ರೆಡ್ ಕ್ರಾಸ್ ಸಂಸ್ಥೆಯ ಕಾರ್ಯ ಶ್ಲಾಘನೀಯ –  ಸಂಗಣ್ಣ ಕರಡಿ

Get real time updates directly on you device, subscribe now.

Redcross Koppal – ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವಿಭಾಗಮಟ್ಟದ ಕಾರ್ಯಾಗಾರದ ಸಮಾರೋಪ ಸಮಾರಂಭ

ಕೊಪ್ಪಳ

ಸಮಾಜದಲ್ಲಾಗುವ ವಿಪತ್ತುಗಳಿಗೆ ಸ್ಪಂದಿಸುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದ್ದು, ಕೊಪ್ಪಳ  ಜಿಲ್ಲೆಯಲ್ಲಿ ಅತ್ಯುತ್ತಮ ಕಾರ್ಯ ಮಾಡುತ್ತಿದೆ ಎಂದು ಮಾಜಿ ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.

ನಗರದ ಮಹಾವೀರ ಕಲ್ಯಾಣಮಂಟಪದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಮ್ಮಿಕೊಂಡಿದ್ದ ಯುವ ರೆಡ್ ಕ್ರಾಸ್ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಭಾರತೀಯ ರೆಡ್ ಕ್ರಾಸ್  ಸಂಸ್ಥೆಯು ಯುವಕರಲ್ಲಿ ಜಾಗೃತಿ ಮೂಡಿಸುವ ಸದುದ್ದೇಶದಿಂದ ಹಮ್ಮಿಕೊಂಡಿರುವ ಈ ಯುವ ಕಾರ್ಯಾಗಾರದಲ್ಲಿ ಭಾಗವಹಿಸಿರುವ ನೀವೆಲ್ಲರೂ ಪುಣ್ಯವಂತರು. ಇದನ್ನು ಸದ್ಬಳಕೆ ಮಾಡಿಕೊಂಡು ಮನಪರಿವರ್ತನೆಯೊಂದಿಗೆ  ಬೆಳೆಯಬೇಕು ಎಂದರು.

ಯಾರು ತ್ಯಾಗವನ್ನು ಮಾಡುತ್ತಾರೆ ಅವರು ಬೆಳೆಯುತ್ತಾರೆ. ಅಂಥ ತ್ಯಾಗ ಮತ್ತು ಸೇವಾ ಮನೋಭಾವನೆಯನ್ನು ರೆಡ್ ಕ್ರಾಸ್ ಕಲಿಸಿಕೊಡುತ್ತದೆ.  ದೇಶ ಪ್ರಗತಿ ಸಾಧಿಸುವುದು ಎಂದರೇ ದೇಶದೊಳಗಿರುವ ಯುವಕರು ಪ್ರಗತಿಯನ್ನು ಸಾಧಿಸಬೇಕು ಎಂದು ಕರೆ ನೀಡಿದರು.

ಭಾರತೀಯ ರೆಡ್  ಕ್ರಾಸ್ ಸಂಸ್ಥೆಯ ಕೊಪ್ಪಳದಲ್ಲಿ ಪ್ರಾರಂಭಿಸಿದ ಬ್ಲಡ್ ಬ್ಯಾಂಕ್ ಗೆ ಪರವಾನಿಗೆಯನ್ನು ಪಡೆಯುವ ಸಂದರ್ಭದಲ್ಲಿ ಕೇಂದ್ರ ಸರ್ಕಾರದಲ್ಲಿ ಶಕ್ತಿಮೀರಿ ಶ್ರಮಿಸಿದ್ದೇನೆ, ಅಂಥ ಬ್ಲಡ್ ಬ್ಯಾಂಕ್ ನಿಂದ ಇಂದು ಸಾವಿರಾರು ಜನರಿಗೆ ಜೀವ ಉಳಿಯಲು ಸಾಧ್ಯವಾಗಿದೆ ಎಂದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಶಾಖೆಯ ಉಪಸಭಾಪತಿ  ಆನಂದ ಎಸ್. ಜಿಗಜಿನ್ನಿ ಅವರು  ಮಾತನಾಡಿ, ನಾವು ನಿರೀಕ್ಷೆ ಮಾಡಿದ್ದಕ್ಕಿಂತಲೂ ಹೆಚ್ಚು ಅರ್ಥಪೂರ್ಣವಾಗಿ ಕಾರ್ಯಾಗವನ್ನು ಕೊಪ್ಪಳ ಶಾಖೆಯ ಪದಾಧಿಕಾರಿಗಳು ಮಾಡಿದ್ದಾರೆ. ಇದನ್ನು ಭಾಗವಹಿಸಿದ ಶಿಬಿರಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಮಾಜ ಸಮಾಜದ ಒಳಿತಿಗಾಗಿ ಶ್ರಮಿಸುತ್ತದೆ. ವಿಪತ್ತು ಬಂದಾಗಲೆಲ್ಲಾ ಅದು ಸ್ಪಂದಿಸುತ್ತದೆ. ಮಾನವೀಯತೆಯೇ ಅದರ ಮೂಲ ಧ್ಯೇಯ ಎಂದರು.

ಬಿಜೆಪಿ ಮುಖಂಡ ಡಾ. ಬಸವರಾಜ ಕ್ಯಾವಟರ್ ಅವರು ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆ  ಜ್ಯಾತ್ಯಾತೀತ, ಧರ್ಮಾತೀತ ಮತ್ತು ಗಡಿಯಾತೀತವಾಗಿದೆ ಎಂದರು. ಅದು ಎಲ್ಲ ಎಲ್ಲೆಗಳ  ಮೀರಿ ಮಾವೀಯತೆಗಾಗಿ ಶ್ರಮಿಸುವ ಸಂಸ್ಥೆಯಾಗಿದೆ.

