ನಗರಸಭೆ ಸ್ಥಾಯಿ ಸಮಿತಿ ನೂತನ ಅಧ್ಯಕ್ಷ ಬಸಯ್ಯ ಹಿರೇಮಠಗೆ ಸನ್ಮಾನ

ಕೊಪ್ಪಳ,: ನಗರಸಭೆ ಸ್ಥಾಯಿ ಸಮಿತಿ ನೂತನ ಅಧ್ಯಕ್ಷರಾಗಿ ಬಸಯ್ಯ ಹಿರೇಮಠ ಅವರು ಸೋಮವಾರ ದಂದು ಆಯ್ಕೆಯಾದರು. ಮಂಗಳವಾರ ಸಂಜೆ ನಗರಸಭೆ ಸ್ಥಾಯಿ ಸಮಿತಿ ನೂತನ ಅಧ್ಯಕ್ಷರಾದ ಬಸಯ್ಯ ಹಿರೇಮಠ ಅವರಿಗೆ ಜಂಗಮ ಸಮಾಜ ವತಿಯಿಂದ ಕೊಪ್ಪಳದ ಹೊಸಪೇಟೆ ರಸ್ತೆಯಲ್ಲಿರುವ ಶ್ರೀ ರೇಣುಕಾಚಾರ್ಯರ ಮಂದಿರದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜಂಗಮ ಸಮಾಜ ಗೌರವಧ್ಯಕ್ಷರಾದ ಕೊಟ್ರಬಸಯ್ಯ ಹಿರೇಮಠ, ನಿರ್ದೇಶಕರಾದ ವಿಜಯಕುಮಾರ್ ವಸ್ತ್ರದ, ಶಿವಕುಮಾರ್ ಹಿರೇಮಠ, ಪಂಪಯ್ಯ ಹಿರೇಮಠ, ಮುಖಂಡರಾದ ಸದಾಶಿವಯ್ಯ ಹಿರೇಮಠ, ಮಹಾಂತಯ್ಯ ಶಾಸ್ತ್ರಿ, ದಯಾನಂದ, ಕುಮಾರ್ ಸಮರ್ಥ ಹಿರೇಮಠ ಸೇರಿದಂತೆ ಇನ್ನೂ ಅನೇಕ ಸಮಾಜದ ಮುಖಂಡರು ಇದ್ದರು.