ಅಂತರರಾಷ್ಟ್ರೀಯ ಬೂಕರ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತೆ ಬಾನು ಮುಸ್ತಾಕ್ ಕನ್ನಡದ ಹೆಮ್ಮೆ

Get real time updates directly on you device, subscribe now.


ಕನ್ನಡದ ಪ್ರಮುಖ ಲೇಖಕಿ ಎಸ್.ಕೆ. ಬಾನು ಮುಸ್ತಾಕ್ ಅವರ ‘ಹಾರ್ಟ್ ಲ್ಯಾಂಪ್’ ಕೃತಿಗೆ ವಿಶ್ವದ ಮೇರು ಸಾಹಿತ್ಯ ಪ್ರಶಸ್ತಿ 2025ರ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಒಲಿದಿದೆ. ಲಂಡನ್‌ನಲ್ಲಿ ಮಂಗಳವಾರ (ಮೇ 20) ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಕೃತಿಯ ಅನುವಾದಕರಾದ ದೀಪಾ ಭಸ್ತಿ ಅವರೊಂದಿಗೆ ಬಾನು ಮುಸ್ತಾಕ್ ಅವರು ಈ ಪ್ರಶಸ್ತಿ ಸ್ವೀಕರಿಸಿದ್ದಾರೆ. ಬಾನು ಅವರು ‘ಎದೆಯ ಹಣತೆ’ ಶೀರ್ಷಿಕೆಯಡಿ ಬರೆದಿದ್ದ ಈ ಕೃತಿಯನ್ನು ದೀಪಾ ಭಸ್ತಿಯವರು ‘ಹಾರ್ಟ್ ಲ್ಯಾಂಪ್’ ಹೆಸರಿನಲ್ಲಿ ಅನುವಾದಿಸಿದ್ದಾರೆ.
ಕನ್ನಡದ ಸಾಹಿತ್ಯಕ್ಕೆ ಸಿಕ್ಕ ಹೆಮ್ಮೆಯ ಗರಿ ಮತ್ತು ಎಲ್ಲ ಕನ್ನಡ ಮನಸ್ಸು ಗಳಿಗೆ
ಸಿಕ್ಕ ಗೆಲುವು ಎಂದು
ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನರಾದ ಬಾನು ಮುಸ್ತಾಕ್ ಹರ್ಷ ವ್ಯಕ್ತಪಡಿಸಿದ್ದಾರೆ.
ಖ್ಯಾತ ಲೇಖಕಿ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಸ್ತಾಕ್ ಸಂದರ್ಶನವೊಂದರಲ್ಲಿ ಮನ ಬಿಚ್ಚಿ ಮಾತನಾಡಿದ್ದಾರೆ ಮತ್ತು ವಿಶ್ವ ಪ್ರೇಮವನ್ನು ಮೆರೆದಿದ್ದಾರೆ.
ಮನುಷ್ಯ ಸಂಬಂಧಗಳ ಕಂದಕಗಳ ಕುರಿತು ಸೌಹಾರ್ದತೆಯ ಮುಲಾಮು ಹಚ್ಚುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ.

ಇನ್ನೊಬ್ಬರು ಸತ್ತು ಹೋಗಲಿ ಹಾಗಂತ ದ್ವೇಷ ಮಾಡುತ್ತಲೇ ಒಂದು ಸದ್ದಿಲ್ಲದ ಹಗೆ ಸಾಧಿಸುತ್ತ, ಹಗೆಯ ಹೊಗೆಯಲ್ಲಿ ಮತ್ತು ಬಂದವರಂತೆ
ಅವ ಸತ್ತು ಹೋಗಲಿ, ಅವ ಸತ್ತು ಹೋಗಲಿ ಎನ್ನುತ್ತ ನಮ್ಮಷ್ಟಕ್ಕೆ ನಾವು ವಿಷ ಕುಡಿಯುವದಿದೆಯಲ್ಲ?
ಅದು ನಮ್ಮ ವಿನಾಶಕ್ಕೆ ದಾರಿ ಮಾಡಿಕೊಡುತ್ತದೆ.
ಯಾಕೆ ನಾವು ಕೇಡನ್ನು ಬಯಸಬೇಕೆ? ಯಾಕೆ ದ್ವೇಷದ ಸಂಸ್ಕ್ರತಿಯನ್ನು ಬಿಂಬಿಸಬೇಕು ಅದರಿಂದ ನಮಗೇನು ಸಿಗುತ್ತದೆ?
ಕೆಲವು ಮತಗಳು ಸಿಗಬಹುದು, ಒಂದಿಷ್ಟು ಕಾಲ ಅಧಿಕಾರದಲ್ಲಿರಬಹುದು ಆದರೆ ಅದು ಶಾಸ್ವತನಾ?
ನಮ್ಮ ಆಲೋಚನೆಗಳು ಸೀಮಾತೀತವಾಗಿರಬೇಕು, ವಿಶ್ವ ಮಾನವ ಸಂದೇಶ ಸಾರುವಂತಿರಬೇಕು, ನಮ್ಮ ಎಲ್ಲೆಗಳನ್ನು ಕಟ್ಟಿಕೊಳ್ಳುವದು ಸುಲಭ, ಅವುಗಳನ್ನು ಕಿತ್ತು ಹಾಕಬೇಕು, ಕಲ್ಲು ಮುಳ್ಳು ಗಳ ರಗಳೆ ಯಾಕೆ ಬೇಕು?
ನಮ್ಮ ಮನಸ್ಸಿನಲ್ಲಿ ಸದಾ ಪ್ರೀತಿ, ವಿಶ್ವಾಸ, ಮನುಷ್ಯ, ಮನುಷ್ಯರ ನಡುವಿನ ಸೌಹಾರ್ದತೆ ತುಂಬಿಕೊಂಡಿರಬೇಕು ಅಂದಾಗ ಮಾತ್ರ ಬದುಕಿಗೊಂದು ಅರ್ಥ ಬರುತ್ತದೆ, ಮತ್ತು ಜೀವನ ಸುಂದರವಾಗುತ್ತದೆ ಎನ್ನುವ ಲೇಖಕಿ ಬಾನು ಮುಸ್ತಾಕ್ ತಮ್ಮ ಜೀವನದ ಅನುಭವ ಸಾರ ಮತ್ತು ತಮ್ಮ ಸುತ್ತಣ ಪರಿಸರದ ಚಿತ್ರಣವನ್ನು ಹಾರ್ಟ್ ಲ್ಯಾಂಪ್ ಎದೆಯ ದೀಪ 12 ಕಥೆಗಳಲ್ಲಿ
ಅನಾವರಣಗೊಳಿಸಿದ್ದಾರೆ.
ಬಾನು ಮುಷ್ತಾಕ್ ( ಬಾನು ಮುಷ್ತಾಕ್ , ಜನನ 1948) ದಕ್ಷಿಣ ಕನ್ನಡ. ವಕೀಲೆ ಮತ್ತು ಬರಹಗಾರ್ತಿ . ಇವರ ಕೃತಿಗಳನ್ನು ಉರ್ದು, ಹಿಂದಿ, ತಮಿಳು, ಮಲಯಾಳಂ ಮತ್ತು ಇತ್ತೀಚೆಗೆ ಇಂಗ್ಲಿಷ್ ಭಾಷೆಗಳಲ್ಲಿ ಪ್ರಕಟಿಸಲಾಗಿದೆ. 2025 ರಲ್ಲಿ, ದೀಪಾ ಭಸ್ತಿ ಅನುವಾದಿಸಿದ ಅವರ ಸಣ್ಣ ಕಥೆಗಳ ಸಂಗ್ರಹ, ಹಾರ್ಟ್ ಲ್ಯಾಂಪ್ , ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನವಾಗಿದೆ.
ಬಾನು ಮುಷ್ತಾಕ್ ಚಿಕ್ಕ ವಯಸ್ಸಿನಿಂದಲೂ ಬರವಣಿಗೆಯಲ್ಲಿ ಆಸಕ್ತಿ ಹೊಂದಿದವರು, ಮುಷ್ತಾಕ್ ತನ್ನ ಭಾವನೆಗಳು ಮತ್ತು ಅನುಭವಗಳನ್ನು ಅನ್ವೇಷಿಸಲು ಬರವಣಿಗೆಯತ್ತ ತಿರುಗಿದರು. ಅವರ ಬರವಣಿಗೆಯ ಬಹುಪಾಲು ಮಹಿಳೆಯರ ಸಮಸ್ಯೆಗಳ ಸುತ್ತ ಬರೆಯಲ್ಪಟ್ಟ ಕಥೆಗಳಾಗಿವೆ

ಬಾನು ಮುಷ್ತಾಕ್ ಅವರು ಆರು ಸಣ್ಣ ಕಥೆಗಳ ಸಂಪುಟಗಳು, ಒಂದು ಕಾದಂಬರಿ, ಪ್ರಬಂಧಗಳ ಸಂಗ್ರಹ ಮತ್ತು ಒಂದು ಕವನ ಸಂಕಲನವನ್ನು ಪ್ರಕಟಿಸಿದ್ದಾರೆ. ಅವರ ” ಕರಿ ನಾಗರಗಳು ” ಎಂಬ ಕಥೆಯನ್ನು 2003 ರಲ್ಲಿ ” ಹಸೀನಾ” ಎಂಬ ಚಲನಚಿತ್ರವಾಗಿ ಅಳವಡಿಸಿಕೊಳ್ಳಲಾಗಿದೆ.

ಮುಷ್ತಾಕ್ ಅವರ ಮೊದಲ ಪೂರ್ಣ-ಉದ್ದದ ಪುಸ್ತಕ ಇಂಗ್ಲಿಷ್‌ಗೆ ಅನುವಾದಿಸಲ್ಪಟ್ಟ ಹಾರ್ಟ್ ಲ್ಯಾಂಪ್ (ಮತ್ತು ಅದರ್ ಸ್ಟೋರೀಸ್, 2025), ಇದು ದಕ್ಷಿಣ ಭಾರತದ ಮುಸ್ಲಿಂ ಸಮುದಾಯಗಳಲ್ಲಿ ನಡೆಯುವ ಮಹಿಳಾ ಕೇಂದ್ರಿತ ಕಥೆಗಳ ಸಂಗ್ರಹವಾಗಿದೆ. ಅನುವಾದಕಿ ದೀಪಾ ಭಸ್ತಿ 2022 ರಲ್ಲಿ ಮುಷ್ತಾಕ್ ಅವರ ಕೃತಿಯನ್ನು ಇಂಗ್ಲಿಷ್‌ಗೆ ಅನುವಾದಿಸಲು ಪ್ರಾರಂಭಿಸಿದರು. ಸತತವಾಗಿ 1990 ಮತ್ತು 2023 ರ ನಡುವೆ ಮುಷ್ತಾಕ್ ಪ್ರಕಟಿಸಿದ ಎಲ್ಲಾ ಕಥೆಗಳಿಂದ ಭಸ್ತಿ ಹಾಗೂ ಲೇಖಕಿ ಬಾನು ಮುಸ್ತಾಕ್ ಸೇರಿಕೊಂಡು ಸಂಪುಟದ ಹನ್ನೆರಡು ಕಥೆಗಳನ್ನು ಆಯ್ಕೆ ಮಾಡಿದರು.

ಬೂಕರ್ ಇಂಟರ್ನ್ಯಾಷನಲ್ ನ್ಯಾಯಾಧೀಶರ ಅಧ್ಯಕ್ಷ ಮ್ಯಾಕ್ಸ್ ಪೋರ್ಟರ್, ಮಾತನಾಡಿ
ಕಥೆಗಳು ಸ್ತ್ರೀವಾದಿಗಳಾಗಿದ್ದರೂ ಮತ್ತು “ಪಿತೃಪ್ರಭುತ್ವದ ವ್ಯವಸ್ಥೆಗಳು ಮತ್ತು ಪ್ರತಿರೋಧದ ಅಸಾಧಾರಣ ಖಾತೆಗಳನ್ನು ಒಳಗೊಂಡಿವೆ”, ಮೊದಲನೆಯದಾಗಿ ಅವು “ದೈನಂದಿನ ಜೀವನದ ಮತ್ತು ವಿಶೇಷವಾಗಿ ಮಹಿಳೆಯರ ಜೀವನದ ಸುಂದರ ಖಾತೆಗಳಾಗಿವೆ” ಎಂದು ಹೇಳಿದರು. ಸ್ವರವು ಶಾಂತದಿಂದ ಹಾಸ್ಯದವರೆಗೆ ಬದಲಾಗುತ್ತದೆ, ಆದರೆ ದೃಷ್ಟಿ ಸ್ಥಿರವಾಗಿದೆ” ಎಂದು ದಿ ಗಾರ್ಡಿಯನ್ ಕಾಮೆಂಟ್ ಮಾಡಿದೆ
ಮತ್ತು ಅದನ್ನು “ಅದ್ಭುತ ಸಂಗ್ರಹ” ಎಂದು ಕರೆದಿದೆ. ಶೀರ್ಷಿಕೆ ಕಥೆಯು ಮುಷ್ತಾಕ್ ಅವರ ಜೀವನದಲ್ಲಿ ಮದುವೆ, ಮಾತೃತ್ವ ಮತ್ತು ಮನೆಕೆಲಸದೊಂದಿಗೆ ಹೋರಾಡುತ್ತಿದ್ದಾಗ, ಅವರು ಸೀಮೆಎಣ್ಣೆಯಲ್ಲಿ ತಮ್ಮನ್ನು ತಾವು ಸುರಿದುಕೊಂಡಾಗ ನಡೆದ ಘಟನೆಯನ್ನು ಪ್ರತಿಬಿಂಬಿಸುತ್ತದೆ. ಕಥೆಯಲ್ಲಿ, ನಾಯಕಿಯ ಮಕ್ಕಳು ಮಧ್ಯಪ್ರವೇಶಿಸಿ, ಅವಳನ್ನು ಪ್ರೀತಿಸಲಾಗುತ್ತದೆ ಮತ್ತು ಅರ್ಥಮಾಡಿಕೊಳ್ಳಲಾಗುತ್ತದೆ ಎಂದು ನೆನಪಿಸುತ್ತಾರೆ. ಇದು ಅದ್ಭುತ ಮತ್ತು ಹೃದಯ ಸ್ಪರ್ಶಿ ಕಥೆಯಾಗಿದೆ

ಮೇ 2025 ರಲ್ಲಿ, ಹಾರ್ಟ್ ಲ್ಯಾಂಪ್ 2025 ರ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು ಬಾನು ಮುಷ್ತಾಕ್ ತಮ್ಮ ಕೃತಿಯನ್ನು ಬಹುಮಾನಕ್ಕೆ ನಾಮನಿರ್ದೇಶನ ಮಾಡಿದ ಮೊದಲ ಕನ್ನಡ ಭಾಷೆಯ ಬರಹಗಾರರಾಗಿದ್ದರು. ದೀಪಾ ಭಸ್ತಿ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಅನುವಾದಕಿ ಮತ್ತು ಇದು ಬಹುಮಾನವನ್ನು ಗೆದ್ದ ಮೊದಲ ಸಣ್ಣ ಕಥಾ ಸಂಕಲನವಾಗಿದೆ.
ಲೇಖಕಿ ಬಾನು ಮುಸ್ತಾಕ್ ಕುರಿತು
——————————————-
೧೯೮೦ ರ ದಶಕದಿಂದಲೂ, ಮುಷ್ತಾಕ್ ಕರ್ನಾಟಕದಲ್ಲಿ “ಮೂಲಭೂತವಾದ ಮತ್ತು ಸಾಮಾಜಿಕ ಅನ್ಯಾಯಗಳನ್ನು” ದುರ್ಬಲಗೊಳಿಸಲು ಕೆಲಸ ಮಾಡುವ ಕಾರ್ಯಕರ್ತ ಚಳುವಳಿಗಳಲ್ಲಿ ತೊಡಗಿಸಿಕೊಂಡವರು.

2000 ರಲ್ಲಿ, ಮುಷ್ತಾಕ್ ಮತ್ತು ಅವರ ಕುಟುಂಬದ ವಿರುದ್ಧ “ಮುಸ್ಲಿಂ ಮಹಿಳೆಯರು ಮಸೀದಿಗಳಿಗೆ ಪ್ರವೇಶಿಸುವ ಹಕ್ಕಿನ ಪ್ರತಿಪಾದನೆಗೆ” ಪ್ರತಿಕ್ರಿಯೆಯಾಗಿ ಮೂರು ತಿಂಗಳ “ಸಾಮಾಜಿಕ ಬಹಿಷ್ಕಾರ “ವನ್ನು ಘೋಷಿಸಿದರು.

2000 ದ ದಶಕದ ಆರಂಭದಲ್ಲಿ, ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್‌ಗಿರಿಯಲ್ಲಿರುವ ಸಿಂಕ್ರೆಟಿಕ್ ದೇವಾಲಯಕ್ಕೆ ಮುಸ್ಲಿಮರು ಭೇಟಿ ನೀಡುವುದನ್ನು ತಡೆಯುವ ಪ್ರಯತ್ನಗಳನ್ನು ಪ್ರತಿಭಟಿಸಿ ಮುಷ್ತಾಕ್ ನಾಗರಿಕ ಸಮಾಜ ಗುಂಪು ಕೋಮು ಸೌಹಾರ್ದ ವೇದಿಕೆಯನ್ನು ಸೇರುವ ಮೂಲಕ ಸಕ್ರೀಯವಾಗಿ ಭಾಗಿಯಾಗುತಿದ್ದರು.
ಪ್ರಶಸ್ತಿಗಳು
——————–

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1999)
ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ
ದೀಪಾ ಭಸ್ತಿ ಅವರ ಹಸೀನಾ ಮತ್ತು ಇತರ ಕಥೆಗಳ ಅನುವಾದಕ್ಕಾಗಿ ೨೦೨೪ ರ ಪೆನ್ ಇಂಗ್ಲಿಷ್ ಅನುವಾದ ಪ್ರಶಸ್ತಿ
ದೀಪಾ ಭಸ್ತಿ ಅವರಿಂದ ಅನುವಾದಿಸಲಾದ ಹಾರ್ಟ್ ಲ್ಯಾಂಪ್ ಕಾದಂಬರಿಗೆ ೨೦೨೫ ರ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಗಳು ಲಭಿಸಿವೆ.
ಅಭಿನಂದನೆಗಳನ್ನು ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗಣ್ಯರು
————————————-
ಕನ್ನಡದ ಹೆಸರಾಂತ ಲೇಖಕಿ ಬಾನು ಮುಷ್ತಾಕ್ ಅವರು ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನರಾಗಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಅನೇಕರು ಅಭಿನಂದನೆ ಸಲ್ಲಿಸಿದ್ದಾರೆ.

‘ಅಂತರರಾಷ್ಟ್ರೀಯ ಬೂಕರ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾಗಿರುವ ಕನ್ನಡದ ಹೆಮ್ಮೆಯ ಲೇಖಕಿ ಬಾನು ಮುಷ್ತಾಕ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಇದು ಕನ್ನಡ, ಕನ್ನಡಿಗ ಮತ್ತು ಕರ್ನಾಟಕ ಸಂಭ್ರಮಿಸುವ ಹೊತ್ತು. ಈ ನೆಲದ ಸೌಹಾರ್ದತೆ, ಜಾತ್ಯತೀತತೆ ಮತ್ತು ಸೋದರತ್ವದ ನಿಜ ಮೌಲ್ಯಗಳನ್ನು ಮೈಗೂಡಿಸಿಕೊಂಡು ಬರೆಯುತ್ತಿರುವ ಬಾನು ಮುಸ್ತಾಕ್ ಅವರು ಕನ್ನಡದ ಹಿರಿಮೆಯ ಬಾವುಟವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿ ನಮಗೆಲ್ಲ ಗೌರವ ತಂದುಕೊಟ್ಟಿದ್ದಾರೆ. ಅವರು ಇನ್ನಷ್ಟು ಕಾಲ ಸತ್ವಯುತವಾಗಿ ಬರೆಯುತ್ತಾ ಕನ್ನಡದ ಕಂಪನ್ನು ಜಗದಗಲಕ್ಕೆ ಪಸರಿಸುತ್ತಾ ಇರಲಿ ಎಂದು ಹಾರೈಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

 

ಯಾಕೆ ದ್ವೇಷದ ಸಂಸ್ಕ್ರತಿಯನ್ನು ಬಿಂಬಿಸಬೇಕು ಅದರಿಂದ ನಮಗೇನು ಸಿಗುತ್ತದೆ?
———————————–

ಇನ್ನೊಬ್ಬರು ಸತ್ತು ಹೋಗಲಿ ಹಾಗಂತ ದ್ವೇಷ ಮಾಡುತ್ತಲೇ ಒಂದು ಸದ್ದಿಲ್ಲದ ಹಗೆ ಸಾಧಿಸುತ್ತ, ಹಗೆಯ ಹೊಗೆಯಲ್ಲಿ ಮತ್ತು ಬಂದವರಂತೆ
ಅವ ಸತ್ತು ಹೋಗಲಿ, ಅವ ಸತ್ತು ಹೋಗಲಿ ಎನ್ನುತ್ತ ನಮ್ಮಷ್ಟಕ್ಕೆ ನಾವೆಲ್ಲ ದ್ವೇಷದ ವಿಷ ಕುಡಿಯುವದಿದೆಯಲ್ಲ?
ಅದು ನಮ್ಮ ವಿನಾಶಕ್ಕೆ ದಾರಿ ಮಾಡಿಕೊಡುತ್ತದೆ.
ಯಾಕೆ ನಾವು ಕೇಡನ್ನು ಬಯಸಬೇಕೆ? ಯಾಕೆ ದ್ವೇಷದ ಸಂಸ್ಕ್ರತಿಯನ್ನು ಬಿಂಬಿಸಬೇಕು ಅದರಿಂದ ನಮಗೇನು ಸಿಗುತ್ತದೆ?
ಕೆಲವು ಮತಗಳು ಸಿಗಬಹುದು, ಒಂದಿಷ್ಟು ಕಾಲ ಅಧಿಕಾರದಲ್ಲಿರಬಹುದು ಆದರೆ ಅದು ಶಾಸ್ವತನಾ?
ನಮ್ಮ ಆಲೋಚನೆಗಳು ಸೀಮಾತೀತವಾಗಿರಬೇಕು, ವಿಶ್ವ ಮಾನವ ಸಂದೇಶ ಸಾರುವಂತಿರಬೇಕು, ನಮ್ಮ ಎಲ್ಲೆಗಳನ್ನು ಕಟ್ಟಿಕೊಳ್ಳುವದು ಸುಲಭ, ಅವುಗಳನ್ನು ಕಿತ್ತು ಹಾಕಬೇಕು, ಕಲ್ಲು ಮುಳ್ಳು ಗಳ ರಗಳೆ ಯಾಕೆ ಬೇಕು?

ಬಾನು ಮುಸ್ತಾಕ್
ಖ್ಯಾತ ಕಥೆಗಾರರು
ಹಾಗೂ
ಅಂತರರಾಷ್ಟ್ರೀಯ
ಬೂಕರ್ ಪ್ರಶಸ್ತಿ ಪುರಸ್ಕೃತರು

 

ಅಲ್ಲಾವುದ್ದೀನ ಯಮ್ಮಿ
ಪತ್ರಕರ್ತರು
ಕುಕನೂರು
9972517886

Get real time updates directly on you device, subscribe now.

Comments are closed.

error: Content is protected !!