ಕೊಪ್ಪಳದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಬ್ಲಡ್  ಬ್ಯಾಂಕ್ ನಿಂದಾಗಿ ಆರೋಗ್ಯ ಕ್ಷೇತ್ರದಲ್ಲಿ  ದೊಡ್ಡ ಕ್ರಾಂತಿಯಾಗಲು ಸಾಧ್ಯವಾಗಿದೆ.  ಉತ್ತಮ ಚಿಕಿತ್ಸೆ ದೊರೆಯಲು ಸಾಧ್ಯವಾಗಿದೆ ಎಂದರು.

ರಕ್ತ ಸಿಗದೆ ಇದ್ದರೆ  ಹೆಚ್ಚಿನ ಚಿಕಿತ್ಸೆಗಾಗಿ ಬೇರೆಡೆ ಕಳುಹಿಸುವ ಸ್ಥಿತಿ ಇತ್ತು. ಆದರೆ, ಈಗ ಇಲ್ಲಿಯೇ ಚಿಕಿತ್ಸೆ ದೊರೆಯುವಂತೆ ಆಗಿದೆ ಎಂದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕೊಪ್ಪಳ ಜಿಲ್ಲಾ ಶಾಖೆಯ ಸಭಾಪತಿ ಸೋಮರಡ್ಡಿ ಅಳವಂಡಿ ಅಧ್ಯಕ್ಷತೆ ವಹಿಸಿದ್ದರು.

ನಗರಸಭೆ ಉಪಾಧ್ಯಕ್ಷೆ ಅಶ್ವಿನಿ ಗದುಗಿನಮಠ, ಡಾ. ಕೃಷ್ಣ ವಿ. ಓಂಕಾರ, ಸಹಾಯಕ ಔಷಧ ನಿಯಂತ್ರಕರಾದ ವೆಂಕಟೇಶ, ಭಾರೆಕ್ರಾ ಪ್ರ ಕಾ ಡಾ. ಶ್ರೀನೀವಾಸ ಹ್ಯಾಟಿ, ಉಪಸಭಾಪತಿ ಡಾ. ಗವಿಸಿದ್ದನಗೌಡ ಪಾಟೀಲ್, ಗೌರವ ಕೋಶಾಧ್ಯಕ್ಷ ಸುಧೀರ ಅವರಾಧಿ, ನಿರ್ದೇಶಕರಾದ ಡಾ. ಚಂದ್ರಶೇಖರ ಕರಮುಡಿ, ಡಾ. ಶಿವನಗೌಡ, ಡಾ. ದಾನರಡ್ಡಿ, ಡಾ. ಮಂಜುನಾಥ ಇದ್ದರು. ನಿರ್ದೇಶಕ ರಾಜೇಶ ಯಾವಗಲ್ ಅವರು ಕಾರ್ಯಕ್ರಮ ನಿರೂಪಿಸಿದರು.

ಯೋಗ ತರಬೇತಿ – ಡಾ. ಮಂಜುನಾಥ ಸಜ್ಜನ ಮತ್ತು ಡಾ. ಭಾಗ್ಯಶ್ರೀ ಗಾಯದ ಅವರು ಎರಡು ದಿನಗಳ ಕಾಲ ಯೋಗ ತರಬೇತಿಯನ್ನು ನೀಡಿದರು. ಎರಡು ದಿನಗಳ ನಿತ್ಯವೂ ಬೆಳಗ್ಗೆ  5.30 ಕ್ಕೆ ಯೋಗ ಶಿಬಿರ ನಡೆಸಲಾಯಿತು.

ರಾಷ್ಟ್ರಧ್ವಜ ಮಹತ್ವ ಕುರಿತು ಭಾರತ ಸೇವಾ ದಳದ ಜಿಲ್ಲಾ ಶಿಕ್ಷಕ ಬಸವರಾಜ ಪತ್ರಿ ಅವರು ತಿಳಿಸಿಕೊಟ್ಟರು.

ಕೊಪ್ಪಳದಲ್ಲಿ ಯುವ ರೆಡ್ ಕ್ರಾಸ್ ಕಾರ್ಯ ನಿರೀಕ್ಷೆ  ಮೀರಿ ಯಶಸ್ವಿಯಾಗಿದೆ. ಅಚ್ಚುಕಟ್ಟಾದ ವ್ಯವಸ್ಥೆಯ ಕುರಿತು ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

            ಆನಂದ ಜಿಗಜಿನ್ನಿ ಉಪಸಭಾಪತಿಗಳು ಭಾರೆಕ್ರಾ ರಾಜ್ಯಶಾಖೆ

ಮೂರು ದಿನಗಳ ಕಾಲ ನಮಗೆ ಕಾರ್ಯಾಗಾರದಲ್ಲಿ ಅತ್ಯುತ್ತಮ ಶಿಕ್ಷಣ ದೊರೆತಿದೆ. ಮಾವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳವು ಪಾಠ ಹೇಳಲಾಗಿದೆ. ತೊಂದರೆಯಲ್ಲಿದ್ದವರಿಗೆ ಸಹಾಯ ಮಾಡುವ ಮನೋಧರ್ಮ ಬೆಳೆಸಿದ್ದಾರೆ. ಅಚ್ಚುಕಟ್ಟಾದ ವ್ಯವಸ್ಥೆ ಇತ್ತು.

Get real time updates directly on you device, subscribe now.

Comments are closed.

error: Content is protected !!
%d bloggers like this: