
ಚಾರಣಗಳಿಂದ ಮನುಷ್ಯನಿಗೆ ಪಿಜಿಕಲ್ ಫಿಟ್ನ್ಯಸ್ ದೊರೆಯುತ್ತದೆ-ರಾಮ್ಎಲ್. ಅರಸಿದ್ಧಿ




ಕೊಪ್ಪಳ,ಏ,೨೧;- ಚಾರಣಗಳಿಂದ ಮನುಷ್ಯನಿಗೆದೈಹಿಕ ಸಾಮರ್ಥ್ಯತೆ ಹೆಚ್ಚಿಸುವುದರ ಜೊತೆಗೆ ಸಾಮಾನ್ಯ ಜ್ಞಾನ ಹೆಚ್ಚಾಗುತ್ತದೆ ಎಂದು ಕೊಪ್ಪಳ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ರಾಮ್ಎಲ್. ಅರಸಿದ್ಧಿಯವರು ಹೇಳಿದರು.
ಅವರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕೊಪ್ಪಳ ಚಾರಣ ಬಳಗದಿಂದ ಪಾಲ್ಕಿಗುಂಡು ಅಶೋಕನ ಶಾಸನ ವೀಕ್ಷಣೆ ಮತ್ತು ಸಾಹಸ ಕಾರ್ಯಕ್ರಕ್ಕೆ ಚಾಲನೆ ನೀಡಿ ಮಾತನಾಡಿದರು. ಮನೆಯಲ್ಲಿ ಮೋಬೈಲ್, ಟೀವ್ಹಿ ನೋಡುತ್ತಾ ಕಾಲ ಕಳೆಯುವ ಬದಲು ಇಂತಹ ಚಾರಣಗಳನ್ನು ಮಾಡಿದಾಗ ಮನಸ್ಸು ಹಗುರವಾಗುತ್ತದೆ, ಸುತ್ತಲಿನ ಪರಿಸರದ ಜ್ಞಾನದೊರೆಯುತ್ತದೆ. ರಜಾದಿಗಳನ್ನು ಮನೆಯಲ್ಲಿಕುಳಿತು ಸಮಯ ವೈರ್ಥ ಮಾಡುವ ಬದಲು ನೈಸರ್ಗಿಕ ಚಾರಣಗಳಲ್ಲಿ ಭಾಗವಹಿಸುವುದರಿಂದಆರೋಗ್ಯ ಸುಧಾರಣೆಯಾಗುತ್ತದೆ ಎಂದರು.
ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್ರವರು ಪಾಲ್ಕಿಗುಂಡು ಶಾಸನದೊಂದಿಗೆ ಅಶೋಕನ ಕಾಲದ ಚರಿತ್ರೆಯನ್ನು ವಿವರಿಸುತ್ತಾ ಮೌರ್ಯರ ಕಾಲದಲ್ಲೇ ಈ ಕೊಪ್ಪಳ ಖಜಾನೆ ಕೇಂದ್ರವಾಗಿತ್ತು. ಕುಪಣ ಎನ್ನುವ ಮುನಿ ಖಜಾನೆ ಅಧಿಕಾರಿಯಾಗಿದ್ದ. ಕುಪಣನ ಕಾಲದಲ್ಲಿ ಅವರದೇ ಹೆಸರಿನ ಮೇಲೆ ಈ ಗ್ರಾಮ ಗುರುತಿಸಿಕೊಂಡಿತ್ತುಎಂದರು.
ಉಪನ್ಯಾಸಕಡಾ.ರಾಜು ಹೊಸಮನಿಯವರು ಮಾತನಾಡಿದರು.ಯುವ ಸಬಲೀಕರಣ ಮತ್ತು ಕ್ರೀಡಾಇಲಾಖೆಯ ಸಹಾಯಕ ನಿರ್ದೇಶಕರಾದ ವಿಠ್ಠಲ್ ಜಾಬಗೌಡರ್ ಮಾತನಾಡಿಇಂತಹ ಕಾರ್ಯಕ್ರಮಗಳಿಗೆ ಇಲಾಖೆ ಸದಾ ಸಹಕಾರ ನೀಡುತ್ತದೆ.ಅದನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದರು.ಇಲಾಖೆಯ ಕೋಚ್ಗಳಾದ ವಿಶ್ವನಾಥಕರ್ಲಿ, ದೀಪಾಅವರುಚಾರಣಕ್ಕೆ ಮಾರ್ಗದರ್ಶನ ಮಾಡಿದರು.ಕೊನೆಗೆ ಡಾ|| ವಿಜಯಕುಮಾರ ಸುಂಕದ್ರವರು ವಂದಿಸಿದರು.ಚಾರಣವು ಶಿಲ್ಪಾ ಗ್ರ್ಯಾಂಡ್ ಹೋಟೆಲ್ ಹಿಂಭಾಗದಿಂದ ಪ್ರಾರಂಭಗೊಂಡು ಪಾಲ್ಕಿಗುಂಡು ಅಶೋಕನ ಶಾಸನ ವೀಕ್ಷಿಸಿ ಕೊನೆಗೆ ಮರ್ದನಲಿ ದರ್ಗಾದ ಕೆಳಭಾಗದಲ್ಲಿ ಮುಕ್ತಾಯವಾಯಿತು.ಈ ಚಾರಣದಲ್ಲಿ ಸುಮಾರು ತೊಂಬತ್ತಕ್ಕೂ ಅಧಿಕ ಜನರು ಭಾಗವಹಿಸಿದ್ದರು.
Comments are closed.