ಅಂಬೇಡ್ಕರ್ ಜಯಂತಿ ಹಿನ್ನೆಲೆ ರಾಜ್ಯ ಮಟ್ಟದ ಮುಕ್ತ ರಸಪ್ರಶ್ನೆ ಸ್ಪರ್ಧೆ
ಅಂಬೇಡ್ಕರ್ ವ್ಯಕ್ತಿಯಲ್ಲ, ನಮಗೆ ಪ್ರೇರಕ ಶಕ್ತಿ: ದೊಡ್ಡನಗೌಡ ಪಾಟೀಲ್










ಅಭೂತಪೂರ್ವ ಯಶಸ್ಸಿಗೆ ಅಭಿಮಾನ ಪೂರ್ವಕ ವಂದನೆಗಳು
ಡಾ ಬಿ ಆರ್ ಅಂಬೇಡ್ಕರ್ ಅವರ ಬದುಕು ಮತ್ತು ಬರಹದ ಕುರಿತು ರಾಜ್ಯ ಮಟ್ಟದ ರಸಪ್ರಶ್ನೆ ಕಾರ್ಯಕ್ರಮದ ಅಭೂತಪೂರ್ವ ಯಶಸ್ವಿಗೆ ಶ್ರಮಿಸಿದ ನನ್ನೆಲ್ಲಾ ಆತ್ಮೀಯ ಸ್ನೇಹ ಬಳಗಕ್ಕೆ ತುಂಬು ಹೃದಯದ ಅನಂತ ವಂದನೆಗಳು , ಇದೊಂದು ಸಾರ್ಥಕ ಕ್ಷಣ , ಯೋಜಿಸಿದಂತೆ ಕಾರ್ಯಕ್ರಮವು ಸಕಾರಣಗೊಂಡ ಸುಸಂದರ್ಭ, ಒಂದು ಚಪ್ಪಾಳೆಗೆ ಎರಡು ಕೈಗಳು ಎಷ್ಟು ಮುಖ್ಯವೋ, ಒಂದು ಕಾರ್ಯಕ್ರಮದ ಯಶಸ್ವಿಗೆ ಹಲವಾರು ಸಹೃದಯ ಮನಸ್ಸುಗಳ ಕೈಜೋಡಿಸಿವಿಕೆಯು ಅಷ್ಟೇ ಮುಖ್ಯ, ಎಲ್ಲವೂ ಇಂದು ಸಾಧ್ಯವಾಗಿದೆ, ಕಳೆದ 20 ದಿನಗಳ ಹಿಂದೆ ಅಂದುಕೊಂಡಂತೆ ಪ್ರತಿಯೊಬ್ಬರು ತಮ್ಮ ಇಚ್ಛಾಶಕ್ತಿಯ ಮನಪೂರ್ವಕವಾಗಿ ಕೈಜೋಡಿಸಿದರೆ ಪರಿಣಾಮವಾಗಿ ಇಂದಿನ ರಾಜ್ಯಮಟ್ಟದ ರಸಪ್ರಶ್ನೆ ಕಾರ್ಯಕ್ರಮವು ಒಳ್ಳೆಯ ಜಯವನ್ನು ಪಡೆದಿದೆ ಈ ಗೆಲುವಿಗೆ ಹಲವರು ಹಲವು ರೀತಿಯಲ್ಲಿ ಶ್ರಮಿಸಿದ್ದೀರಿ , ಕಾರ್ಯಕ್ರಮಕ್ಕೆ ಆಗಮಿಸಿ ಬೆನ್ನು ತಟ್ಟಿ ಶುಭ ಕೋರಿದ ಎಲ್ಲ ಜನಪ್ರತಿನಿಧಿಗಳಿಗೂ ಕುಷ್ಟಗಿ ತಾಲೂಕ ಆಡಳಿತದ ಹಿರಿಯ ಅಧಿಕಾರಿಗಳಿಗೂ ಅವಿರತವಾಗಿ ಶ್ರಮಿಸಿದ ಶಿಕ್ಷಕ ವೃಂದಕ್ಕೂ, ನನ್ನ ಇಲಾಖೆಯ ಸಮಸ್ತ ಬಳಗಕ್ಕೂ,, ಕುರುಗೋಡಿನ ಸ್ನೇಹ ಶಿಕ್ಷಕ ಬಳಗಕ್ಕೂ , ಸಾರ್ವಜನಿಕರಿಗೂ ಸ್ನೇಹಿತರಿಗೂ ಮಾಧ್ಯಮದ ಬಂಧುಗಳಿಗೂ ಅವರಿವರೆಂದರೆ ಸರ್ವರಿಗೂ ತಮ್ಮೆಲ್ಲರ ಸಹಕಾರಕ್ಕಾಗಿ ತುಂಬು ಹೃದಯದ ಅನಂತ ವಂದನೆಗಳು –
ವಿಶ್ವನಾಥ ಹಿರೇಗೌಡರ ಸಿಪಿಐ