ಗಂಗಾವತಿ: ಆರೋಪಿತರ ಜಾಮೀನು ಅರ್ಜಿಗಳ ವಜಾ

Get real time updates directly on you device, subscribe now.

: ಜಾಮೀನು ಕೋರಿ ಆರೋಪಿತರು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಗಂಗಾವತಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ವಜಾಗೊಳಿಸಿದ್ದಾರೆ.
 ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಗುನ್ನೆ ನಂ 298/2024 ಕಲಂ ಅಡಿಯಲ್ಲಿ ದಾಖಲಾದ ಪ್ರಕರಣದ ಸಾರಾಂಶದಂತೆ ಸಂಗಾಪೂರ ಗ್ರಾಮದ ನಿವಾಸಿಯಾದ ಗಾಯಾಳು ಸಿದ್ದಪ್ಪ ತಂದೆ ಮಾರ್ತಂಡಪ್ಪ ಇತನು 2024ರ ಡಿಸೆಂಬರ್ 28 ರಂದು ರಾತ್ರಿ 9 ಗಂಟೆಗೆ ತಮ್ಮ ಸಂಬಂಧಿಕರಿಗೆ ಗಂಗಾವತಿ ಬಸ್ಸ ನಿಲ್ದಾಣಕ್ಕೆ ಬಿಟ್ಟು ಬರಲು ತಮ್ಮೂರಿನ ಮಹೆಬೂಬ ಇತನ ಆಟೋದಲ್ಲಿ ತಮ್ಮ ಸಂಬAಧಿಕರನ್ನು ಕರೆದುಕೊಂಡು ತಾನು ಮತ್ತು ತನ್ನ ಗೆಳಯ ಅಶ್ರಫ್ ಅಲಿ ಕೂಡಿಕೊಂಡು ಗಂಗಾವತಿಗೆ ಬಂದು, ನಂತರ ರಾತ್ರಿ ಊರಿಗೆ ವಾಪಸ್ಸು ಹೋಗುವಾಗ ಆರೋಪಿತರಾದ ವಂಶಿ, ಶುಕುರ್‌ಸಾಬ, ಸುದೀಪ್, ಸೂರಿ @ ಸುರೇಶ ಪ್ರದೀಪ್, ಮಹೇಶ, ಕುಮಾರ್ @ ಕುಮ್ಮ್ಯಾ ಇತರೆ ಆರೋಪಿತರಾರ ಮೇಘರಾಜ, ಗುರುಪಾದ ಮತ್ತು ಅಶೋಕ ಎಲ್ಲಾರೂ ಸೇರಿಕೊಂಡು ಪ್ರಕರಣದ ಗಾಯಾಳು ಸಿದ್ದಪ್ಪ ಹೋಗುತ್ತಿದ್ದ ಅಟೋವನ್ನು ತಡೆದು ನಿಲ್ಲಿಸಿ ಕೊಲೆ ಮಾಡುವ ಉದ್ದೇಶದಿಂದ ಆತನ ಮೇಲೆ ಭೀರ್ ಬಾಟಲಿ ಮತ್ತು ಚಾಕುವಿನಿಂದ ಭೀಕರವಾಗಿ ಹಲ್ಲೆ ಮಾಡಿ ಭಾರಿ ರಕ್ತಗಾಯಗೊಳಿಸಿದ್ದು ಇರುತ್ತದೆ. ಈ ಆರೋಪಿತರು ಸಧ್ಯ ನ್ಯಾಯಾಂಗ ಬಂಧನದಲ್ಲಿರುತ್ತಾರೆ. ಆರೋಪಿ ಗುರುಪಾದ ಮತ್ತು ಅಶೋಕ ಅವರು ತಲೆ ಮರೆಸಿಕೊಂಡಿದ್ದು ಇರುತ್ತದೆ.
ಈ ಆರೋಪಿತರು ಜಾಮೀನು ಕೋರಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗಂಗಾವತಿ ಅವರಲ್ಲಿ ಜಾಮೀನು ಅರ್ಜಿಗಳನ್ನು ಸಲ್ಲಿಸಿದ್ದು, ಅದಕ್ಕೆ ಅಭಿಯೋಜನೆ ಪರವಾಗಿ ತಕಾರರುಗಳನ್ನು ಸಲ್ಲಿಸಿದ್ದು, ಜಾಮೀನು ಅರ್ಜಿಗಳ ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯಕ ಇವರು 2025ರ ಜನವರಿ 15ರಂದು ಆರೋಪಿತರ ಜಾಮೀನು ಅರ್ಜಿಗಳನ್ನು ವಜಾಗೊಳಿಸಿರುತ್ತಾರೆ. ಅಭಿಯೋಜನೆ ಪರವಾಗಿ ಸರ್ಕಾರಿ ಅಭಿಯೋಕರಾದ ನಾಗಲಕ್ಷ್ಮೀ ಎಸ್ ಇವರು ವಾದ ಮಂಡಿಸಿರುತ್ತಾರೆ ಎಂದು ಗಂಗಾವತಿ ಸರ್ಕಾರಿ ಅಭಿಯೋಕರ ಕಾರ್ಯಾಲಯದ ಪ್ರಕಟನೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!