ಯುವ ಪೀಳಿಗೆಗೆ ಜಾನಪದ ತರಬೇತಿ ಅತ್ಯವಶ್ಯಕ – ಗೊಲ್ಲಹಳ್ಳಿ ಶಿವಪ್ರಸಾದ್









ನಾವು ಕರಿದರೆ ನಮಗೆ ಇಷ್ಟವಾದವರನ್ನ, ಆಪ್ತರನ್ನ, ಸ್ನೇಹಿತರನ್ನ ಹಾಗೂ ಬಂದು ಬಳಗದವರನ್ನ ಕರೆಯಬಹುದು. ಆದರೆ ಗಿಡದ ಮೇಲೆ ಕುಳಿತ ಪಕ್ಷಿಗಳಾಗಲಿ, ಜೀವಕೋಟಿಗೆ ಸಂಬಂಧಿಸಿದ ಸಸ್ತನಿಗಳಾಗಲಿ ಕರೆದರೆ ಅವರ ಬಂದುಗಳನ್ನ ಮಾತ್ರ ಕರಿಯಲ್ಲ ಇಡೀ ಜಗತ್ತಿನ್ನೆ ಕರೆಯುತ್ತವೆ. ಹಾಗಾಗಿ ಈ ಕಾರ್ಯಕ್ರಮಕ್ಕೆ ಗಿಡ-ಗಿಡಕ ಕೂತು ಕೈ ಮಾಡಿ ಕರೀತಾವ.. ಹಾಡುವ ಹಕ್ಕಿ ಬಳಗ ಎಂಬ ಶೀರ್ಷಿಕೆಯನ್ನು ತೆಗೆದುಕೊಂಡು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಜಾನಪದ ಅಕಾಡೆಮಿ ಇವತ್ತಿನ ದಿನಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ವಿಶಿಷ್ಟ ಶಿರ್ಷಿಕೆ ಕೋಡುವುದರ ಮುಕಾಂತರ ಕಾರ್ಯಕ್ರಮ ಮಾಡುತ್ತ ಬಂದಿದ್ದು, ಚಾಮರಾಜನಗರದಲ್ಲಿ `ಮತೀಗಲ ಧರಣಿಸೋ ಮಹಾದೇವ’ ಎನ್ನುವ ಶೀರ್ಷಿಕೆ ನೀಡಿ ಕಾರ್ಯಕ್ರಮ ಮಾಡಿದೇವು. ಹಾಗೆಯೇ ಕೋಲಾರದಲ್ಲಿ `ನಾದವಾದಿಸೇ ಮನಸೇ ನಾದವಾದಿಸೆ’ ಎಂದು, ಚಿತ್ರದುರ್ಗದಲ್ಲಿ `ಕಿಲಾರಿ ಕಲರವ’ ಎಂದು ಹಾಗೂ ತುಮಕೂರು ವಿಶ್ವವಿದ್ಯಾಲಯದಲ್ಲಿ `ವಿದ್ಯಾರ್ಥಿಗಳ ಕಡೆ ನಮ್ಮ ನಡೆ’ ಎನ್ನುವಂತಹ ವಿಶೇಷ ಶೀರ್ಷಿಕೆಗಳನ್ನ ನೀಡುತ್ತಾ ಕಾರ್ಯಕ್ರಮ ಮಾಡುತ್ತಾ, ಇಂದು ಕೊಪ್ಪಳದಲ್ಲಿ `ಗಿಡ-ಗಿಡಕ ಕೂತು ಕೈ ಮಾಡಿ ಕರಿತಾವ’ ಎನ್ನುವಂತಹ ವಿಶೇಷ ಶೀರ್ಷಿಕೆ ನೀಡಿದ್ದೇವೆ ಎಂದರು.
