ಹಣದ ಸಾಕ್ಷರತೆಯ ಮತ್ತು ಹೂಡಿಕೆ ವಿಶೇಷ ಉಪನ್ಯಾಸ.
Special lecture on financial literacy and investment.
Special lecture on financial literacy and investment.
ಎಸ್ ಕೆ ಎನ್ ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಣಕಾಸಿನ ಸಾಕ್ಷರತೆ ಮತ್ತು ಹೂಡಿಕೆ ಒಂದು ದಿನದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ವಾಣಿಜ್ಯ ವಿಭಾಗವು ಆಯೋಜನೆ ಮಾಡಲಾಗಿದು
ಈ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ವನ್ನು ಸೆಬಿ (SEBI) ಸ್ಮಾರ್ಟ್ ಟ್ರೈನರ್ ಕೃಷ್ಣ ಅಯ್ಯರ್ ರವರು ಮ್ಯೂಚುಯಲ್ ಫಂಡ್ಸ್ ಬಗ್ಗೆ ,ಷೇರು ಮಾರುಕಟ್ಟೆಯಲ್ಲಿ ಲಭ್ಯವಿರುವ ಹೂಡಿಕೆ ಬಗ್ಗೆ ಮಹಿಳಾ ಉಪನ್ಯಾಸಕರನ್ನು ಕುರಿತು ಮಾತನಾಡಿರುತ್ತಾರೆ ಈ ಕಾರ್ಯಕ್ರಮದಲ್ಲಿ ವಾಣಿಜ್ಯ ಶಾಸ್ತ್ರದ ವಿಭಾಗದ ಮುಖ್ಯಸ್ಥರಾದ ಶ್ರೀ ಅಕ್ಕಿ ಮಾರುತಿ ಅವರು ಪ್ರಾಸ್ತಾವಿಕ ನುಡಿಗಳನ್ನು ಮಾತನಾಡುತ್ತಾ ಇಂದಿನ ಸಮಾಜಕ್ಕೆ ಅವಶ್ಯಕವಾಗಿರುವ ಹೂಡಿಕೆಯ ವಿವಿಧ ಆಯಾಮಗಳನ್ನು ಮತ್ತು ಹಣಕಾಸಿನ ಸಾಕ್ಷರತೆಯನ್ನು ಕುರಿತು ಕಾರ್ಯಕ್ರಮದ ಉದ್ದೇಶಗಳನ್ನು ತಿಳಿಸಿರುತ್ತಾರೆ. ಈ ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಡಾಕ್ಟರ್ ಜಿ ಶಿವರಾಜ್ ಗುರಿಕಾರ್ ರವರು ಅಧ್ಯಕ್ಷತೆಯ ನುಡಿಗಳನ್ನು ಮಾತನಾಡುತ್ತಾ ಕಾರ್ಯಕ್ರಮವನ್ನು ಆಯೋಜಿಸಿದ್ದ ವಿಭಾಗಕ್ಕೆ ಅಭಿನಂದನೆಗಳನ್ನು ತಿಳಿಸಿರುತ್ತಾರೆ ಈ ಒಂದು ಕಾರ್ಯಕ್ರಮದಲ್ಲಿ ವಾಣಿಜ್ಯಶಾಸ್ತ್ರದ ವಿಭಾಗದ ಎಲ್ಲಾ ಅಧ್ಯಾಪಕರು ಕಾರ್ಯಕ್ರಮಕ್ಕೆ ಸಾಕ್ಷಿ ಯಾಗಿದ್ದರು ಮತ್ತು ಕಾರ್ಯಕ್ರಮ ದಲ್ಲಿ ವೇದಿಕೆಯನ್ನು ಮತ್ತು ಮಹಿಳಾ ಸಿಬ್ಬಂದಿಗಳಿಗೆ ಶ್ರೀಮತಿ ಮೆಹತಾಬ್ ಅಂಜುಮ್ ರವರು ಸ್ವಾಗತಿಸಿದರು ಈ ಒಂದು ಕಾರ್ಯಕ್ರಮದಲ್ಲಿ ಡಾಕ್ಟರ್ ಸಂದೀಪ್ ರವರು ಸಂಪನ್ಮೂಲ ವ್ಯಕ್ತಿಗಳನ್ನ ಪರಿಚಯಿಸಿದರು, ನಿರೂಪಣೆಯನ್ನು ಶಿವಕುಮಾರ್ ಯು ರವರು ಹಾಗೂ ಶ್ರೀ ಮಂಜುನಾಥ ವಂದಿಸಿದರು.