ಶ್ರೀನಿವಾಸ್ ಗುಪ್ತಾ ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಕಾರ್ಯಕ್ರಮ

0

Get real time updates directly on you device, subscribe now.

ಕೊಪ್ಪಳ : ಕೊಪ್ಪಳ ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಅಧ್ಯಕ್ಷರಾಗಿ ನೇಮಕವಾಗಿರುವ ಶ್ರೀನಿವಾಸ ಗುಪ್ತಾ ದಿ. ೨೧ರಂದು ಬೆಳಿಗ್ಗೆ ಅಧಿಕಾರ ಸ್ವೀಕಾರ ಮಾಡಲಿದ್ದಾರೆ.
ಕರ್ನಾಟಕದ ಘನ ಸರ್ಕಾರವು ನನ್ನನ್ನು ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷನನ್ನಾಗಿ ನೇಮಕ ಮಾಡಿರುತ್ತದೆ, ಅದರ ನಿಮಿತ್ಯ ನಾಳೆ ದಿನಾಂಕ ೨೧-೧೦-೨೦೨೪ ಸೋಮವಾರದಂದು ಬೆಳಗ್ಗೆ ೧೧:೩೦ ಕ್ಕೆ ಶ್ರೀ ಗಣೇಶ ಹಾಗೂ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿಯ ಪೂಜೆಯೊಂದಿಗೆ ಪದಗ್ರಹಣ ಕಾರ್ಯಕ್ರಮ ವನ್ನು ಹೊಸಪೇಟೆ ರಸ್ತೆಯಲ್ಲಿರುವ ಕೊಪ್ಪಳ ನಗರಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ (ಗೋವನಕೊಪ್ಪ ಆಸ್ಪತ್ರೆಯ ಹತ್ತಿರ) ಆಯೋಜಿಸಲಾಗಿದೆ, ಆದ್ದರಿಂದ ಈ ಕಾರ್ಯಕ್ರಮಕ್ಕೆ ತಾವುಗಳು ಆಗಮಿಸಿ ಶುಭ ಕೋರಬೇಕಾಗಿ ಶ್ರೀನಿವಾಸ ಗುಪ್ತಾ ವಿನಂತಿಸಿಕೊಂಡಿದ್ಧಾರೆ.

ಭಾಗ್ಯನಗರ ಹಾಗೂ ಕೊಪ್ಪಳದ ಮುಖ್ಯ ರಸ್ತೆಯಲ್ಲಿ ಅವರ ಅಭಿಮಾನಿಗಳು, ಹಿತೈಷಿಗಳು, ಬೆಂಬಲಿಗರು ಶುಭಕೋರುವ ಬ್ಯಾನರ್ ಅಳವಡಿಸಿದ್ದಾರೆ.

Get real time updates directly on you device, subscribe now.

Leave A Reply

Your email address will not be published.

error: Content is protected !!