ಇವತ್ತು ಸಮಾಜದಲ್ಲಿ ರಿಯಾಲಿಟಿ ಇಲ್ಲದಿರುವ ಶೋಗಳನ್ನ, ರಿಯಾಲಿಟಿ ಶೋಗಳು ಎಂದು ನಾವು ಕರಿತಾ ಇದ್ದೇವೆ. ಯಾವ ಕಡೆ ನಮ್ಮ ನಡೆ ಪ್ರಾರಂಭವಾಗಿದೆ ಎಂದರೆ ರಿಯಾಲಿಟಿ ಇಲ್ಲದನ್ನ ನಾವೆ ಮಾತನಾಡಿ, ಜನರನ್ನ ಒಪ್ಪಿಸುವ ಕೆಲಸವಾಗುತ್ತಿದೆ. ಇದು ಮುಂದಿನ ದಿನಮಾನಗಳಲ್ಲಿ ಬಹಳ ಆತಂಕಾರಿ ವಾತವರಣ ಸೃಷ್ಟಿ ಮಾಡುತ್ತೆದೆ. ಇದನ್ನು ತಪ್ಪಿಸಲು ಇಂತಹ ಕಾರ್ಯಕ್ರಮಗಳನ್ನು ಮಾಡುವುದು ಅತ್ಯವಶ್ಯಕವಾಗಿದೆ. ಮುಂದಿನ ದಿನಮಾನಗಳಲ್ಲಿ ಸಂಬಂಧಗಳನ್ನ ಸಾಲದ ರೂಪದಲ್ಲಿ ತರಬೇಕಾಗುತ್ತದೆ ಎನ್ನುವ ಆತಂಕ ನಮ್ಮನ್ನ ಕಾಡುತ್ತಿದೆ. ಸಂಬಂಧಗಳು ಎನ್ನುವುದು ಬಹಳ ದೋಡ್ಡದ್ದಾಗಿದ್ದು, ಅವುಗಳನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ ಎಂದು ಹೇಳಿದರು.
ಸಾಹಿತಿ ಡಾ. ಸಿದ್ದಲಿಂಗಪ್ಪ ಕೊಟ್ಟೆಕಲ್ ಅವರು “ಕೊಪ್ಪಳ ಪರಿಸರದ ಜನಪದ ಭಾಷಾ ವೈಶಿಷ್ಟತೆ” ವಿಷಯದ ಕುರಿತು ಉಪನ್ಯಾಸ ನೀಡಿ, ಜನಪದ ಎಂದರೆ, ಒಂದು ಭಾಗವಾಗಿದ್ದು, ಜನಪದ ಸಾಹಿತ್ಯ, ಜನಪದ ಸಂಗೀತ, ಜನಪದ ಸಂಸ್ಕೃತಿ, ಜನಪದ ಊಟೋಪಚಾರಗಳು, ಜನಪದ ಉಡುಗೆ-ತೊಡುಗೆಗಳು, ಜನಪರ ವಾದ್ಯಗಳು, ಇವೆಲ್ಲವುಗಳ ಸಮಗ್ರವಾದುದೇ ಜಾನಪದ. ಸಿಂಪಿ ಲಿಂಗಣ್ಣ ಮತ್ತು ದ.ರಾ ಬೇಂದ್ರ ರವರು ಹಳ್ಳಿ-ಹಳ್ಳಿಗಳಿಂದ ಅನೇಕ ಹಾಡುಗಳು, ಕಥೆಗಳು, ಅನೇಕ ಅಂತಿ ಪದಗಳನ್ನು ಸಂಗ್ರಹ ಮಾಡುವ ಮೂಲಕ ಜನಪದ ಉಳುವಿಕೆಗೆ ಶ್ರಮಿಸಿದ್ದಾರೆ. ಜನಪದ ವಿಷಯಗಳ ಬಗ್ಗೆ ಅಧ್ಯಾಯನ ಹೆಚ್ಚಾಗಿ ನಡೆಯಲಿ. ಕೊಪ್ಪಳ ಭಾಗದಲ್ಲಿ ಕಡಿಮೆ ಅಕ್ಷರದಲ್ಲಿ ಬರುವ ಶಬ್ಧಗಳ ಬಳಕೆ ಮಾಡಲಾಗುತ್ತದೆ. ಕೊಪ್ಪಳ ಪರಿಸರ ಭಾಷೆಯು ವಿಶಿಷ್ಟವಾಗಿದ್ದು, ಅದನ್ನು ನಾವು ತಿಳಿದುಕೊಂಡು ಮುಂದುವರೆಸಿಕೊಂಡು ಹೋಗಬೇಕು ಎಂದು ವಿವರವಾಗಿ ಮಾತನಾಡಿದರು.
ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರಾದ ಡಾ. ಜೀವನಸಾಬ್ ವಾಲಿಕಾರ್ ಬಿನ್ನಾಳ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ, ಗಿಡ, ಗಿಡಕ ಕೂತು ಕೈ ಮಾಡಿ ಕರೀತಾವ.. ಎನ್ನುವ ವಿಶೇಷ ಶೀರ್ಷಿಕೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಜಾನಪದ ಅಕಾಡೆಮಿಯ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದು ಈ ವರ್ಷದ ಮೊದಲನೆಯ ಕಾರ್ಯಕ್ರಮ. ಇಂತಹ ವಿವಿಧ ಶೀರ್ಷಿಕೆಯ ಕಾರ್ಯಕ್ರಮಗಳನ್ನ ಕರ್ನಾಟಕದ ಸುಮಾರು 12 ರಿಂದ 15 ಜಿಲ್ಲೆಗಳಲ್ಲಿ ಹಮ್ಮಿಕೊಂಡಿದೆ. ಶಿವರಾಜ ಎಸ್. ತಂಗಡಗಿ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಬಳಿಕ ಇಂತಹ ಕಾರ್ಯಕ್ರಮಗಳು ನಮ್ಮ ಭಾಗದಲ್ಲಿ ನಡೆಯಲು ಸಾಧ್ಯವಾಗಿದೆ ಮತ್ತು ವಿವಿಧ ಅಕಾಡೆಮಿಗಳಿಗೂ ನಮ್ಮ ಭಾಗದ ಜನರು ಸದಸ್ಯರಾಗಲು ಅವಕಾಶ ಸಿಕ್ಕಿದ್ದು, ಕರ್ನಾಟಕದ ಇತಿಹಾಸದಲ್ಲಿ ಕೊಪ್ಪಳ ಜಿಲ್ಲೆಯಿಂದ ಸುಮಾರು 12 ಜನ ಸದಸ್ಯರನ್ನು ವಿವಿಧ ಅಕಾಡೆಮಿಗೆ ನೇಮಿಸಿರುವ ಕೀರ್ತಿ ಸಚಿವರಿಗೆ ಸಲ್ಲುತ್ತದೆ ಎಂದರು.
ಕನ್ನಡ ನಾಡಿನ ಅಸ್ಮಿಯತೆ ಎಂದರೆ ಅದು ಜನಪದ. ಜಾನಪದ ತಾಯಿ ತನ್ನೋಡಲೊಳಗೆ ಹಲವಾರು ಬಹುತ್ವವನ್ನು, ಸಾಮರಸ್ಯವನ್ನು, ಸೌಂದರ್ಯವನ್ನು, ಎಲ್ಲದಕ್ಕೂ ಮಿಗಿಲಾಗಿ ಸಹೋದರತ್ವವನ್ನು ಹಾಗೂ ಕೂಡಿ ಬಾಳುವುದನ್ನು ತನ್ನ ಒಡಲಿನೊಳಗೆ ಹೋದಗಿಸಿಕೋಂಡಿದೆ. ಇಂತಹ ಜಾನಪದ ಸಂಸ್ಕೃತಿಯನ್ನ ನಾಡಿನುದ್ದಕ್ಕು ಬಿತ್ತರಿಸಲು ಬಹುದೊಡ್ಡ ಅಕಾಡೆಮಿ ಕರ್ನಾಟಕ ರಾಜ್ಯದಲ್ಲಿ ಆರಂಭವಾಗಿದೆ ಎಂದು ಹೇಳಿದರು.
ಶ್ರೀ ಗವಿಸಿದ್ಧೇಶ್ವರ ಬಿ.ಇಡಿ ಮಹಾವಿದ್ಯಾಲಯದ ಪ್ರಾಚಾರ್ಯರು ಡಾ. ಎಸ್.ಬಿ. ಕಂಬಾರ ಅವರು ಅಧ್ಯಕ್ಷತೆ ವಹಿಸಿದ್ದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಭೀಮವ್ವ ಶಿಳ್ಳೆಕ್ಯಾತರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪ್ರೊ. ಅಲ್ಲಮಪ್ರಭು ಬೆಟ್ಟದೂರು ಮತ್ತು ಎ.ಎಮ್.ಮದರಿ ಅವರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರಾದ ಮೆಹಬೂಬ ಕಿಲ್ಲೆದಾರ, ಕರ್ನಾಟಕ ಜಾನಪದ ಪರಿಷತ್ ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ಹಿರಿಯ ಕಲಾವಿಧ ಶರಣಪ್ಪ ವಡಿಗೇರಿ ಸೇರಿದಂತೆ ಕನ್ನಡ ಜಾನಪದ ಪರಿಷತ್ ಕೊಪ್ಪಳ ಜಿಲ್ಲಾಧ್ಯಕ್ಷರಾದ ಮಂಜುನಾಥ ಗೊಂಡಬಾಳ, ಕರ್ನಾಟಕ ಚಲಚಿತ್ರ ಅಕಾಡೆಮಿ ಸದಸ್ಯರಾದ ಸಾವಿತ್ರಿ ಮುಜಮದಾರ ಸೇರಿದಂತೆ ಹಾಡು ಹಕ್ಕಿ ಬಳಗದ ಹಾಗೂ ವಾದ್ಯ ವೃಂದದವರು ಉಪಸ್ಥಿತರಿದ್ದರು.
Comments are closed.