ.ಎಂ.ಬಿ.ರಾಂಪುರ, ಕೊಪ್ಪಳ ಜಿಲ್ಲೆಯಲ್ಲಿ ಆರೋಗ್ಯ ಕ್ಷೇತ್ರದ ಖ್ಯಾತನಾಮಾರಾದ ಇವರ ನೆನಪಿನಲ್ಲಿ ಸಂತಾಪ ಸೂಚನಾ ಕಾರ್ಯಕ್ರಮವನ್ನು ಡಾ.ಮಹೇಶ ಗೋವನಕೊಪ್ಪರವರ ಆಸ್ಪತ್ರೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಡಾ ಎಂ ಬಿ ರಾಂಪುರವರ ಭಾವಚಿತ್ರಕ್ಕೆ ಪುಷ್ಪ ಗಳನ್ನು ಸಮರ್ಪಿಸಿ, ಎರಡು ನಿಮಿಷ ಮೌನಚರಣೆ ಮಾಡಿದರು.ಈ ಸಂಧರ್ಭದಲ್ಲಿ ನಗರದ ಹಿರಿಯ ವೈದ್ಯರಾದ ಡಾ ಕೆ ಜಿ ಕುಲಕರ್ಣಿ ಅವರು ಮಾತನಾಡಿ ಡಾ ರಾಂಪುರವರ ವ್ಯಕ್ತಿತ್ವ  ಗಟ್ಟಿತನ ವೈದ್ಯಕೀಯ ಕ್ಷೇತ್ರದಲ್ಲಿ ಅವರು ನೀಡಿದ ಸೇವೆಗಳು ಎಂದೆದಿಗೂ ಮರೆಯಲಾರದ್ದು ಎಂದು ಹೇಳಿ ನುಡಿನಮನ ಸಲ್ಲಿಸಿದರು,

ಡಾ ಮಹೇಂದ್ರ ಕಿಂದ್ರೆ ಅವರು ಮಾತನಾಡುತ್ತ ಡಾ ರಾಂಪುರರವರು ಕೊಪ್ಪಳದ ಜಿಲ್ಲಾ ಆರೋಗ್ಯ ಅಧಿಕಾರಿಗಳಾಗಿ ಮತ್ತು ಜಿಲ್ಲಾ ಶಸ್ತ್ರ ಚಿಕಿತ್ಸಕಾರಗಿ ಸೇವೆ ಸಲ್ಲಿಸಿದ ದಿನಗಳನ್ನು ನೆನೆಸಿಕೊಂಡರು, ಐಎಂಎ ಮಹಿಳಾ ವಿಂಗ್‌ನ ಅಧ್ಯಕ್ಷೆ ಡಾ ಚಂದ್ರಕಲಾ ಅವರು ಮಾತನಾಡಿ ತಮಗೆ ಡಾ ರಾಂಪುರವರು ಗುರುಗಳಂತಿದ್ದು ವೈದ್ಯಕೀಯ ಕ್ಷೇತ್ರದಲ್ಲಿ ಬೆಳೆಯಲು ದಾರಿದೀಪವಾಗಿದ್ದವರು ಎಂದು ನೆನೆಸಿಕೊಂಡರು, ಡಾ ಕಂಬ್ಳಿಯಾಳ, ಡಾ ಮಾದಿನೂರ, ಕಿಮ್ಸ್‌ನ ವೈದ್ಯಕೀಯ ಅಧೀಕ್ಷಕರಾದ ಡಾ ವೇಣುಗೋಪಾಲ, ರೋಗ ನಿದಾನ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ  ಡಾ ಅನಿರುದ್ಧ ವಸಂತ ಕುಷ್ಟಗಿ, ಮಕ್ಕಳ ವಿಭಾಗದ ಮುಖ್ಯಸ್ಥರಾದ  ಡಾ ಗಿರೀಶ ನವಲಿ ಹಿರೇಮಠ, ಡಾ ರವಿ, ಡಾ ಶಿವಪ್ರಸಾದ ಕುಂಬಾರ ಅವರು ಡಾ ರಾಂಪುರವರಿಗೆ ನುಡಿನಮನ ಸಲ್ಲಿಸಿದರು.

ವೈದ್ಯಕೀಯ ಸಂಘದ ಅಧ್ಯಕ್ಷರಾದ ಡಾ ಮಹೇಶ ಗೋವನಕೊಪ್ಪ ಮಾತನಾಡಿ ನುಡಿನಮನ ಸಲ್ಲಿಸಿದರು, ಕೊಪ್ಪಳ ವೈದ್ಯಕೀಯ ಸಂಘದ ಕಾರ್ಯದರ್ಶಿಗಳಾದ ಡಾ ಗೋಪಾಲ ಗೋಟುರರವರು ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಡಾ ವಿಜಯ ಮಹಾಂತೇಶ ಸುಂಕದ, ಡಾ ಪ್ರಸಾದ ಪೊಲೀಸ ಪಾಟೀಲ, ಶ್ರೀನಿವಾಸ ಜುಟೂರ, ಡಾ ಶ್ರೀನಿವಾಸ ರಾಠೋಡ, ಡಾ ವಿಜಯಕುಮಾರ ಅಡವಿ, ಡಾ ಮಹೇಶ ಭಗವತಿ ಡಾ ಕೃಷ್ಞ ಹೊಟ್ಟಲಿ, ಡಾ ಜಗನ್ನಾಥ ದೇಸಾಯಿ ಹಾಗೂ ಅನೇಕ ವೈದ್ಯರು ಮತ್ತು ಇತರ ಸಿಬ್ಬಂದಿಗಳು ಭಾಗವಹಿಸಿ ಅಗಲಿದ ಚೇತನಕ್ಕೆ ಸದ್ಗತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸಿದರು.

Get real time updates directly on you device, subscribe now.

Comments are closed.

error: Content is protected !!
%d bloggers like this: