ಜಿಲ್ಲಾಡಳಿತದಿಂದ ವೀರರಾಣಿ ಓನಕೆ ಓಬವ್ವ ಜಯಂತಿ

Get real time updates directly on you device, subscribe now.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ನವೆಂಬರ್ 11ರಂದು ವೀರರಾಣಿ ಒನಕೆ ಓಬವ್ವ ಜಯಂತಿ ಆಚರಿಸಲಾಯಿತು.
ಜಿಲ್ಲಾಡಳಿತ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪ ವಿಭಾಗಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ತಹಸೀಲ್ದಾರ ವಿಠ್ಠಲ್ ಚೌಗಲಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ಕೊಟ್ರೇಶ ಮಾರಬನಳ್ಳಿ ಅವರು ಸೇರಿದಂತೆ ಸಮಾಜದ ಗಣ್ಯರು ಒನಕೆ ಓಬವ್ವ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಛಲವಾದಿ ಸಮಾಜದ ನಾಯಕರಾದ ಜಿ.ಎಂ.ಬೆಲ್ಲದ, ಜಗದೀಶ ಚಲವಾದಿ, ನಿಂಗಪ್ಪ ಕಾಳಿ, ಅನೀಲ್ ಬೇಗಾರ, ಡಿ.ಕೆ.ಬೆಲ್ಲದ, ಗವಿಸಿದ್ದಪ್ಪ ಚಲವಾದಿ, ಗವಿಸಿದ್ದಪ್ಪ ಬೆಲ್ಲದ, ಗವಿಸಿದ್ದಪ್ಪ ಬಳೂಟಗಿ, ವೀರಬಸಪ್ಪ ಬಿನ್ನಾಳ, ಸಿದ್ರಾಮ ಹೊಸಮನಿ, ಹನುಮಂತಪ್ಪ ಬಾಗಾಳಿಗಿಡದ, ಯಲ್ಲಪ್ಪ ಬಳಗಾನೂರ, ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: