ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾಲಯ ಮಹಿಳೆಯರ ವ್ಹಾಲಿಬಾಲ್ ಸ್ಪರ್ಧೆಗೆ ಆಯ್ಕೆ

Get real time updates directly on you device, subscribe now.

ಕೊಪ್ಪಳ ಜ. ೮: ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾಲಯಗಳ ಮಹಿಳೆಯರ ವ್ಹಾಲಿಬಾಲ್ ಪಂದ್ಯಾಟಗಳು ದಿನಾಂಕ ೦೭-೦೧-೨೦೨೫ ರಿಂದ ೧೧-೦೧-೨೦೨೫ರವರೆಗೆ ತಮಿಳುನಾಡಿನ ಜೆಪ್ಪಿಯಾರ್ ವಿಶ್ವವಿದ್ಯಾಲಯ, ಚೆನ್ನೈದಲ್ಲಿ ಜರುಗಲಿದೆ. ಸದರಿ ಪಂದ್ಯಾಟಕ್ಕೆ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ ಬಿ.ಎ. ಅಂತಿಮ ವ?ದ ವಿದ್ಯಾರ್ಥಿನಿ ಅನಿತಾ ಹೆಚ್, ಬಿ.ಎಸ್ಸಿ ಅಂತಿಮ ವ?ದ ವಿದ್ಯಾರ್ಥಿನಿ ಚಂದ್ರಿಕಾ ಮತ್ತು ಬಿ.ಎ. ಅಂತಿಮ ವ?ದ ವಿದ್ಯಾರ್ಥಿನಿ ಸುಜಾತ ಇವರುಗಳು ವಿಜಯನಗರ ಶ್ರೀ ಕೃ?ದೇವರಾಯ ವಿಶ್ವವಿದ್ಯಾಲಯದ ತಂಡದ ಆಟಗಾರರಾಗಿ ಆಯ್ಕೆಯಾಗಿರುತ್ತಾರೆ. ಸದರಿ ವಿದ್ಯಾರ್ಥಿನಿಯರಿಗೆ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಡಾ. ಆರ್ ಮರೇಗೌಡ ಮತ್ತು ಶ್ರೀ ಗವಿಸಿದ್ಧೇಶ್ವರ ಟ್ರಸ್ಟಿನ ಎಲ್ಲಾ ಆಡಳಿತ ಮಂಡಳಿಯ ಸದಸ್ಯರು, ಪ್ರಾಚಾರ್ಯರಾದ ಡಾ. ಚನ್ನಬಸವ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ವಿನೋದ ಸಿ. ಮುದಿನಬಸನಗೌಡರ ಹಾಗೂ ಕಾಲೇಜಿನ ಸಮಸ್ತ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!