ಕೆ.ವಿಕ್ರಮ್ ರಾವ್ ಅವರಿಗೆ ಕೆಯುಡಬ್ಲ್ಯೂಜೆ ನುಡಿನಮನ

Get real time updates directly on you device, subscribe now.

ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟಕ್ಕೆ ಸುಧೀರ್ಘ ಅವಧಿಗೆ ಅಧ್ಯಕ್ಷರಾಗಿ, ಕ್ರಿಯಾಶೀಲ ಸಂಘಟಕರಾಗಿ ಸೇವೆ ಸಲ್ಲಿಸಿದ್ದ ಕೆ.ವಿಕ್ರಮರಾವ್ ಅವರಿಗೆ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಬೆಂಗಳೂರು ಘಟಕದ ಸತ್ಯನಾರಾಯಣ, ನರೇಂದ್ರ ಪಾರಿಕಟ್, ದೇವರಾಜ್, ಶರಣು, ಹಿರಿಯ ಪತ್ರಕರ್ತರಾದ ರಾಯಚೂರು ವೆಂಕಟಸಿಂಗ್, ಚನ್ನಬಸವ, ಯಾದಗಿರಿ ಸಂಜೀವ ರಾವ್ ಕುಲಕರ್ಣಿ, ಸ್ತ್ರೀಜಾಗೃತಿ ಶೋಭಾ, ಶಶಿಕಲಾ, ಶಂಭುಲಿಂಗ ಮತ್ತಿತರರು ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!