ಕವಿ ಮಕಾನದಾರರಿಗೆ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ

0

Get real time updates directly on you device, subscribe now.

ಗದಗ. 31-ನಿರಂತರ ಪ್ರಕಾಶನದ ಮೂಲಕ ಮೌಲ್ಯಯುತ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆ ಯಾಗಿ ನೀಡುವ ಜೊತೆಗೆ ಸಾಹಿತ್ಯ ಸಂಘಟನೆ, ಯುವ ಬರಹಗಾರರಿಗೆ ಉತ್ತೇಜನ ನೀಡುತ್ತಿರುವ ಕರ್ನಾಟಕ ರಾಜ್ಯ ಸರ್ವೋತ್ತಮ ಸೇವಾ ಪುರಸ್ಕೃತ ಹಿರಿಯ ಸಾಹಿತಿ  ಎ.ಎಸ್. ಮಕಾನದಾರ ಜಿಲ್ಲಾ ರಾಜ್ಯೋತ್ಸವಪುರಸ್ಕಾರಕ್ಕೆ ಭಾಜನ ರಾಗಿದ್ದಾರೆ.                             ಕವಿ ಮಕಾನದಾರ ಅವರ ಮೂರುವರೆ ದಶಕದ ಸಾಹಿತ್ಯ ಸೇವೆ ಪರಿಗಣಿಸಿ ಗದಗ ಜಿಲ್ಲಾಡಳಿತದ ವತಿಯಿಂದ 70ನೇ ಕರ್ನಾಟಕ ರಾಜ್ಯೋತ್ಸವ ಆಚರಣೆಯ ಸುಸಂದರ್ಭದಲ್ಲಿ ಕಾನೂನು ಮತ್ತು ಸಂಸದೀಯ ಖಾತೆಗಳಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್ ಕೆ ಪಾಟೀಲ್ ಮತ್ತು ಜಿಲ್ಲೆಯ ಜನಪ್ರತಿನಿದಿಗಳು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಸಮ್ಮುಖದಲ್ಲಿ ಗೌರವ ಸಮ್ಮಾನ ಜರುಗಲಿದೆ

ಮಕಾನದಾರ ಅವರ ಅನೇಕ ಕೃತಿಗಳು ಕೊಂಕಣಿ, ಹಿಂದಿ, ತಮಿಳು, ತೆಲಗು ಬ್ಯಾರಿ, ಮಲೆಯಾಳಿ,ಇಂಗ್ಲಿಷ್, ದೇವನಾಗರಲಿಪಿ ಭಾಷೆಗಳಿಗೆ ಅನುವಾದ ಗೊಂಡಿದ್ದು, ಇತ್ತೀಚಿಗೆ ಮಹಾರಾಷ್ಟ್ರ ರಾಜ್ಯದ ಶಿವಾಜಿ ವಿಶ್ವ ವಿದ್ಯಾಲಯ, ಅಹಲ್ಯಬಾಯಿ ಹೋಳ್ಕರ್ ವಿಶ್ವ ವಿದ್ಯಾಲಯ, ವಿಜಯ ನಗರ ಶ್ರೀ ಕೃಷ್ಣ ದೇವರಾಯ ವಿಶ್ವ ವಿದ್ಯಾಲಯ, ಈ ಮೊದಲು ಕುವೆಂಪು ವಿಶ್ವವಿದ್ಯಾನಿಲಯ ಗಳ ಪಠ್ಯಗಳಲ್ಲಿಕವಿತೆ, ಗಜಲ್ ಗಳು ಪಠ್ಯ ಪುಸ್ತಕಗಳಾಗಿವೆ
ಸೂಫಿ ಸಾಹಿತ್ಯದ ಮೇರು ಕೃತಿ ವಿಶ್ವ ಭ್ರತೃತ್ವದ ಸೂಫಿ ದೂದ್ ಪೀರಾ, ಅಕ್ಕಡಿ ಸಾಲು, ಪ್ಯಾರಿ ಪದ್ಯ, ಮುತ್ತಿನ ತೆನೆ  ಮುಂತಾದ ಮಹತ್ವದ ಸಂಕಲನ ಗಳು ವಿಶ್ವದ ಪ್ರತಿಷ್ಟಿತ ಗ್ರಂಥಾಲಯ ವಾದ ಅಮೇರಿಕಾದ ಕಾಂಗ್ರೆಸ್ ಆಫ್ ಲೈಬ್ರರಿಯ ವೆಬ್ ನ ಲಿಂಕ್ ನಲ್ಲಿ ಅಳವಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು

District Rajyotsava Award for poet Makanadara

Get real time updates directly on you device, subscribe now.

Leave A Reply

Your email address will not be published.

error: Content is protected !!