ಅಗ್ನಿವೀರ್ ನೇಮಕಾತಿಯಲ್ಲಿ ಆಯ್ಕೆ : ನಿಯೋಜನೆ

Get real time updates directly on you device, subscribe now.

      ಕೊಪ್ಪಳ :  ನಗರದ ಶ್ರೀಗವಿಸಿದ್ದೇಶ್ವರ ಮಹಾವಿದ್ಯಾಲಯದ  ವಿದ್ಯಾರ್ಥಿಯಾದ  ಶಿವಪ್ಪ ತಂದೆ ನಿಂಗಪ್ಪ ಜಾಲಣ್ಣನವರು ಇವರು 2022 ರ ಡಿಸೆಂಬರ್ ತಿಂಗಳಿನಲ್ಲಿ  ಬೆಳಗಾವಿಯಲ್ಲಿ ನಡೆದ  ಅಗ್ನಿವೀರ್ ನೇಮಕಾತಿಯಲ್ಲಿ ಆಯ್ಕೆಯಾಗಿದ್ದರು. ಇದೀಗ ಅರುಣಾಚಲ ಪ್ರದೇಶದ  ತವಂಗ್  312 ಫೀಲ್ಡ್ ರೆಜಿಮೆಂಟಿಗೆ  ಸ್ಥಳ ನಿಯೋಜನೆ ಪಡೆದುಕೊಂಡಿದ್ದು  ಈ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾನೆ.  ಮೂಲತಃ ಕ್ರೀಡಾಪಟು ಆಗಿದ್ದ ಶಿವಪ್ಪ  ವಿಶ್ವವಿದ್ಯಾಲಯದ ಅಥ್ಲೆಟಿಕ್ಸ   5 ಕಿಲೋಮೀಟರ ಓಟ ಹಾಗೂ ಗುಡ್ಡಗಾಡು ಓಟದಲ್ಲಿ ಬ್ಲೂ  ಆಗಿದ್ದು, ಅಖಿಲ ಭಾರತ ಅಂತರ್  ವಿಶ್ವವಿದ್ಯಾಲಯಗಳ  ಕ್ರೀಡಾ ಕೂಟದಲ್ಲಿ  ಸಹ ಭಾಗವಹಿಸಿರುತ್ತಾನೆ.     ಈ ಸಾಧನೆಗೆ  ಆಡಳಿತ ಮಂಡಳಿ ಮೆಚ್ಚುಗೆ ವ್ಯಕ್ತ ಪಡಿಸಿದೆ. ಇದೇ ಸಂದರ್ಭದಲ್ಲಿ  ಶಿವಪ್ಪ ಇವರಿಗೆ ಪ್ರಾಚಾರ್ಯರು, ದೈಹಿಕ ನಿರ್ದೇಶಕರು , ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು  ಸನ್ಮಾನಿಸಿ ಅಭಿನಂದಿಸಿದ್ದಾರೆ. 

Get real time updates directly on you device, subscribe now.

Comments are closed.

error: Content is protected !!
%d bloggers like this: