ಡಾ. ಶ್ರಾವಣಿ ಕೆ.ಎಸ್. ಇವರಿಗೆ ಚಿನ್ನದ ಪದಕ ಪದವಿ ಪ್ರಧಾನ
ಕೊಪ್ಪಳ, ಮೇ ೦೬ – ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಕೊಪ್ಪಳದ ಕೌಮಾರಭೃತ್ಯ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿನಿ ಡಾ. ಶ್ರಾವಣಿ. ಕೆ. ಎಸ್ ಇವರು ೨೦೨೫ ನೇ ಶೈಕ್ಷಣಿಕ ವರ್ಷದ ರಾಜೀವ ಗಾಂಧಿ ವಿಶ್ವವಿದ್ಯಾಲಯ ಪರೀಕ್ಷೆಯಲ್ಲಿ ರಾಜ್ಯದಲ್ಲಿಯೇ ಅತ್ಯಧಿಕ ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ಆದ್ದರಿಂದ ಡಾ. ಶ್ರಾವಣಿ. ಕೆ. ಎಸ್ ಇವರಿಗೆ ೨೭ ನೇ ರಾಜೀವ ಗಾಂಧಿ ವಿಶ್ವವಿದ್ಯಾಲಯದ ಪದವಿ ಪ್ರಧಾನ ಸಮಾರಂಭದಲ್ಲಿ ಚಿನ್ನದ ಪದಕವನ್ನು ದಿನಾಂಕ ೦೬-೦೫-೨೦೨೫ ರಂದು ಪ್ರಧಾನಿಸಲಾಯಿತು.
ಡಾ. ಶ್ರಾವಣಿ. ಕೆ. ಎಸ್ ಇವರ ಸಂಶೋಧನೆ ಹಾಗೂ ವೈದ್ಯ ಕಲಿಕಾ ತರಬೇತಿಯು ಡಾ. ಸೂರ್ಯನಾರಾಯಣ ಮತ್ತು ಡಾ. ರಾಧಿಕಾ ಇಂಜಮುರಿ ಇವರುಗಳ ಮಾರ್ಗದರ್ಶನದಲ್ಲಿ ನಡೆದಿದೆ. ಇದಲ್ಲದೇ ಮಹಾವಿದ್ಯಾಲಯದ ಕ್ರಿಯಾ ಶಾರೀರ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಾದ ಡಾ.ಸೌರಭಾ ಭಟ್ ೨ನೇ ರ್ಯಾಂಕ್ ಹಾಗೂ ಡಾ.ಪಲ್ಲಭಿ ಮಂಜರಿ ೬ನೇ ರ್ಯಾಂಕ್ನ್ನು ಪಡೆದಿದ್ದಾರೆ. ಶಲ್ಯ ತಂತ್ರ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಾದ ಡಾ. ಅರ್ಚನಾ.ಎಂ.ಪಿ ೭ನೇ ರ್ಯಾಂಕ್ ಹಾಗೂ ಡಾ.ಎಸ್. ವೈಷ್ಣವಿ ೧೦ ನೇ ರ್ಯಾಂಕ್, ಪಂಚಕರ್ಮ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿನಿ ಡಾ. ಶ್ವೇತಾ ಅಂಗಡಿ ೭ನೇ ರ್ಯಾಂಕ್ ಮತ್ತು ಕೌಮಾರಭೃತ್ಯ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿ ಡಾ. ಡಿ. ದೀಪಕ ೮ನೇ ರ್ಯಾಂಕ್ನ್ನು ರಾಜೀವ ಗಾಂಧಿ ವಿಶ್ವವಿದ್ಯಾಲಯ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸುವುದರ ಮೂಲಕ ಯಶಸ್ವಿಗೆ ಪಾತ್ರರಾಗಿದ್ದಾರೆ. ಈ ಕ್ಷಣವು ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದ್ದು ಇವರ ವಿಶಿಷ್ಟ ಸಾಧನೆಗೆ ಮಹಾವಿದ್ಯಾಲಯದ ಚೇರಮನ್ರಾದ ಸಂಜಯ ಕೊತಬಾಳ ಹಾಗೂ ಪ್ರಾಂಶುಪಾಲರಾದ ಡಾ. ಮಹಾಂತೇಶ ಸಾಲಿಮಠ ಹಾರ್ದಿಕ ಅಭಿನಂದನೆಗಳನ್ನು ತಿಳಿಸಿ, ಶುಭಾಶಯಗಳನ್ನು ಕೋರಿದ್ದಾರೆ.