ಕೊಪ್ಪಳ : ಕರ್ನಾಟಕ ಮುಸ್ಲಿಂ ಯುನಿಟಿಗೆ ಜಿಲಾನ್ ಜಿಲ್ಲಾ ಅಧ್ಯಕ್ಷ
ಕೊಪ್ಪಳ: ನಗರದ ಮುಸ್ಲಿಂ ಯುವ ಮುಖಂಡ ಮಹಮದ್ ಜೀಲಾನ್ ಕಿಲ್ಲೇದಾರ್ ಅವರನ್ನು ಬಾಗಲಕೋಟ ಕೇಂದ್ರ ಕಚೇರಿ ಹೊಂದಿರುವ ರಾಜ್ಯಮಟ್ಟದ ಕರ್ನಾಟಕ ಮುಸ್ಲಿಂ ಯೂನಿಟಿಯ ಕೊಪ್ಪಳ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾದ ಮಹಮದ್ ಜೀಲಾನ್ ಕಿಲ್ಲೇದಾರ್ ಅವರಿಗೆ ನೇಮಕಾತಿ ಆದೇಶ ಪತ್ರ ನೀಡಿ ರಾಜ್ಯಾಧ್ಯಕ್ಷರಾದ ಜಬ್ಬಾರ್ ಕಲಬುರ್ಗಿ ಅವರು ಸನ್ಮಾನಿಸಿದರು. ಈ ವೇಳೆ ಬಾಗಲಕೋಟ ಜಿಲ್ಲಾ ಅಧ್ಯಕ್ಷ ಅಬ್ದುಲ್ ರಜಾಕ್ ತಟಗಾರ್, ಕಿತ್ತೂರು ಕರ್ನಾಟಕ ಸಂಚಾಲಕ ಹಾಗೂ ಬಾಗಲಕೋಟ ಜಿಲ್ಲಾ ವಕ್ಷ ಬೋರ್ಡ್ ಅಧ್ಯಕ್ಷ ಮೆಹಬೂಬ್ ಸರ್ಕಾವಸ್, ರಾಜ್ಯ ಸದ್ಯಸರಾದ ಅಲ್ತಾಫ್ ಕಲಬುರ್ಗಿ, ಹುನಗುಂದ ಪುರಸಭೆ ಅಧ್ಯಕ್ಷ ಪರ್ವೇಜ್ ಖಾಜಿ, ಹುನಗುಂದ ತಾಲೂಕ ಕೆ. ಎಂ. ಯು. ಅಧ್ಯಕ್ಷ ಮೈನುದ್ದೀನ್ ದನ್ನೂರ್, ಬಾಗಲಕೋಟ ಜಿಲ್ಲಾ ಕೆ. ಎಂ. ಯು ಯುವ ಘಟಕದ ಅಧ್ಯಕ್ಷ ಇಮಾಮ ಕರಡಿ, ಕೊಪ್ಪಳ ಜಿಲ್ಲೆಯ್ ಅಬ್ದುಲ್ ಅಜಿಜ್, ಅಬ್ದುಲ್ ಗಫಾರ್, ಆಸೀಫ್ ಬಾಯ್, ಕುಷ್ಟಗಿ ಪಾರುಕ್ ಚೌದ್ರಿ ಉಪಸ್ಥಿತರಿದ್ದರು.
Comments are closed.