ಗಣರಾಜ್ಯೋತ್ಸವವು ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಹೃದಯವಾಗಿದೆ
ನಗರದ ಶ್ರೀ ನಂದೀಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು ಭಾರತದ ಆಧುನಿಕ ಇತಿಹಾಸದಲ್ಲಿ ಜನವರಿ 26 ಒಂದು ಸಾಮಾನ್ಯ ದಿನವಲ್ಲ. ಈ ದಿನವನ್ನು ನಾವು ಹೆಮ್ಮೆಯಿಂದ ಗಣರಾಜ್ಯೋತ್ಸವ ಎಂದು ಆಚರಿಸುತ್ತೇವೆ. ವಿಶೇಷವಾಗಿ 2026ರ ಗಣರಾಜ್ಯೋತ್ಸವ ನಮಗೆ ನಮ್ಮ ಸಂವಿಧಾನ, ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ನಾಗರಿಕ ಹೊಣೆಗಾರಿಕೆಯನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವಂತಹ ಒಂದು ಮಹತ್ವದ ಸಂದರ್ಭವಾಗಿದೆ.
ಭಾರತವು 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ಪಡೆದರೂ, ನಮ್ಮ ಸಂವಿಧಾನ ಜಾರಿಗೆ ಬಂದದ್ದು 1950ರ ಜನವರಿ 26ರಂದು. ಆ ದಿನದಿಂದ ನಮ್ಮ ಭಾರತವು ಅಧಿಕೃತವಾಗಿ ಸರ್ವಭೌಮ, ಸಮಾಜವಾದಿ, ಧರ್ಮನಿರಪೇಕ್ಷ, ಪ್ರಜಾಸತ್ತಾತ್ಮಕ ಗಣರಾಜ್ಯವಾಯಿತು.
ಗಣರಾಜ್ಯ ಎಂದರೆ ದೇಶದ ಆಡಳಿತಾತ್ಮಕ ಶಕ್ತಿ ರಾಜನಲ್ಲಿ ಇರುವುದಿಲ್ಲ, ಅದು ಜನರಲ್ಲಿರುತ್ತದೆ ಎಂಬ ಅರ್ಥ. ಈ ಕಾರಣದಿಂದಲೇ ಗಣರಾಜ್ಯೋತ್ಸವವು ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಹೃದಯವಾಗಿದೆ.
1930ರ ಜನವರಿ 26ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ “ಪೂರ್ಣ ಸ್ವರಾಜ್ಯ” ಘೋಷಣೆ ಮಾಡಿತು. ಈ ದಿನವೇ ಬ್ರಿಟಿಷ್ ಆಡಳಿತದಿಂದ ಸಂಪೂರ್ಣ ಸ್ವಾತಂತ್ರ್ಯ ಪಡೆಯುವ ನಿರ್ಧಾರವನ್ನು ರಾಷ್ಟ್ರದ ಮುಂದೆ ಘೋಷಿಸಲಾಯಿತು.
ಆ ಐತಿಹಾಸಿಕ ಹೋರಾಟಕ್ಕೆ ಗೌರವ ಸೂಚಿಸುವುದಕ್ಕಾಗಿಯೂ ಹಾಗೂ ಸಂವಿಧಾನ ಜಾರಿಗೆ ಬಂದ ದಿನವಾಗಿಯೂ ಜನವರಿ 26 ಆಯ್ಕೆಯಾಯಿತು. ಹೀಗಾಗಿ January 26 ಸ್ವಾತಂತ್ರ್ಯ ಹೋರಾಟ ಮತ್ತು ಸಂವಿಧಾನಾತ್ಮಕ ಸಾಧನೆಯ ಸಂಕೇತವಾಗಿದೆ.
ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯಮುಖ್ಯೋಪಾಧ್ಯಾಯರಾದ ಸುರೇಶ್ ಕುಂಬಾರ್ ಗಣರಾಜ್ಯೋತ್ಸವ ಕುರಿತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಡಾಕ್ಟರ್ ಬಿಆರ್ ಅಂಬೇಡ್ಕರ್, ಬಾಲ್ ಗಂಗಾಧರ್ ತಿಲಕ್, ಜವಾಹರ್ ಲಾಲ್ ನೆಹರು, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ, ನೇತಾಜಿ ಸುಭಾಷ್ ಚಂದ್ರ ಬೋಸ್, ಛತ್ರಪತಿ ಶಿವಾಜಿ, ಭಾರತ ಮಾತೆ, ಹೀಗೆ ಹಲವು ರಾಷ್ಟ್ರ ನಾಯಕರವೇಷ ಭೂಷಣಗಳನ್ನು ವಿದ್ಯಾರ್ಥಿಗಳು ಹಾಕಿಕೊಂಡು ಬಂದಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಕಾರ್ತಿಕ್ ಶೆಟ್ಟರ್, ಶ್ರೀ ವಿಶ್ವನಾಥ್ ಬಂಡಿ ಶ್ರೀಮತಿ ನಿರ್ಮಲ, ಶ್ರೀಮತಿ ಶೋಭಾ, ಶ್ರೀಮತಿ ಅರುಣ, ಶ್ರೀಮತಿ ಗಿರಿಜಾ, ಶ್ರೀಮತಿ ಮಂಜುಳಾ, ಶ್ರೀಮತಿ ಸವಿತಾ, ಶ್ರೀಮತಿ ಅನನ್ಯ ಶಾಲೆಯ ಪಾಲಕರು ಮುಖ್ಯ ಅತಿಥಿ ಸ್ಥಾನವನ್ನು ವಹಿಸಿದ್ದರು.
ಕುಮಾರಿ ಮಹಾದೇವಿ ನಿರೂಪಿಸಿದರು, ಶ್ರೀಮತಿ ಲತಾ ಗಡ್ಡದ ಸ್ವಾಗತ ಪುಷ್ಪಾರ್ಪಣೆ, ಪ್ರಾಸ್ತಾವಿಕ ನುಡಿ ನೆರವೇರಿಸಿದರು. ಹಾಗೂ ವಂದನಾರ್ಪಣೆ ಮಾಡಿದರು. ಶ್ರೀಮತಿ ರಂಜಾನ್, ಶ್ರೀಮತಿ ಲಕ್ಷ್ಮಿ, ಕುಮಾರಿ ವಿದ್ಯಾಶ್ರೀ, ಕುಮಾರಿ ಮಹಾದೇವಿ, ಶ್ರೀಮತಿ ಕವಿತಾ ಕಾರ್ಯಕ್ರಮದಲ್ಲಿದ್ದರೂ.
ನಗರದ ಶ್ರೀ ನಂದೀಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯ ಶ್ರೀ ಸುರೇಶ್ ಕುಂಬಾರ್ ಗಣರಾಜ್ಯೋತ್ಸವದ ಭಾರತದ ಪ್ರಜಾಸತಾತ್ಮಕ ವ್ಯವಸ್ಥೆಯ ಹೃದಯ ಭಾಗವಾಗಿದೆ ಎಂದು
Comments are closed.