ಗಂಗಾವತಿ ರಾಷ್ಟ್ರೀಯ  ಬಸವದಳ ನೇತೃತ್ವದಲ್ಲಿ ಕಲ್ಯಾಣ ಕ್ರಾಂತಿ  ಸಂಸ್ಮರಣೆ ಕಥಾಪಠಣ

Get real time updates directly on you device, subscribe now.

ಅಕ್ಟೋಬರ್ 3 ,ಗುರುವಾರದಿಂದ ಜರುಗಲಿದೆ. ಕ್ರಿ.ಶ.12ನೇ – ಶತಮಾನದಲ್ಲಿ
ಕಲ್ಯಾಣಕ್ರಾಂತಿ ಅಪೂರ್ವ – ದಿಟ್ಟ ಹೆಜ್ಜೆಯ ಹೋರಾಟದ ಫಲಶೃತಿ ಭಾರತ ದೇಶದ
ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಇಬ್ಬರು ವರ್ಣೀಯರ ನಡುವೆ ನಂಟಸ್ಥಿಕೆ,
ಬಸವಣ್ಣನವರ ನೇತೃತ್ವದಲ್ಲಿ ಜರುಗಿತ್ತು. ಆಘಟನೆಗೆ ಬಸವಣ್ಣನವರನ್ನು ಗಡಿಪಾರು
ಮಾಡಲಾಯಿತು. ಹರಳಯ್ಯ, ಮಧುವರಸ, ಶೀಲವಂತರನ್ನು ಎಹೋಟಿ ಶಿಕ್ಷೆಗೆ ಗುರಿಪಡಿಸಲಾಯಿತು.
ಈ ಎಲ್ಲಾ  ಬಲಿದಾನವಾದುದು ಸ್ವಾರ್ಥಕ್ಕಾಗಿ ಅಲ್ಲ ಮತ್ತು ಹೆಣ್ಣು ಹೊನ್ನು ಮಣ್ಣಿನ
ಆಸಿಗೆಅಲ್ಲ ಇವೆಲ್ಲವೂ ಸಮಾನತೆಯನ್ನು ಸಾಧಿಸಲಿಕ್ಕೆ ಎಂಬ ಅಂಶವನ್ನು ಬಿಂಬಿಸುವ
ಉದ್ದೇಶವೇ ಕಲ್ಯಾಣ ಕ್ರಾಂತಿ ಸಂಸ್ಮರಣೆ ಕಥಾ ಪಠಣದ ಉದ್ದೇಶ.  ಅಕ್ಟೋಬರ್‌ 03 ರಿಂದ
11 ಅಕ್ಟೋಬ‌ರ್ ವರೆಗೆ ಸಂಜೆ 7 ರಿಂದ 8 ರವರೆಗೆ ಶರಣರ ಮನೆಯಲ್ಲಿ ಕಲ್ಯಾಣ ಕ್ರಾಂತಿ
ಕಥಾಪಠಣ ಜರುಗಲಿದೆ. 12ನೇ ಅಕ್ಟೋಬರ್ ದಂದು ಶನಿವಾರ ಬೆಳಿಗ್ಗೆ 9 ಗಂಟೆಗೆ ಮಂಟಪದಲ್ಲಿ
ಕಲ್ಯಾಣ ಕ್ರಾಂತಿಯ ಕಥಾ ಪಠಣ ಮಂಗಲ ಸಮಾರೂಪ ಹಾಗೂ ಬಸವ ಧರ್ಮ ವಿಜಯೋತ್ಸವ ಜರುಗಲಿದೆ.

Get real time updates directly on you device, subscribe now.

Comments are closed.

error: Content is protected !!