ಕೋಮಲಾಪೂರ ಶಾಲೆಯ ಮುಖ್ಯ ಶಿಕ್ಷಕ  ಜಗದೀಶ ಪಾಟೀಲ್ ಅಮಾನತ್ತು

Get real time updates directly on you device, subscribe now.

ದ್ವಜಾರೋಹಣ ಮಾಡುವ ಸಂದರ್ಬದಲ್ಲಿ ಡಾ.ಬಿ.ಆರ್.ಅಂಬೇಡ್ಕರವರ ಭಾವಚಿತ್ರ ಇಡದೇ ಅವಮಾನ ಮಾಡಿದ ಕೋಮಲಾಪೂರ ಶಾಲೆಯ ಮುಖ್ಯ ಶಿಕ್ಷಕ  ಜಗದೀಶ ಪಾಟೀಲ್ ರವರನ್ನು ಡಿಡಿಪಿಐ ರವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ..

ಈ ಕುರಿತು ಆದೇಶ ಹೊರಡಿಸಿರುವ ಡಿಡಿಪಿಐ

ಜಗದೀಶ ಪಾಟೀಲ ಮುಖ್ಯಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಮಲಾಪುರ ತಾ: ಕುಕನೂರು ಜಿಲ್ಲಾ ಕೊಪ್ಪಳ ನಿಮ್ಮ ಮೇಲಿನ ಆರೋಪವು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಶಿಸ್ತು ಪ್ರಾಧಿಕಾರಿಗಳು ಹಾಗೂ ಉಪನಿರ್ದೇಶಕರು (ಆಡಳಿತ) ಶಾಲಾ ಶಿಕ್ಷಣ ಇಲಾಖೆ ಕೊಪ್ಪಳ ಶ್ರೀಶೈಲ ಎಸ್‌ ಬಿರಾದಾರ ಕರ್ನಾಟಕ ನಾಗರೀಕ ಸೇವಾ ನಿಯಮ (ವರ್ಗೀಕರಣ, ನಿಯಂತ್ರಣ & ಮೇಲನವಿ) 1957ರ ನಿಯಮ 10(1) ಅಡಿಯಲ್ಲಿ ಇಲಾಖಾ ವಿಚಾರಣೆ: ಕಾಯ್ದಿರಿಸಿ, ನನಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಆಮಾನತ್ತುಗೊಳಿಸಿ ಆದೇಶಿಸಿದೆ. ಸದರಿ ನೌಕರರು ಕರ್ನಾಟಕ ಸೇವಾ ನಿಯಮ 98 ರ ಪ್ರಕಾರ ಜೀವನಾಂಶ ಭತ್ಯೆಗೆ ಅರ್ಹರಿರುತ್ತಾರೆ. ನೀವು ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೇ ಕೇಂದ್ರಸ್ಥಾನ ಬಿಡತಕ್ಕದ್ದಲ್ಲ. ಹಾಗೂ ಸದರಿ ಆದೇಶವನ್ನು ಆವರ ಮೂಲ ಸೇವಾ ಪುಸ್ತಕದಲ್ಲಿ ನಮೂದಿಸಿ ಅವರ ದೃಢೀಕೃತ ಪ್ರತಿಯನ್ನು ಈ ಕಛೇರಿಗೆ ಸಲ್ಲಿಸಲು ಸೂಚಿಸಿದೆ ಎಂದು  ಶೈಲ ಎಸ್ ಬಿರಾದಾರ) ಉಪನಿರ್ದೇಶಕರು (ಆಡಳಿತ) ಹಾಗೂ ಶಿಸ್ತು ಪಾಧಿಕಾರಿಗಳು, ಶಾಲಾ ಶಿಕ್ಷಣ ಇಲಾಖೆ, ಕೊಪ್ಪಳ, ಆದೇಶ ಹೊರಡಿಸಿದ್ದಾರೆ

Get real time updates directly on you device, subscribe now.

Comments are closed.

error: Content is protected !!