ಗಂಗಾವತಿಯ ಬಸ್ ನಿಲ್ದಾಣದ ವೃತ್ತದಲ್ಲಿ, ಮಂಗಳೂರಿನಲ್ಲಿ ಜರುಗಿದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿರವರ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿ ಆರೋಪಿಗಳನ್ನು ಕೂಡಲೇ ಬಂಧಿಸಿ ನ್ಯಾಯ ಕೊಡಿಸಬೇಕಾಗಿ ಆಗ್ರಹಿಸಲಾಯಿತು.
ಪ್ರತಿಭಟನೆಯಲ್ಲಿ ಶಾಸಕ ಗಾಲಿ ಜನಾರ್ಧನ ರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷರು ಬಸವರಾಜ್ ದಡೇಸುಗೂರು, ಮಾಜಿ ಕಾಡಾ ಅಧ್ಯಕ್ಷರಾದ ತಿಪ್ಪೇರುದ್ರಸ್ವಾಮಿ, ನಗರಮಂಡಲ ಅಧ್ಯಕ್ಷರಾದ ಕಾಶಿನಾಥ್ ಚಿತ್ರಗಾರ, ಮುಖಂಡರಾದ ಮನೋಹಗೌಡ ಹೇರೂರು, ಯಮನೂರು ಚೌಡ್ಕಿ, ಚನ್ನವೀರನ ಗೌಡ್ರು, ಚಂದ್ರು ಹೀರೋರು, ವೀರೇಶ್ ಸೂಳೆಕಲ್, ನಾಗರಾಜ್ ಚಳಗೇರಿ, ರಮೇಶ್ ಹೊಸಮಲಿ, ಪಂಪಣ್ಣ ನಾಯಕ್, ಅರ್ಜುನ್ ನಾಯಕ್, ದುರ್ಗಪ್ಪ ದಳಪತಿ, ವಿರೂಪಾಕ್ಷ ಹೇರೂರು, ಮಂಜುನಾಥ್ ಗೊಂದಿ, ಜಿಲಾನ್ ಪಾಷ ಖಾದ್ರಿ, ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.