ರಸ್ತೆ ಬದಿಯ ಹೋಟಲ್ ಗೆ ನುಗ್ಗಿದ ಲಾರಿ: ೧೦ ಬೈಕ್ ಗಳು ಜಖಂ
ಕೊಪ್ಪಳ : ರಸ್ತೆ ಬದಿಯ ಹೋಟಲ್ ಗೆ ಏಕಾಏಕಿ ಲಾರಿಯೊಂದು ನುಗ್ಗಿದ್ದರಿಂದ ೧೦ಕ್ಕೂ ಹೆಚ್ಚು ಬೈಕ್ ಗಳು ಜಖಂ ಆದ ಘಟನೆ ಕುಕನೂರು ತಾಲೂಕಿನ ಬನ್ನಿಕೊಪ್ಪ ಗ್ರಾಮದ ಬಳಿ ನಡೆದಿದೆ. ಬೆಳಗಾವಿ ಮೂಲದ ಲಾರಿ ನಿಯಂತ್ರಣ ತಪ್ಪಿ ಹೋಟಲಗೆ ನುಗ್ಗಿದ್ದರಿಂದ ಜನ ಜೀವ ಉಳಿಸಿಕೊಳ್ಳಲು ಓಡಿಹೋಗಿದ್ದಾರೆ. ಲಾರಿ ಚಾಲಕನ್ನು ಗ್ರಾಮಸ್ಥರು ಹಿಡಿದು ಹಾಕಿದ್ದಾರೆ. ಹೊಸಪೇಟೆ ಯಿಂದ ಗದಗಿನತ್ತ ಲಾರಿ ಹೊರಟಿತ್ತು. ಕುಕನೂರು ಪೋಲಿಸ್ ಠಾಣಾವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Comments are closed.